ನವೀನ್ ಸಜ್ಜು ಗೆಲ್ಲಬೇಕಿತ್ತು ಅಂತಾರೆ ಈ ಬಿಗ್ ಬಾಸ್ ಮಾಜಿ ಸ್ಪರ್ಧಿ

ಬಿಗ್ ಬಾಸ್ ಕನ್ನಡ ಸೀಸನ್ 6 ಮುಗಿದು, 'ಮಾರ್ಡನ್ ರೈತ' ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಶಶಿ ಕುಮಾರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಫಿನಾಲೆಯ ಕೊನೆ ಕ್ಷಣದವರೆಗೂ ಭಾರಿ ಕುತೂಹಲ ಮೂಡಿಸಿದ್ದ ಫಲಿತಾಂಶದಲ್ಲಿ ಗಾಯಕ ನವೀನ್ ಸಜ್ಜು ಗೆಲ್ಲಬಹುದು ಎಂಬ ಲೆಕ್ಕಚಾರವೇ ಹೆಚ್ಚಿತ್ತು.

ಆದ್ರೆ, ಅಂತಿಮ ಕ್ಷಣದಲ್ಲಿ ವಿಜಯಮಾಲೆ ಶಶಿ ಕೊರಳಿಗೆ ಬಿತ್ತು. ಸಹಜವಾಗಿ ಫಲಿತಾಂಶದ ನಂತರ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಅನುಪಮಾ ಗೌಡ ಅವರು ಮಾತನಾಡಿದ್ದು, ನವೀನ್ ಸಜ್ಜು ಗೆಲ್ಲಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

''ಶಶಿ ತುಂಬಾ ಚೆನ್ನಾಗಿ ಆಡಿದ್ದಾರೆ. ಎಲ್ಲ ಟಾಸ್ಕ್ ಗಳಲ್ಲೂ ಯಶಸ್ವಿಯಾಗಿದ್ರು. ಅವರು ಟಾಸ್ಕ್ ಪ್ಲೇಯರ್ ಎನ್ನಬಹುದು. ಫಿನಾಲೆಗೆ ಆಯ್ಕೆಯಾಗಿದ್ದ ಅಂತಿ ಮೂರು ಸ್ಪರ್ಧಿಗಳು ಕೂಡ ವಿನ್ನರ್ ಆಗಲು ಅರ್ಹತೆ ಹೊಂದಿದ್ದರು. ಆದ್ರೆ, ನನಗೆ ವೈಯಕ್ತಿಕವಾಗಿ ನವೀನ್ ವಿನ್ ಆಗಬೇಕಿತ್ತು'' ಎಂದು ಅನುಪಮಾ ಹೇಳಿದ್ದಾರೆ.

Anupama gowda comment on bigg boss kannada 6 winner

ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದ ಅನುಪಮಾ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಿನಿಮಾ, ಕಿರುತೆರೆ ಶೋಗಳು, ರಿಯಾಲಿಟಿ ಶೋಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಹೆಚ್ಚು ಯಶಸ್ಸು ಕಂಡ ಅನುಪಮಾ, ಈಗ 'ಮಜಾಭಾರತ' ಸೀಸನ್ 3ರ ನಿರೂಪಕಿಯಾಗಿದ್ದಾರೆ.

More from Filmibeat

English summary
Bigg boss kannada 5 contestant anupama gowda expressed her opinion on bigg boss kannada 6 winner shashi kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X