ಅಯ್ಯೋ ಸುಸೂಗೆ ಅರ್ಜೆಂಟ್ ಆಗುತ್ತಿದೆ ಎಂದ ಅನುಶ್ರೀ!
ಅನುಶ್ರೀ ಹಾಗೂ ಯೋಗೀಶ್ ಅವರು ಶ್ರದ್ಧೆಯಿಂದ ಟಾಸ್ಕ್ ನಿಭಾಯಿಸಿದ್ದಕ್ಕೆ ಖುಷಿಯಾದ ಬಿಗ್ ಬಾಸ್ ಇವರಿಬ್ಬರಿಗೂ ವಿಶೇಷ ಆತಿಥ್ಯ ನೀಡಿದರು. ಕನ್ಫೆಷನ್ ರೂಮಿಗೆ ಆಹ್ವಾನಿಸಿ ಸಮೋಸಾ ಕೊಟ್ಟರು. ಇಬ್ಬರೂ ಬಿಗ್ ಬಾಸ್ ಉಪಚಾರಕ್ಕೆ ಮಾರುಹೋದರು.
ಇದೇ ಸಂದರ್ಭದಲ್ಲಿ ಇಬ್ಬರಿಗೂ ರಹಸ್ಯ ಟಾಸ್ಕ್ ಒಂದನ್ನೂ ಕೊಟ್ಟರು. ಅದರ ಪ್ರಕಾರ ತಕ್ಕಡಿಯಲ್ಲಿ ಪ್ರತಿ ಗಂಟೆಗೂ ಸದಸ್ಯರು ಬದಲಾಗುವಂತೆ ನೋಡಿಕೊಳ್ಳಬೇಕು. ಆದರೆ ರಹಸ್ಯ ಟಾಸ್ಕ್ ವಿಚಾರನ್ನು ಮಾತ್ರ ಯಾರ ಬಳಿಯೂ ಹೇಳುವಂತಿಲ್ಲ.

ಅನುಶ್ರೀ ಹಾಗೂ ಯೋಗೀಶ್ ಅವರು ತುಲಾಭಾರ ಸೇವೆ ಮಾಡಬೇಕಾದರೆ ಒಂದಷ್ಟು ಗಮನಸೆಳೆಯುವ ಸಂಗತಿಗಳು ನಡೆದವು. ಬ್ರಹ್ಮಾಂಡ ಶರ್ಮಾ ಅವರು ತ್ರಿಕಾಲ ಜ್ಞಾನಿ ಆದರೆ ತಾನು ಸಕಾಲ ಜ್ಞಾನಿ ಎಂದು ಯೋಗೀಶ್ ಹೇಳಿಕೊಂಡರು.
ತುಂಬಾ ಹೊತ್ತು ಅನುಶ್ರೀ ತಕ್ಕಡಿಯಲ್ಲೇ ಕುಳಿತಿದ್ದ ಕಾರಣ ಅವರಿಗೆ ಪ್ರಕೃತಿಯ ಕರೆ ಬಂದಿತ್ತು. ಇದನ್ನು ಅವರು ವ್ಯಕ್ತಪಡಿಸಿದ್ದು, ಅಯ್ಯೋ ನನಗೆ ಸುಸೂಗೆ ಅರ್ಜೆಂಟ್ ಆಗುತ್ತಿದೆ ಎಂದರು. ಇದಕ್ಕೆ ಎದ್ದು ಬಿದ್ದು ನಕ್ಕಿದ್ದು ಮಾತ್ರ ಒನ್ ಅಂಡ್ ಓನ್ಲಿ ಅರುಣ್ ಸಾಗರ್. ಪಕ್ಕದಲ್ಲೇ ಕುಳಿತಿದ್ದ ಯೋಗಿ ಮಾತ್ರ ಮುಸಿಮುಸಿ ನಗುತ್ತಿದ್ದ.


Click it and Unblock the Notifications











