Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯೋ ಸುಸೂಗೆ ಅರ್ಜೆಂಟ್ ಆಗುತ್ತಿದೆ ಎಂದ ಅನುಶ್ರೀ!
ಅನುಶ್ರೀ ಹಾಗೂ ಯೋಗೀಶ್ ಅವರು ಶ್ರದ್ಧೆಯಿಂದ ಟಾಸ್ಕ್ ನಿಭಾಯಿಸಿದ್ದಕ್ಕೆ ಖುಷಿಯಾದ ಬಿಗ್ ಬಾಸ್ ಇವರಿಬ್ಬರಿಗೂ ವಿಶೇಷ ಆತಿಥ್ಯ ನೀಡಿದರು. ಕನ್ಫೆಷನ್ ರೂಮಿಗೆ ಆಹ್ವಾನಿಸಿ ಸಮೋಸಾ ಕೊಟ್ಟರು. ಇಬ್ಬರೂ ಬಿಗ್ ಬಾಸ್ ಉಪಚಾರಕ್ಕೆ ಮಾರುಹೋದರು.
ಇದೇ ಸಂದರ್ಭದಲ್ಲಿ ಇಬ್ಬರಿಗೂ ರಹಸ್ಯ ಟಾಸ್ಕ್ ಒಂದನ್ನೂ ಕೊಟ್ಟರು. ಅದರ ಪ್ರಕಾರ ತಕ್ಕಡಿಯಲ್ಲಿ ಪ್ರತಿ ಗಂಟೆಗೂ ಸದಸ್ಯರು ಬದಲಾಗುವಂತೆ ನೋಡಿಕೊಳ್ಳಬೇಕು. ಆದರೆ ರಹಸ್ಯ ಟಾಸ್ಕ್ ವಿಚಾರನ್ನು ಮಾತ್ರ ಯಾರ ಬಳಿಯೂ ಹೇಳುವಂತಿಲ್ಲ.
ಅನುಶ್ರೀ ಹಾಗೂ ಯೋಗೀಶ್ ಅವರು ತುಲಾಭಾರ ಸೇವೆ ಮಾಡಬೇಕಾದರೆ ಒಂದಷ್ಟು ಗಮನಸೆಳೆಯುವ ಸಂಗತಿಗಳು ನಡೆದವು. ಬ್ರಹ್ಮಾಂಡ ಶರ್ಮಾ ಅವರು ತ್ರಿಕಾಲ ಜ್ಞಾನಿ ಆದರೆ ತಾನು ಸಕಾಲ ಜ್ಞಾನಿ ಎಂದು ಯೋಗೀಶ್ ಹೇಳಿಕೊಂಡರು.
ತುಂಬಾ ಹೊತ್ತು ಅನುಶ್ರೀ ತಕ್ಕಡಿಯಲ್ಲೇ ಕುಳಿತಿದ್ದ ಕಾರಣ ಅವರಿಗೆ ಪ್ರಕೃತಿಯ ಕರೆ ಬಂದಿತ್ತು. ಇದನ್ನು ಅವರು ವ್ಯಕ್ತಪಡಿಸಿದ್ದು, ಅಯ್ಯೋ ನನಗೆ ಸುಸೂಗೆ ಅರ್ಜೆಂಟ್ ಆಗುತ್ತಿದೆ ಎಂದರು. ಇದಕ್ಕೆ ಎದ್ದು ಬಿದ್ದು ನಕ್ಕಿದ್ದು ಮಾತ್ರ ಒನ್ ಅಂಡ್ ಓನ್ಲಿ ಅರುಣ್ ಸಾಗರ್. ಪಕ್ಕದಲ್ಲೇ ಕುಳಿತಿದ್ದ ಯೋಗಿ ಮಾತ್ರ ಮುಸಿಮುಸಿ ನಗುತ್ತಿದ್ದ.