Don't Miss!
- News ಅಚ್ಚೇದಿನಗಳಲ್ಲ-ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಮನೆಯಲ್ಲಿ ಅನುಶ್ರೀಗೆ ವಾಂತಿಗಳು!
ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದೆ. ಮನೆಯಲ್ಲಿ ಒಳಜಗಳ, ಪಿತೂರಿ, ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವುದು, ಕುತಂತ್ರಗಳು ಹೆಚ್ಚಾಗುತ್ತಿವೆ.
ಯಾವುದೇ ದೈನಿಕ ಧಾರಾವಾಹಿಗಿಂತಲೂ ಕಡಿಮೆಯಿಲ್ಲದಂತೆ ಒಂಚೂರು ಹೆಚ್ಚಾಗಿಯೇ ತಿರುವುಗಳಿವೆ. ಬಿಗ್ ಬಾಸ್ ಕಾರ್ಯಕ್ರಮದ 14ನೇ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ. 14 ಹಾಗೂ 15ನೇ ದಿನದ ಚಿತ್ರಣ ಸೋಮವಾರ (ಏ.8) ಪ್ರಸಾರವಾಯಿತು.
ಹದಿನಾಲ್ಕನೇ ದಿನದ ಆರಂಭ 7.30ಕ್ಕೆ ಪ್ರಾರಂಭವಾಯಿತು. ಬಳಿಕ ಸ್ವಲ್ಪ ಹೊತ್ತಿಗೆಲ್ಲಾ ಅನುಶ್ರೀ ಹೊಟ್ಟೆ ಹಿಡಿದು ವಾಂತಿ ಮಾಡಿಕೊಳ್ಳಲು ಶುರುವಚ್ಚಿದರು. ಉಳಿದ ಸ್ಪರ್ಧಿಗಳು ಇದರಿಂದ ಸ್ಪಲ್ಪ ಧೃತಿಗೆಟ್ಟರಾದರೂ ಆಕೆಗೆ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯೂ ಆದರು.
ಅನುಶ್ರೀ ವಾಂತಿ ಮಾಡಿಕೊಳ್ಳುವುದರ ಜೊತೆ ಪ್ರಜ್ಞೆಯನ್ನೂ ತಪ್ಪಿ ಬಿದ್ದುಬಿಟ್ಟರು. ಇದರಿಂದ ಸ್ಪರ್ಧಿಗಳು ಕಂಗಾಲಾದರು. ಎಲ್ಲರೂ ಆಕೆಯ ಕೈ, ಕಾಲು ಉಜ್ಜಿ ಮುಖಕ್ಕೆ ನೀರು ಚುಮುಕಿಸಿ ಪ್ರಜ್ಞೆ ಬರುವಂತೆ ಮಾಡಿದರು. ಸ್ವಲ್ಪ ಹೊತ್ತಿನ ಬಳಿಕ ಅನುಶ್ರೀ ಸರಿಹೋದರು.
ಮನೆಯಲ್ಲಿ ಅಷ್ಟೆಲ್ಲಾ ಮಹಿಳಾ ಸ್ಪರ್ಧಿಗಳಿದ್ದರೂ ಆಕೆಯನ್ನು ಹಾಸಿಗೆ ತನಕ ತನ್ನ ಕೈಯಾರೆ ಹೊತ್ತುಕೊಂಡು ಸಾಗಿಸಿದ್ದು ಮಾತ್ರ ವಿನಾಯಕ ಜೋಶಿ. ಬಳಿಕ ಎಲ್ಲರೊಂದಿಗೂ ಮಾತನಾಡುತ್ತಾ ಯಾಕೋ ಅನುಶ್ರೀ ಅವರದು ನಾಟಕ ಜಾಸ್ತಿ ಆಯಿತು ಎಂದ. ಅದೇನು ನಾಟಕವೋ ಏನೋ!