Don't Miss!
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- News Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದ್ರಿಕಾಗೆ ಸಿಹಿಮುತ್ತು ಕೊಟ್ಟ ಅರುಣ್ ಸಾಗರ್
ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಚಂದ್ರಿಕಾರ ಪುನರಾಗಮನ ಸಂತಸ ತಂದಿದೆ. ಹೇಗಿದ್ದರೂ ಅವರು ಫೈನಲ್ ವರೆಗೂ ಮನೆಯಲ್ಲಿ ಇರಬಹುದು ಎಂಬುದು ಈಗಾಗಲೆ ನಿರ್ಧಾರವಾಗಿದೆ. ಕಳೆದು ಹೋಗಿದ್ದ ಗೆಳತಿಯೊಬ್ಬಳು ಅರುಣ್ ಗೆ ಮತ್ತೆ ಸಿಕ್ಕಂತಾಗಿದೆ.
ನೀವು ಏನೇನು ಮಾಡಿದಿರಿ ಎಂಬುದು ನನಗೆ ಗೊತ್ತು ಎಂದು ಚಂದ್ರಿಕಾ ಅಂದದ್ದೇ ತಡ ಬ್ರಹ್ಮಾಂಡ ಗುರುಗಳಿಗೆ ಬೆವೆತು ಹೋದರು. ಈಗೇನಪ್ಪಾ ಮಾಡುವುದು, ಇನ್ನು ಚಂದ್ರಿಕಾ ಎಷ್ಟು ದಿನ ಇರುತ್ತಾರೋ ಏನೋ ಎಂಬ ಆತಂಕದಲ್ಲಿದ್ದಾರೆ.
ರಾತ್ರಿ ಮಲಗುವ ವೇಳೆಗೆ ಅರುಣ್ ಸಾಗರ್ ಹಾಗೂ ಚಂದ್ರಿಕಾ ತುಂಬಾ ಹತ್ತಿರವಾಗಿದ್ದರು. ಚಂದ್ರಿಕಾ ಅವರಿಗೆ ಒಂದು ಮುತ್ತಿನ ಕಥೆ ಎಂದು ಸನ್ನೆಯಲ್ಲಿ ತಿಳಿಸಲು ಹೇಳಿದ. ಅದಕ್ಕೆ ಅವರು ಹಾಗೆಯೇ ಮಾಡಿ ತೋರಿಸಿದರು. ಹಂಗಲ್ಲ ಒಂದು ಮುತ್ತು ಕೊಟ್ಟು ತೋರಿಸಬೇಕು ಎಂದರು.
ಅದನ್ನೇ ತಾನು ಮಾಡಿ ತೋರಿಸುತ್ತೇನೆ ಎಂದು ಹೇಳಿ ಚಂದ್ರಿಕಾ ಹಸ್ತವನ್ನು ಚುಂಬಿಸಿದರು. ಒಟ್ಟಿನಲ್ಲಿ ಇವರಿಬ್ಬರ ಆಟ ನೋಡುತ್ತಾ ಬ್ರಹ್ಮಾಂಡ ಗುರುಗಳು ನಗುವುದೋ ಅಳುವುದೋ ಎಂಬ ಪರಿಸ್ಥಿತಿಯಲ್ಲಿದ್ದರು.
ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ವಿಜಯ್ ರಾಘವೇಂದ್ರ, ನಿಕಿತಾ, ನರೇಂದ್ರ ಬಾಬು ಶರ್ಮಾ ಹಾಗೂ ಚಂದ್ರಿಕಾ. ಉಳಿದ ಸ್ಪರ್ಧಿ ಅರುಣ್ ಸಾಗರ್ ಮಾತ್ರ ಫುಲ್ ಸೇಫ್. ಮನೆಯಲ್ಲಿ ಇನ್ನೇನು ರಾದ್ಧಾಂತ ಕಾದಿದೆಯೋ ಏನೋ?