ಕನ್ನಡ ಮಾತಾಡಿದರೆ ಕಿವಿ ಮುಚ್ಚಿಕೊಳ್ಳುವ ನಿಕಿತಾ
ನಿಮ್ಮ ಸಮಸ್ಯೆ ಏನು ಎಂಬುದನ್ನು ಶುಕ್ರವಾರ ಸುದೀಪ್ ಜೊತೆ ಹೇಳಿ. ನನ್ನ ಬಗ್ಗೆ ಜಾಸ್ತಿ ಮಾತುಕತೆ ಬೇಡ. ಸರಿಯಿರಲ್ಲ ಎಂದರು ವಾರ್ನ್ ಮಾಡಿದರು ನಿಕಿತಾ. ಇದಕ್ಕೆ ಪ್ರತಿಕ್ರಿಯಿಸಿದ ಅರುಣ್, ಇವಳಿಗೆ ಸರಿ ತಪ್ಪು ಎಂಬ ಎರಡು ಪದ ಬಿಟ್ಟರೆ ಇನ್ನೇನು ಗೊತ್ತಿಲ್ಲ ಎಂದರು.
ನಾವು ಇಷ್ಟುದಿನ ಅವಳಿಗೆ ಗೌರವ ಕೊಟ್ಟಿದ್ದಕ್ಕೆ ಅವಳಿಗೆ ಸ್ವಲ್ಪವೂ ಕನಿಕರ ಇಲ್ಲ ಎಂದು ಶರ್ಮಾ, ಚಂದ್ರಿಕಾ ಜೊತೆ ಅರುಣ್ ಬೇಸರ ವ್ಯಕ್ತಪಡಿಸ್ದಿದರು. ಕನ್ನಡದಲ್ಲಿ ಮಾತನಾಡಿದರೆ ಕಿವಿ ಮುಚ್ಚಿಕೊಳ್ಳುತ್ತಾಳೆ ಎಂದೂ ನಿಕಿತಾ ಬಗ್ಗೆ ಗೊಣಗಾಡಿದರು.
ಮನೆಯಲ್ಲಿ ಇಷ್ಟೆಲ್ಲಾ ರಾದ್ಧಾಂತವಾದ ಬಳಿಕ ನಿಕಿತಾ ಗೊಳೋ ಎಂದು ಕಣ್ಣೀರಿಗೆ ಶರಣಾದರು. ಅವರನ್ನು ವಿಜಯ್ ರಾಘವೇಂದ್ರ, ಅನುಶ್ರೀ ಸಮಾಧಾನಪಡಿಸಿದರು. ಇನ್ನೂ ನಾನು ಕನ್ನಡ ಕಲಿಯಲು ಪ್ರಯತ್ನ ಮಾಡ್ತೀನಿ. ಕಲಿತೀನಿ ಎಂದು ಹೇಳಿದರು.

ಬೆಳಗ್ಗೆ ಕೂಲಾಗಿದ್ದ ಮನೆಯ ವಾತಾವರಣ ಸಂಜೆ ವೇಳೆಗೆ ತನ್ನ ವರಸೆಯನ್ನು ಬದಲಿಸಿತು. ಸದಸ್ಯರ ನಡುವೆ ಭಾಷೆಯೆಂಬ ಗೋಡೆ ಎದ್ದು ನಿಲ್ಲಿತು. ಮನೆಯಲ್ಲಿ ಅಂತರ ಹೆಚ್ಚಾಗಲು ಇದೂ ಕಾರಣವಾಗುತ್ತಿದೆ. ಬಿಗ್ ಬಾಸ್ ಎಲ್ಲವನ್ನೂ ಗಮನಿಸುತ್ತಿದ್ದಾರೆ.
ಪ್ರಶ್ನೋತ್ತರ ಟಾಸ್ಕ್ ನಲ್ಲಿ ಕೆಲವೊಂದು ಆಸಕ್ತಿಕರ ಪ್ರಶ್ನೆಗಳು ಕೇಳಿಸಿದವು. ಅತಿಹೆಚ್ಚು ಬಾರಿ ಜಗಳ ಆಡಿದವರು ಯಾರು? ನರೇಂದ್ರ ಬಾಬು ಅವರು ಹೆಚ್ಚಾಗಿ ಮಾಡುವ ಮೂರು ಕೆಲಸಗಳು? ಹೆಚ್ಚಾಗಿ ಜಗಳವಾಡಿದರು ಯಾರು? ಮನೆಯಲ್ಲಿ ಹೆಚ್ಚು ಗೊರಕೆ ಹೊಡೆಯುವುದ್ಯಾರು? ಅತಿಹೆಚ್ಚು ಬಾರಿ ಹಾಡಿರುವ ಹಾಡು ಯಾವುದು? ನರೇಂದ್ರ ಬಾಬು ನಟಿಸಿರುವ ಚಿತ್ರ ಯಾವುದು? ಈ ರೀತಿಯ ಪ್ರಶ್ನೆಗಳಿಗೆ ಕೆಲವಕ್ಕೆ ಸರಿ, ಕೆಲವಕ್ಕೆ ತಪ್ಪು ಉತ್ತರಗಳು ಸಿಕ್ಕಿದವು.


Click it and Unblock the Notifications











