Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಪ್ರಿಲ್ 15ರಿಂದ ಸ್ಟಾರ್ ಸುವರ್ಣದಲ್ಲಿ 'ಬಯಸದೆ ಬಳಿ ಬಂದೆ'
ಅದೊಂದು ಸುಂದರ ಕಲಾಕ್ಷೇತ್ರ, ಅದರ ಒಡತಿ ನಾಟ್ಯ ವಿಶಾರದೆ ಮೀನಾಕ್ಷಿ, ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲನೇ ಮಗಳು ಕಾವ್ಯ, ತನ್ನ ಸಮಾಜ ಮತ್ತು ಕುಟುಂಬದ ನ್ಯಾಯಕ್ಕಾಗಿ ಹೋರಾಡುವ ವಕೀಲೆ. ಜೀವ, ಕನ್ನಡ ಚಲನಚಿತ್ರಗಳ ಯಶಸ್ವಿ ನಿರ್ಮಾಪಕ. ತನ್ನ 'ಜೀವ ನಿರ್ಮಾಣ ಸಂಸ್ಥೆ' ಮುಖಾಂತರ ಸದಭಿರುಚಿಯ ಕನ್ನಡ ಚಿತ್ರಗಳನ್ನು ನೀಡಬೇಕು ಎನ್ನುವುದೊಂದೆ ಇವನ ಧ್ಯೇಯ.
ಇವರಿಬ್ಬರು ಸಂದರ್ಭಗಳ ಕೈಸೆರೆಯಾಗಿ ಬಯಸದೆ ಬಳಿ ಬಂದಾಗ, ಜೀವನದಲ್ಲಿ ಉಂಟಾಗುವ ತಿರುವುಗಳೆ ಧಾರಾವಾಹಿಯ ಕತೆ. ಶ್ರೀ ಮಹತಿ ಕಂಬೈನ್ಸ್ ನಿರ್ಮಿಸುತ್ತಿರುವ ಬಯಸದೆ ಬಳಿ ಬಂದೆ ಧಾರಾವಾಹಿಯ ನಿರ್ದೇಶಕ ದೇವಾನಂದ್. ಶೀರ್ಷಿಕೆ ಗೀತೆಗೆ ವಾಸುಕಿ ವೈಭವ್ ಅವರ ಸಂಗೀತವಿದೆ. ಹರ ಹರ ಮಾಹಾದೇವ ಧಾರಾವಾಹಿ ಖ್ಯಾತಿಯ ವಿನಯ್ ಗೌಡ, ಹಲವು ವರ್ಷಗಳ ಬಳಿಕ, ಪೌರಾಣಿಕವಲ್ಲದ ಇಂದಿನ ದಿನದ ಸ್ಟೈಲಿಷ್ ಯುವಕನ ಪಾತ್ರ ಮಾಡುತ್ತಿದ್ದಾರೆ.
ದಶಕದ ಬಳಿಕ ಧಾರಾವಾಹಿ ಪ್ರಪಂಚದಲ್ಲಿ ರಾಘವೇಂದ್ರ ರಾಜ್ ಕುಮಾರ್
ಚಲನಚಿತ್ರ ನಿರ್ಮಾಪಕ ಜೀವ ಪಾತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ನಟಿ ರಕ್ಷಾ ಹೊಳ್ಳ 'ಮಿಲನ' ಧಾರಾವಾಹಿಯ ಬಳಿಕ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಯಸದೆ ಬಳಿ ಬಂದೆ ಇವರಿಬ್ಬರ ಜೀವನ -ಕಾವ್ಯದ ಕತೆ.
ಕನಸು ಕಾಣುವ ಮುಗ್ಧ ಮನಸುಗಳ ಕಥೆ 'ನನ್ ಹೆಂಡ್ತಿ ಎಂಬಿಬಿಎಸ್'
ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ಶ್ವೇತಾ ರಾವ್, ಮೈಸೂರು ಮಾಲತಿ, ಭಾಗ್ಯ, ಅನಿರುಧ್, ಸುನೀಲ್ ಸಾಗರ್, ವಿಕಾಸ್ ಮತ್ತು ಶೋಭಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋಗಳು ಸಾಮಾಜಿಕ ತಾಣಗಳಲ್ಲಿ ಜನರ ಮೆಚ್ಚುಗೆ ಗಳಿಸಿವೆ.
ರೋಲ್ಸ್ ರಾಯ್ಸ್ ಕಾರಿನಲ್ಲಿ ಬರುವ ನಾಯಕನಿಗೆ ಕಾಲ್ನಡಿಗೆಯಲ್ಲಿ ಓಡಾಡುವ ನಾಯಕಿ ಜೊತೆಯಾದಾಗ ಇವರಿಬ್ಬರ ಜೀವನ ಒಂದಾಗಲು ಹೇಗೆ ಸಾಧ್ಯ ಎನ್ನುವುದನ್ನು ಏಪ್ರಿಲ್ 15ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ನೋಡಿ.