Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಗೆ ನಟಿ ಶಾಲಿನಿ, ಶೀತಲ್ ಶೆಟ್ಟಿ ರೀಎಂಟ್ರಿ.!
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ನಟಿ ಶಾಲಿನಿ ಹಾಗೂ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ರೀಎಂಟ್ರಿ ಕೊಟ್ಟಿದ್ದಾರೆ. ಒಂದು ವಾರ ಕಾಲ ಸೀಕ್ರೆಟ್ ರೂಮ್ ನಲ್ಲಿದ್ದು ಎಲ್ಲರ 'ಡ್ರಾಮಾ' ವೀಕ್ಷಿಸಿದ ಬಳಿಕ 'ಬಿಗ್ ಬಾಸ್' ಮನೆಗೆ ಶಾಲಿನಿ ಹಾಗೂ ಶೀತಲ್ ಶೆಟ್ಟಿ ಮರು ಪ್ರವೇಶ ಮಾಡಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಶೀತಲ್ ಶೆಟ್ಟಿ ಕಾಲಿಡುತ್ತಿದ್ದಂತೆಯೇ ಕೆಲವರಿಗೆ ಖುಷಿಯಾಗಿದ್ದರೆ, ಹಲವರು 'ತಲೆ ಚಚ್ಚಿಕೊಂಡಿದ್ದು' ಸುಳ್ಳಲ್ಲ.
ಗಲಾಟೆ ಗ್ಯಾರೆಂಟಿ.!
''ಶಾಲಿನಿ ಯವರನ್ನ ವಾಪಸ್ ಕಳುಹಿಸದೆ 'ಬಿಗ್ ಬಾಸ್' ಶೀತಲ್ ಶೆಟ್ಟಿ ಯವರನ್ನ ಕಳುಹಿಸಿದ್ದಾರೆ. ಯಾಕಂದ್ರೆ, ಅವಳು ತುಂಬಾ ಸ್ಟೈಟ್ ಫಾರ್ವರ್ಡ್.! ಮುಖ ಮೂತಿ ನೋಡಲ್ಲ, ಮುಲಾಜಿಲ್ಲ'' ಅಂತ ನಟ ಮೋಹನ್ ಬಳಿ ಕೀರ್ತಿ ಕುಮಾರ್ ಹೇಳಿದರು. [ಸೀಕ್ರೆಟ್ ರೂಮ್ ಗೆ ಶೀತಲ್ ಶೆಟ್ಟಿ, ಶಾಲಿನಿ: ಮುಂದಿದೆ 'ಮಾರಿ ಹಬ್ಬ']
ಡೆವಿಲ್ ಈಸ್ ಬ್ಯಾಕ್.!
'ಡೆವಿಲ್ ಈಸ್ ಬ್ಯಾಕ್' ಅಂತ ಹೇಳುವ ಮೂಲಕ 'ಗಲಾಟೆ' ಮಾಡುವ ಮುನ್ಸೂಚನೆ ನೀಡಿದ್ದಾರೆ ಶೀತಲ್ ಶೆಟ್ಟಿ. [ಡಬಲ್ ಶಾಕ್: 'ಬಿಗ್ ಬಾಸ್' ಮನೆಯಿಂದ ಶಾಲಿನಿ, ಶೀತಲ್ ಔಟ್.!]
ಸೆಕೆಂಡ್ ಎಂಟ್ರಿ ಕೊಟ್ಟ ಶಾಲಿನಿ.!
'ಬಿಗ್ ಬಾಸ್' ಮನೆಯ ಮುಖ್ಯ ದ್ವಾರದಿಂದಲೇ ನಟಿ ಶಾಲಿನಿ ಒಳಗೆ ಬಂದರು.
ಪ್ರಥಮ್ ಪ್ರತಿಕ್ರಿಯೆ
'ಬಿಗ್ ಬಾಸ್' ಮನೆಯಲ್ಲಿ ಶಾಲಿನಿ ಹಳಸೋಗಿರುವ ಆಮ್ಲೆಟ್ ಇದ್ಹಾಗೆ, ಶೀತಲ್ ಶೆಟ್ಟಿ ಕೊಳೆತೋಗಿರುವ ಉಪ್ಪಿಟ್ಟು ಇದ್ಹಾಗೆ ಅಂತ 'ಒಳ್ಳೆ ಹುಡುಗ' ಪ್ರಥಮ್ ಹೇಳಿದರು.
ಶೀತಲ್ ಗೆ ಸೆಕೆಂಡ್ ಚಾನ್ಸ್.!
ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ವೋಟ್ ಔಟ್ ಆಗಿದ್ದರೂ, ಅವರಿಗೆ 'ಬಿಗ್ ಬಾಸ್' ಸೆಕೆಂಡ್ ಚಾನ್ಸ್ ನೀಡಿದ್ದಾರೆ.
ಡಬಲ್ ಎಲಿಮಿನೇಷನ್ ಟ್ವಿಸ್ಟ್.!
ಕಳೆದ ವಾರ 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟು ನಟಿ ಶಾಲಿನಿ ಹಾಗೂ ಶೀತಲ್ ಶೆಟ್ಟಿ ರವರನ್ನ ಕಿಚ್ಚ ಸುದೀಪ್ ಹೊರಗೆ ಕರೆದಿದ್ದರು. ಬಳಿಕ ಇಬ್ಬರನ್ನೂ 'ಬಿಗ್ ಬಾಸ್' ಮನೆಯ ಗರಾಜ್ (ಸೀಕ್ರೆಟ್ ರೂಮ್) ನಲ್ಲಿ ಇರಿಸಲಾಗಿತ್ತು. ಒಂದು ವಾರ ಎಲ್ಲರ 'ನಾಟಕ' ನೋಡಿದ್ಮೇಲೆ ಇಬ್ಬರೂ 'ಬಿಗ್ ಬಾಸ್' ಮನೆಗೆ ಮರಳಿದ್ದಾರೆ.