'ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಬಾಯ್ಬಿಟ್ಟ 'ಬಿಗ್' ಸತ್ಯ
ಹೇಳಿಕೊಳ್ಳೋಕೆ 'ಒಳ್ಳೆ ಹುಡುಗ' ಆದರೂ, ತಂಟೆಗೆ ಹೋದ್ರೆ ತರಾಟೆಗೆ ತೆಗೆದುಕೊಳ್ಳುವ ಹುಡುಗ ಪ್ರಥಮ್.
ಪ್ರಥಮ್ 'ಹೀಗೆ' ಅಂತ ಗೊತ್ತಿದ್ದರೂ, ಅವರನ್ನ ಕೆಣಕುವವರ ಸಂಖ್ಯೆ 'ಬಿಗ್ ಬಾಸ್' ಮನೆಯಲ್ಲಿ ಕಮ್ಮಿಯೇನಿಲ್ಲ. ಇದೇ ಕಾರಣಕ್ಕೆ ಅನೇಕ ಬಾರಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ದೊಡ್ಡ ರಂಪಾಟ ನಡೆದುಹೋಗಿದೆ. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]
'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಕೂಡ 'ಬಿಗ್ ಬಾಸ್' ಮನೆಗೆ ಕಾಲಿಟ್ಟು, ಪ್ರಥಮ್ ಗೆ ಪಂಚ್ ಕೊಟ್ಟು ಹೋದರು. ಈ ಘಟನೆ ನಡೆದ ಮೇಲೆ ಪ್ರಥಮ್ ಬಾಯಿಂದ ಒಂದು ದೊಡ್ಡ ಸತ್ಯ ಹೊರಬಿದ್ದಿದೆ.

ಪ್ರಥಮ್ ಬಾಯ್ಬಿಟ್ಟ ಸತ್ಯ ಏನು.?
ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಹಾಗೂ 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದ ಕುರಿತು 37ನೇ ದಿನ ನಿರ್ದೇಶಕ ಪ್ರಥಮ್ ಬಿಚ್ಚಿಟ್ಟ ಸತ್ಯವನ್ನ ಅವರ ಮಾತುಗಳಲ್ಲೇ ಓದಿರಿ....

'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮಕ್ಕೆ ಬರಬೇಕಿತ್ತು.!
''ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮಕ್ಕೆ ಬರಲು ನಾನು ಏನೆಲ್ಲ ಟ್ರೈ ಮಾಡಿದ್ದೆ ಗೊತ್ತಾ? ಹುಚ್ಚ ವೆಂಕಟ್ ಹೋಗ್ತಾನೆ ಅಂದ್ರೆ ಅವನ ಎದುರುಗಡೆ ನಾನು ಇರಬೇಕು ಅಂತ ತುಂಬಾ influence ಮಾಡಿಸಿದ್ದೆ'' - ಪ್ರಥಮ್

ಹಠಕ್ಕೆ ಬಿದ್ದಿದ್ದೆ.!
''ಇರಿಟೇಷನ್ ಅನ್ನೋ ಪದಕ್ಕೆ ಇರಿಟೇಷನ್ ಮಾಡ್ತೀನಿ ನಾನು. ಆ ಮನುಷ್ಯನ ಜೊತೆ ನಾನಿರಬೇಕು ಅಂತ ಹಠಕ್ಕೆ ಬಿದ್ದಿದ್ದೆ. ಯಾರ್ಯಾರ ಕೈಯಲ್ಲಿ ನಾನು ಫೋನ್ ಮಾಡಿಸಿದ್ದೆ ಗೊತ್ತಾ?'' - ಪ್ರಥಮ್

ಸೆಂಟ್ರಲ್ ಲೀಡರ್ಸ್ ನಿಂದ ಫೋನ್ ಮಾಡಿಸಿದ್ದೆ.!
''ನಿಜವಾಗಲೂ ಆ ಮನುಷ್ಯ ಇದ್ದ ಎಪಿಸೋಡ್ ನಲ್ಲಿ ನಾನಿರಬೇಕು ಅಂತ ಪ್ರಯತ್ನ ಪಟ್ಟಿದ್ದೆ. ಸೆಂಟ್ರಲ್ ಲೀಡರ್ಸ್ ಕೈಯಿಂದ ಫೋನ್ ಮಾಡಿಸಿದ್ದೆ'' - ಪ್ರಥಮ್

ಚಾನೆಲ್ ನವರ ಆಯ್ಕೆ...
''ಆದ್ರೆ ಚಾನೆಲ್ ನವರು ಡಿಗ್ನಿಫೈಡ್ ಆಗಿ ಯಾರ್ಯಾರನ್ನ ಬೇಕೋ, ಅವರನ್ನೇ ಆಯ್ಕೆ ಮಾಡಿಕೊಂಡರು'' - ಪ್ರಥಮ್ [ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

ಹುಚ್ಚ ವೆಂಕಟ್ ಗೂ ಪ್ರಥಮ್ ಗೂ ಆಗ್ಬರಲ್ಲ.!
ಪ್ರಥಮ್ ಗೂ ಹುಚ್ಚ ವೆಂಕಟ್ ಗೂ ಆಗ್ಬರಲ್ಲ ಎಂಬುದು ಈ ಮಾತುಗಳಲ್ಲೇ ಸ್ಪಷ್ಟ. ['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಹಳೇ ಕೋಪ ಕಾರಣ
ಹಳೇ ಕೋಪದಿಂದ 'ಬಿಗ್ ಬಾಸ್' ಮನೆಗೆ ಬಂದು ಬೇಕಂತಲೇ ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ರಾ? ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ.

'ಬಿಗ್ ಬಾಸ್-3' ಬದಲು 'ಬಿಗ್ ಬಾಸ್-4'ಗೆ ಸೆಲೆಕ್ಟ್ ಆದ ಪ್ರಥಮ್
ಹುಚ್ಚ ವೆಂಕಟ್ ಎದುರು ಇರಬೇಕು ಅಂತ 'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಯತ್ನ ಪಟ್ಟಿದ್ದ ಪ್ರಥಮ್ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಸೆಲೆಕ್ಟ್ ಆದರು.

ಹುಚ್ಚ ವೆಂಕಟ್ ವರ್ಸಸ್ ಪ್ರಥಮ್
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ಪಕ್ಕ ಹುಚ್ಚ ವೆಂಕಟ್ ಕುಳಿತಾಗ ನಡೆದ ರಾದ್ಧಾಂತದ ಸಂಪೂರ್ಣ ವೃತ್ತಾಂತ ಇಲ್ಲಿದೆ ಓದಿರಿ.... [ಅಷ್ಟಕ್ಕೂ, ಸಡನ್ನಾಗಿ ಹುಚ್ಚ ವೆಂಕಟ್ ಗೆ ಪಿತ್ತ ನೆತ್ತಿಗೇರಿದ್ದು ಯಾಕೆ.?]


Click it and Unblock the Notifications











