Don't Miss!
- News ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಬಗ್ಗೆ ನಟ ಮೋಹನ್ ಗೆ ಅನುಮಾನ ಕಾಡ್ತಿದ್ಯಾ.?
'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮನೆಯ ಗಾರ್ಡನ್ ಏರಿಯಾದಲ್ಲಿ ಮೊನ್ನೆ ಪ್ರೆಸ್ ಮೀಟ್ ನಡೆಯಿತು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೂ ಒಂದು ವಾರದ ಮುನ್ನ ಎಲ್ಲ ಸ್ಪರ್ಧಿಗಳಿಗೆ ನಾಲ್ವರು ಪತ್ರಕರ್ತರು ಪ್ರಶ್ನೆ ಕೇಳಿದರು.
ಅದರಲ್ಲಿ ನಟ, ನಿರ್ದೇಶಕ ಮೋಹನ್ ರವರಿಗೆ ಪತ್ರಕರ್ತ ಶರಣು ಹುಲ್ಲೂರು ಕೇಳಿದ ಪ್ರಶ್ನೆ ಇದು - ''ಮೊನ್ನೆ ಮಿನಿ ಮ್ಯೂಸಿಯಂ ಟಾಸ್ಕ್ ಮಾಡುವಾಗ ಪ್ರಥಮ್ ವರ್ತನೆಯನ್ನ ಖಂಡಿಸಿ, ಒಂದು ಮಾತನ್ನು ಕೇಳುತ್ತೀರಾ... 'ಇಲ್ಲಿರುವ ಸ್ಪರ್ಧಿಗಳನ್ನ ಹೊಡೆದರೂ 'ಬಿಗ್ ಬಾಸ್' ನಿನ್ನ ಕ್ಷಮಿಸಿಬಿಡ್ತಾರೆ ಅಂತ'' ಅಂದ್ರೆ 'ಬಿಗ್ ಬಾಸ್' ಮೇಲೆ ನಿಮಗೆ ಅನುಮಾನ ಇದ್ಯಾ.?'' [Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]
ನಟ, ನಿರ್ದೇಶಕ ಮೋಹನ್ ಕೊಟ್ಟ ಉತ್ತರ ಇದು - ''ಅದು ಅನುಮಾನದಿಂದ ಬರುವ ಮಾತುಗಳಲ್ಲ. ಪ್ರಥಮ್ ಗೆ ಒಂದು ಬ್ಯಾರಿಕೇಡ್ ಅಂತ ಇಲ್ಲ. ಮೊದಲು ಮಾತನಾಡುತ್ತಾನೆ, ನಂತರ ಬಂದು ಕ್ಷಮೆ ಕೇಳುತ್ತಾನೆ. ಅನುಮಾನ ಇದ್ದಿದ್ರೆ, ಈಗ ವ್ಯಕ್ತಪಡಿಸುವ ಅಗತ್ಯ ಇಲ್ಲ. ಸುದೀಪ್ ಕೂಡ ಶನಿವಾರ ನಮ್ಮನ್ನೆಲ್ಲ ಎಚ್ಚರಿಸುತ್ತಾರೆ. ಆದ್ರೆ ಪ್ರಥಮ್ ನ ಏನೂ ಕೇಳಲ್ಲ ಅನ್ನೋ ತರಹ ಮಾತನಾಡಿದ್ದೇವೆ. ಆದರೆ ಅದು ಅನುಮಾನ ಅಲ್ಲ. ಪ್ರಥಮ್ ನ ಕಂಟ್ರೋಲ್ ಮಾಡೋಕೆ ಒಂದು ಲಗಾಮು ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದೇವೆ ಅಷ್ಟೇ'' [ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]