Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಬಗ್ಗೆ ನಟ ಮೋಹನ್ ಗೆ ಅನುಮಾನ ಕಾಡ್ತಿದ್ಯಾ.?
'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮನೆಯ ಗಾರ್ಡನ್ ಏರಿಯಾದಲ್ಲಿ ಮೊನ್ನೆ ಪ್ರೆಸ್ ಮೀಟ್ ನಡೆಯಿತು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೂ ಒಂದು ವಾರದ ಮುನ್ನ ಎಲ್ಲ ಸ್ಪರ್ಧಿಗಳಿಗೆ ನಾಲ್ವರು ಪತ್ರಕರ್ತರು ಪ್ರಶ್ನೆ ಕೇಳಿದರು.
ಅದರಲ್ಲಿ ನಟ, ನಿರ್ದೇಶಕ ಮೋಹನ್ ರವರಿಗೆ ಪತ್ರಕರ್ತ ಶರಣು ಹುಲ್ಲೂರು ಕೇಳಿದ ಪ್ರಶ್ನೆ ಇದು - ''ಮೊನ್ನೆ ಮಿನಿ ಮ್ಯೂಸಿಯಂ ಟಾಸ್ಕ್ ಮಾಡುವಾಗ ಪ್ರಥಮ್ ವರ್ತನೆಯನ್ನ ಖಂಡಿಸಿ, ಒಂದು ಮಾತನ್ನು ಕೇಳುತ್ತೀರಾ... 'ಇಲ್ಲಿರುವ ಸ್ಪರ್ಧಿಗಳನ್ನ ಹೊಡೆದರೂ 'ಬಿಗ್ ಬಾಸ್' ನಿನ್ನ ಕ್ಷಮಿಸಿಬಿಡ್ತಾರೆ ಅಂತ'' ಅಂದ್ರೆ 'ಬಿಗ್ ಬಾಸ್' ಮೇಲೆ ನಿಮಗೆ ಅನುಮಾನ ಇದ್ಯಾ.?'' [Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]
ನಟ, ನಿರ್ದೇಶಕ ಮೋಹನ್ ಕೊಟ್ಟ ಉತ್ತರ ಇದು - ''ಅದು ಅನುಮಾನದಿಂದ ಬರುವ ಮಾತುಗಳಲ್ಲ. ಪ್ರಥಮ್ ಗೆ ಒಂದು ಬ್ಯಾರಿಕೇಡ್ ಅಂತ ಇಲ್ಲ. ಮೊದಲು ಮಾತನಾಡುತ್ತಾನೆ, ನಂತರ ಬಂದು ಕ್ಷಮೆ ಕೇಳುತ್ತಾನೆ. ಅನುಮಾನ ಇದ್ದಿದ್ರೆ, ಈಗ ವ್ಯಕ್ತಪಡಿಸುವ ಅಗತ್ಯ ಇಲ್ಲ. ಸುದೀಪ್ ಕೂಡ ಶನಿವಾರ ನಮ್ಮನ್ನೆಲ್ಲ ಎಚ್ಚರಿಸುತ್ತಾರೆ. ಆದ್ರೆ ಪ್ರಥಮ್ ನ ಏನೂ ಕೇಳಲ್ಲ ಅನ್ನೋ ತರಹ ಮಾತನಾಡಿದ್ದೇವೆ. ಆದರೆ ಅದು ಅನುಮಾನ ಅಲ್ಲ. ಪ್ರಥಮ್ ನ ಕಂಟ್ರೋಲ್ ಮಾಡೋಕೆ ಒಂದು ಲಗಾಮು ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದೇವೆ ಅಷ್ಟೇ'' [ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]