Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?
ಪ್ರತಿ ಬಾರಿ ಎಲಿಮಿನೇಷನ್ ನಿಂದ ಸೇಫ್ ಆದಾಗ... ಟಾಸ್ಕ್ ನಲ್ಲಿ ಗೆದ್ದಾಗ... 'ಒಳ್ಳೆ ಹುಡುಗ' ಪ್ರಥಮ್ ಬಾಯಲ್ಲಿ ಬರುವ ಮಾತು ಒಂದೇ.. ಅದೇ... ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು!''
ಕನ್ನಡ ನಾಡು-ನುಡಿ, ಜನತೆ ಬಗ್ಗೆ ಅಪಾರ ಅಭಿಮಾನ ಹೊಂದಿರುವ 'ಒಳ್ಳೆ ಹುಡುಗ' ಪ್ರಥಮ್, ಒಂದ್ವೇಳೆ 'ಬಿಗ್ ಬಾಸ್' ಗೆದ್ದರೆ ಕನ್ನಡಿಗರಿಗೋಸ್ಕರ ಏನು ಮಾಡಬಹುದು ಎಂಬ ಪ್ರಶ್ನೆ ಅನೇಕರಿಗೆ ಕಾಡಿರಬಹುದು.[ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]
ಇದೇ ಪ್ರಶ್ನೆಯನ್ನ ಪ್ರಜಾವಾಣಿ ವರದಿಗಾರ್ತಿ ರೋಹಿಣಿ, ಪ್ರಥಮ್ ಗೆ ನೇರವಾಗಿ ಕೇಳಿದರು. ಅದಕ್ಕೆ ಪ್ರಥಮ್ ಕೊಟ್ಟ ಉತ್ತರ - ''ಹದಿಮೂರು ವಾರ ಜನ ನನ್ನನ್ನ ಉಳಿಸಿದ್ದಾರೆ. ಹೀಗಾಗಿ ಜನರಿಗೆ ನಾನು ಕ್ರೆಡಿಟ್ ಕೊಡ್ತಾಯಿದ್ದೇನೆ. ಟಾಸ್ಕ್ ಗೆದ್ದಾಗ ಕೂಡ ಕನ್ನಡಿಗರಿಗೆ ಕ್ರೆಡಿಟ್ ಕೊಟ್ಟಿದ್ದೇನೆ. ನಾನು ಟಿ.ನರಿಸೀಪುರ, ಕೊಳ್ಳೇಗಾಲದಲ್ಲಿ ಓದಿದ್ದು. ಈಗಲೂ ನಮ್ಮ ಕಡೆ ಎಷ್ಟೋ ಮನೆಗಳಲ್ಲಿ ಟಿವಿ ಇಲ್ಲ. ಅಷ್ಟೂ ಕುಗ್ರಾಮ ನಮ್ಮದು. ಈಗಲೂ ನಮ್ಮ ಕಡೆ ಮಳೆ-ಬೆಳೆ ನಂಬಿಕೊಂಡು ಬದುಕುತ್ತಿದ್ದೇವೆ. ಬೀದಿ ದೀಪ ಕೂಡ ಇಲ್ಲ. ಇದನ್ನೆಲ್ಲ ಬದಲಾಯಿಸುವುದಕ್ಕೆ ಈ ವೇದಿಕೆ ನನಗೆ ದನಿ ಆಗಬಹುದು ಎಂಬ ಮಹತ್ತರ ಆಸೆ ಇಟ್ಟುಕೊಂಡಿದ್ದೇನೆ.''