Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!
''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲವು''.......ಇದು 'ಬಿಗ್ ಬಾಸ್'ನಲ್ಲಿ ಪ್ರಥಮ್ ಅವರ ವೇದವಾಕ್ಯ. ಪ್ರತಿ ಬಾರಿ ಗೆದ್ದಾಗಲೂ, ನಾಮಿನೇಟ್ ಆಗಿ ಸೇಫ್ ಆದಾಗಲೂ ಇದು ಕನ್ನಡಿಗರ ಗೆಲುವು ಎಂದು ಗೆಲುವನ್ನ ಕನ್ನಡಿಗರಿಗೆ ಅರ್ಪಿಸುತ್ತಿದ್ದರು.
ಒಂದು ವೇಳೆ ಪ್ರಥಮ್ ಗೆದ್ದರೇ ಕನ್ನಡಿಗರಿಗಾಗಿ ಏನು ಮಾಡ್ತಾರೆ? 'ಕನ್ನಡಿಗರ ಗೆಲುವು' ಎಂದು ಬರಿ ಮಾತಿನಲ್ಲಿ ಹೇಳದೆ, ಕನ್ನಡಿಗರಿಗಾಗಿ ಏನಾದರೂ ಮಾಡಿ ತೋರಿಸುತ್ತಾರ ಎಂಬ ಚರ್ಚೆ ಸಾಮಾನ್ಯವಾಗಿತ್ತು.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]
ಆದ್ರೆ, ಒಳ್ಳೆ ಹುಡುಗ ಪ್ರಥಮ್ ಅದನ್ನ ಸಾಬೀತು ಪಡಿಸಿದ್ದಾರೆ. ಹೌದು, 'ಬಿಗ್ ಬಾಸ್'ನಲ್ಲಿ ಗೆದ್ದ 50 ಲಕ್ಷ ರೂಪಾಯಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ನನಗೆ ಬೇಡವೆಂದಿದ್ದಾರೆ. ಹಾಗಾದ್ರೆ, ಪ್ರಥಮ್ ಗೆದ್ದ 50 ಲಕ್ಷವನ್ನ ಏನು ಮಾಡುತ್ತಿದ್ದಾರೆ? ಮುಂದೆ ಓದಿ....
'ಬಿಗ್ ಬಾಸ್' ಗೆದ್ದ 'ಪ್ರಥಮ್'ಗೆ 50 ಲಕ್ಷ!
'ಬಿಗ್ ಬಾಸ್ ಕನ್ನಡ 4'ನೇ ಆವೃತ್ತಿಯ ವಿಜೇತರಾದ ಒಳ್ಳೆ ಹುಡುಗ ಪ್ರಥಮ್ ಗೆ, ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.
ಒಂದೇ ಒಂದು ರೂಪಾಯಿ ಬೇಡವೆಂದ ಪ್ರಥಮ್!
'ಬಿಗ್ ಬಾಸ್'ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣದಲ್ಲಿ ಒಂದು ರೂಪಾಯಿ ಹಣ ಕೂಡ ನನಗೆ ಬೇಡವೆಂದು ಪ್ರಥಮ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೇ ಖಡಕ್ ಆಗಿ ಹೇಳಿದ್ದಾರೆ.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]
50 ಲಕ್ಷವೂ ಸಮಾಜ ಕಲ್ಯಾಣಕ್ಕಾಗಿ ಮೀಸಲು
'ಬಿಗ್ ಬಾಸ್' ಫಿನಾಲೆಯಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣವನ್ನ ರೈತ ಕುಟುಂಬಗಳಿಗೆ, ಹುತಾತ್ಮ ಯೋಧರ ಕುಟುಂಬಕ್ಕೆ, ಬಡ ಜನರಿಗೆ ನೀಡುವುದಾಗಿ 'ಪ್ರಥಮ್' ನಿರ್ಧರಿಸಿದ್ದಾರೆ.
'ಒಳ್ಳೆ ಹುಡುಗನ' 50 ಲಕ್ಷದ ಯೋಜನೆ!
*
5
ಲಕ್ಷ
ಟಿ.ನರಸಿಪುರ,
ಕೊಳ್ಳೆಗಾಲ
ಬಳಿ
ಇರುವ
ಬಡ
ಹೆಣ್ಣು
ಮಕ್ಕಳ
ಮದುವೆ
ಸಹಾಯಕ್ಕೆ.
*
5
ಲಕ್ಷ
ಮಹದೇಶ್ವರ
ಬೆಟ್ಟದ
ಬಳಿ
ಇರುವ
ಮನೆಗಳಿಗೆ
ವಿದ್ಯುತ್
ವ್ಯವಸ್ಥೆಗೆ.
*
20
ಲಕ್ಷ
ದೇಶ
ಕಾಯೋ
ಸೈನಿಕರಿಗೆ
ಮೀಸಲು.
*
20
ಲಕ್ಷ
ಮೃತಪಟ್ಟ
ರೈತರ
ಕುಟುಂಬಗಳಿಗೆ
ನೀಡಲು
ನಿರ್ಧರಿಸಿದ್ದಾರೆ.
ಮಗನಿಗೆ ಸಾಥ್ ಕೊಟ್ಟ ಮಲ್ಲಣ್ಣ!
'ಪ್ರಥಮ್' ಅವರ ಈ ನಿರ್ಧಾರವನ್ನ ತಂದೆ ಮಲ್ಲಣ್ಣ ಅವರು ಸಂಪೂರ್ಣವಾಗಿ ಸ್ವೀಕರಿಸಿದರು. ಮಗನ ಆಶಯ ಹಾಗೂ ತಂದೆಯ ಆಶಯದಂತೆ ಎಲ್ಲ ಹಣವನ್ನ ರೈರಿಗೆ, ಹಳ್ಳಿಗಳ ಉದ್ಧಾರಕ್ಕೆ ಬಳಸುವುದಾಗಿ ವೇದಿಕೆಯಲ್ಲಿ ಹೇಳಿದರು.