twitter
    For Quick Alerts
    ALLOW NOTIFICATIONS  
    For Daily Alerts

    'ಬೆಣ್ಣೆ ದೋಸೆ'ಯಲ್ಲಿ ಡಿಸ್ಕವರಿ ಮಾಡೋಕೆ ಹೊರಟ 'ವಾಸ್ಕೋಡಿಗಾಮ'

    By Suneetha
    |

    ನಿರ್ದೇಶಕ ಮಧುಚಂದ್ರ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬಂದಿದ್ದ 'ವಾಸ್ಕೋಡಿಗಾಮ' ಟೀಮ್ 'ಬೆಂಗಳೂರು ಬೆಣ್ಣೆ ದೋಸೆ'ಯಲ್ಲಿ ಮಸ್ತ್ ಮಜಾ ಮಾಡಿ ಕುಣಿದು ಕುಪ್ಪಳಿಸಿದರು. ಈ ವಿಭಿನ್ನ ರೀತಿಯ ರಿಯಾಲಿಟಿ ಶೋ ನಲ್ಲಿ ಈ ಸಂಚಿಕೆ ಬಹಳಷ್ಟು ಮಜಾ ಕೊಡಲಿದೆ.

    ಪೋರ್ಚುಗೀಸ್ ದೊರೆ 'ವಾಸ್ಕೋಡಗಾಮ' ದೇಶವನ್ನು ಪತ್ತೆ ಹಚ್ಚಲು ಹೋದರೆ, ಈ 'ವಾಸ್ಕೋಡಿಗಾಮ' ತಂಡ ಕುಂಬಳಕಾಯಿಯನ್ನು ಪತ್ತೆಹಚ್ಚಲು ಹೋಗುತ್ತಾರೆ. ಡಿಸ್ಕವರಿ ಮಾಡಲು ಹೊರಟ ನಟಿ ಪಾರ್ವತಿ ಅವರ ಕೈಗೆ ಸಿಕ್ಕ ಹಾವನ್ನು ನೋಡಿ ಎಲ್ಲರೂ ಹೌಹಾರಿದ ಕಾಮಿಡಿ ಘಟನೆ ಈ ವಾರದ 'ಬೆಣ್ಣೆದೋಸೆ' ಸಂಚಿಕೆಯಲ್ಲಿ ಮೂಡಿಬಂದಿದೆ.['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]

    'Bengaluru Benne Dose': Kannada Movie Vascodigama team Special episode

    ಈಗಾಗಲೇ ಜನರ ಪ್ರೀತಿ ಹಾಗೂ ಮೆಚ್ಚುಗೆಯನ್ನು ಗಳಿಸಿರುವ ನಟ ಕಿಶೋರ್ ಅವರು ವಿವಿಧ ರೀತಿಯ ಡೈಲಾಗ್ ಹೊಡೆದು ಈ ವಿಭಿನ್ನ ಶೋ ನ ಗಮನ ಸೆಳೆದರು. ವಿಶೇಷವಾಗಿ 'ಮುಂಗಾರು ಮಳೆ' ಚಿತ್ರದ ಸಂಭಾಷಣೆಯನ್ನು ಕಿಶೋರ್ ಅವರು 'ಬೆಣ್ಣೆದೋಸೆ' ವೇದಿಕೆ ತಂದಿದ್ದರು, ಜೊತೆಗೆ ನಟಿ ಪಾರ್ವತಿ ನಾಯರ್ ಅವರು 'ಶರಪಂಜರ' ಚಿತ್ರದ ಕಲ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಚಿತ್ರದ ನಿರ್ದೇಶಕ ಮಧುಚಂದ್ರ ಅವರು 'ಬೆಂಗ್ಳೂರ್ ಬೆಣ್ಣೆದೋಸೆ'ಯಲ್ಲಿ ಸಖತ್ ಸ್ಟೆಪ್ ಹಾಕಿ ಎಲ್ಲರ ಮನರಂಜಿಸಿದ್ದಾರೆ.[ಬೆಣ್ಣೆ ದೋಸೆ ತಿರಸ್ಕರಿಸಿದ 'ಪೂಜಾರಿ' ಬೆಡಗಿ ]

    'Bengaluru Benne Dose': Kannada Movie Vascodigama team Special episode

    ಬಹುಭಾಷಾ ನಟ ಕಿಶೋರ್ ಹಾಗೂ ನಟಿ ಪಾರ್ವತಿ ಅವರ ಡಬ್ ಸ್ಮಾಷ್ ಹಾಗೂ 'ವಾಸ್ಕೋಡಿಗಾಮ' ಚಿತ್ರತಂಡ, ಬೆಣ್ಣೆದೋಸೆ ಶೋನ ರೂವಾರಿ ನಟ ಅರುಣ್ ಸಾಗರ್ ಜೊತೆ ಮಾಡಿದ ಮೋಜು-ಮಸ್ತಿ ನೋಡಲು ಈ ವಾರದ (ನವೆಂಬರ್ 1, ರಾತ್ರಿ 9ಕ್ಕೆ) 'ಬೆಣ್ಣೆದೋಸೆ' ಮಿಸ್ ಮಾಡ್ಕೋಬೇಡಿ

    English summary
    Kannada Movie Vascodigama team has taken part in Suvarna Channel's comedy show 'Bengaluru Benne Dose'. Watch the episode on November 1st, at 9pm.
    Saturday, October 31, 2015, 15:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X