Don't Miss!
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣ ಧಾರಾವಾಹಿಯಲ್ಲಿ ಅನ್ನಪೂರ್ಣೆಯಾಗಿ ಭಾರತಿ
ಇದು ಧಾರವಾಹಿಯೊಂದಕ್ಕೆ ಭಾರತಿ ನಿರ್ವಹಿಸುತ್ತಿರುವ ಪಾತ್ರವೊಂದರ ಹೆಸರು. ಸುವರ್ಣವಾಹಿನಿ ಒಂದರ ಹಿಂದೊಂದು ಧಾರವಾಹಿಗಳನ್ನು ಆರಂಭಿಸುತ್ತಿದೆ. ಅದರಲ್ಲಿ 'ಭಾಗ್ಯವಂತರು' ಕೂಡಾ ಒಂದು. ಇದೇ ತಿಂಗಳು 30ನೇ ತಾರೀಕಿನಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿರಾತ್ರಿ 9ಗಂಟೆಗೆ ಪ್ರಸಾರ ಕಾಣಲಿರುವ ಈ ಧಾರಾವಾಹಿಯ ವಿಶೇಷತೆ ಏನಂದರೆ ಭಾರತಿ ವಿಷ್ಣುವರ್ಧನ್.
ಈ ಮೊದಲು ಜನನಿ ಎಂಬ ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದ ಭಾರತಿ, ಮುಕ್ತ ಮುಕ್ತದ ನಂತರ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ದೇವಿ ಅನ್ನಪೂರ್ಣೇಶ್ವರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ತಮ್ಮ ಜೊತೆ ಯಜಮಾನರ ಖ್ಯಾತಿಯನ್ನು ಹೊತ್ತು ತಂದಿದ್ದಾರೆ.
ದಿ. ವಿಷ್ಣುವರ್ಧನ್ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ವಿಷ್ಣು ಇವತ್ತು ನಮ್ಮಿಂದ ದೂರವಾಗಿದ್ದರೂ ಅವರ ನೆನಪುಗಳಿಂದ, ಅವರ ಸಿನಿಮಾಗಳಿಂದ ಜನಮಾನಸದಲ್ಲಿ ಸದಾ ಹಸಿರು. ಭಾರತಿ ಭಾಗ್ಯವಂತರು ಧಾರಾವಾಹಿಯಲ್ಲಿ ವಿಷ್ಣು ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ವಿಷ್ಣುವರ್ಧನ್ ಅಭಿನಯಿಸಿದ 'ಸಿಂಹಾದ್ರಿಯ ಸಿಂಹ'ದಲ್ಲಿ ವಿಷ್ಣು ಅವರದ್ದು ವಿಶಿಷ್ಟ ಜಮೀನ್ದಾರಿ ಗೆಟಪ್ ಇತ್ತು. ಸಿನಿಮಾ ಪ್ರೇಕ್ಷಕರು ಅದನ್ನು ಅಪಾರವಾಗಿ ಮೆಚ್ಚಿದ ಚಿತ್ರ ಭರ್ಜರಿ ಜಯಭೇರಿ ಬಾರಿಸಿತ್ತು. ಈಗ ಅದೇ ಗೆಟಪ್ ನ ದೊಡ್ಡ ಒಂದು ಭಾವಚಿತ್ರ ಭಾರತಿ ಅಭಿನಯಿಸುತ್ತಿರುವ ಭಾಗ್ಯವಂತರು ಧಾರಾವಾಹಿಯ ಹಿನ್ನಲೆಯಲ್ಲಿ ಕಾಣಿಸಿಕೊಳ್ಳಲಿದೆ.
ಗತಿಸಿಹೋದ ಯಜಮಾನರ ವಂಶದ ಕೀರ್ತಿ ಉಳಿಸಿ ಬೆಳೆಸುವ ಕಾರ್ಯ ಮಾಡುವ ಶ್ರೀಮಂತ ಮನೆತನದ ದೇವಿ ಅನ್ನಪೂರ್ಣೇಶ್ವರಿಯಾಗಿ ಭಾರತಿ ಮೇಡಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆ ವಿಷ್ಣು ಭಾವಚಿತ್ರವೂ ಕಾಣಸಿಕ್ಕಿದರೆ ಧಾರಾವಾಹಿಗೆ ಮತ್ತಷ್ಟು ಮೆರುಗು, ಜನಪ್ರಿಯತೆ ದೊರೆಯುತ್ತದೆ ಎನ್ನುವುದು ಭಾಗ್ಯವಂತರು ತಂಡದ ಲೆಕ್ಕಾಚಾರ.
ಈ ಧಾರಾವಾಹಿಯ ನೆಪದಲ್ಲಿ ಸಿಂಹಾದ್ರಿಯ ಸಿಂಹ ವಿಷ್ಣುವರ್ಧನ್ ಭಾವಚಿತ್ರ ಮತ್ತು ಅವರ ಧರ್ಮಪತ್ನಿ ಭಾರತಿಯವರ ಅಭಿನಯ ಎರಡನ್ನೂ ಕಿರುತೆರೆ ಪ್ರೇಕ್ಷಕರು ಆಸ್ವಾದಿಸಬಹುದು.