Don't Miss!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಹೋದರಿಯರ ಅವಾಂತರ: 'ಬಿಗ್ ಬಾಸ್' ಮನೆಯಿಂದ ಹೊರಹೋಗ್ತಾರಾ ಶ್ರೀಶಾಂತ್.?
'ಬಿಗ್ ಬಾಸ್-12' ರಿಯಾಲಿಟಿ ಶೋ ಶುರುವಾಗಿ ಎರಡು ದಿನ ಕಳೆದಿದೆ ಅಷ್ಟೇ. ಅಷ್ಟು 'ಬಿಗ್ ಬಾಸ್' ಮನೆಯಲ್ಲಿ ಬೆಂಕಿ ಹೊತ್ತುಕೊಂಡಿದೆ. ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿ ಖಾನ್ ಸಹೋದರಿಯರು ಕ್ಯಾತೆ ತೆಗೆಯುತ್ತಿದ್ದಾರೆ.
ಮನೆಯಲ್ಲಿ ಸದ್ದು ಮಾಡಬೇಕು ಎಂಬ ಉದ್ದೇಶದಿಂದಲೇ ನಿನ್ನೆ ಸಭಾ ಖಾನ್ ಹಾಗೂ ಸೋಮಿ ಖಾನ್ (ಖಾನ್ ಸಹೋದರಿಯರು) ಜಗಳ ಆಡುವ ನಾಟಕ ಮಾಡಿದ್ದರು. ಜಗಳದ ಅಸಲಿ ಮುಖವಾಡ ಬಯಲಾಗುತ್ತಿದ್ದಂತೆಯೇ, ಶ್ರೀಶಾಂತ್ ಮುನಿಸಿಕೊಂಡರು.
ಸಲ್ಮಾನ್ ಮುಂದೆ ಕನ್ನಡದ 'ಕೆಂಪೇಗೌಡ' ಚಿತ್ರದ ಬಗ್ಗೆ ಮಾತನಾಡಿದ ಶ್ರೀಶಾಂತ್.!
ಇದೀಗ 'ಬಿಗ್ ಬಾಸ್' ಕೊಟ್ಟಿರುವ ಮೊದಲ ಚಟುವಟಿಕೆ ಶ್ರೀಶಾಂತ್ ರಿಂದಾಗಿ ರದ್ದಾಗಿದೆ. ಸುಖಾಸುಮ್ಮನೆ ಇನ್ನೊಬ್ಬರ ಮೇಲೆ ಬೆರಳು ತೋರಿಸುವುದು ಶ್ರೀಶಾಂತ್ ಗೆ ಇಷ್ಟವಾಗಿಲ್ಲ. ಹೀಗಾಗಿ ಚಟುವಟಿಕೆಯಿಂದ ಹಿಂದೆ ಸರಿದಿದ್ದಾರೆ. ಇದೇ ಕಾರಣಕ್ಕೆ ಸೋಮಿ ಖಾನ್ ಪಿತ್ತ ನೆತ್ತಿಗೇರಿದೆ.
ಸೋಮಿ ಖಾನ್ ಜೊತೆಗಿನ ವಾಗ್ವಾದದಿಂದ ಬೇಸೆತ್ತ ಶ್ರೀಶಾಂತ್ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಮುಂದಾಗಿದ್ದಾರೆ. ಹಾಕೊಂಡಿದ್ದ ಮೈಕ್ ತೆಗೆದು ಗೇಟ್ ತೆಗೆಯುವಂತೆ 'ಬಿಗ್ ಬಾಸ್' ಬಳಿ ಶ್ರೀಶಾಂತ್ ಕೇಳಿಕೊಂಡಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಕಾಲಿಡಲಿರುವ ಟೀಂ ಇಂಡಿಯಾ ಕ್ರಿಕೆಟರ್ ಯಾರು.?
ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಶ್ರೀಶಾಂತ್ ಹೊರಹೋಗ್ತಾರಾ.? ಶ್ರೀಶಾಂತ್ ಕೋಪವನ್ನ ಕಮ್ಮಿ ಮಾಡುವವರು ಯಾರು.? ಎಂಬ ಪ್ರಶ್ನೆಗೆ ಉತ್ತರ ಇಂದು ರಾತ್ರಿ 9 ಗಂಟೆಗೆ ಸಿಗಲಿದೆ. ಶ್ರೀಶಾಂತ್ ನಡವಳಿಕೆ ಹೇಗಿತ್ತು ಅಂತ ತಿಳಿದುಕೊಳ್ಳಬೇಕಾದರೆ, ಇಂದಿನ 'ಬಿಗ್ ಬಾಸ್-12' ಸಂಚಿಕೆ ನೋಡಿರಿ...