Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಸ್ಪರ್ಧಿಗೆ ಖುಲಾಯಿಸಿದ ಅದೃಷ್ಟ: 'ಕನಸು-ನನಸಾಯಿತು' ಎಂದ ದಿವಿ
'ಬಿಗ್ಬಾಸ್' ಕೇವಲ ರಿಯಾಲಿಟಿ ಶೋ ಆಗಿ ಮಾತ್ರವೇ ಉಳಿದಿಲ್ಲ. ಒಮ್ಮೆ ಬಿಗ್ಬಾಸ್ ಮನೆ ಹೊಕ್ಕಿ ಬಂದರೆಂದರೆ ಸ್ಪರ್ಧಿಗಳ ಭವಿಷ್ಯವೇ ಬದಲಾಗುತ್ತದೆ. ಹಲವಾರ ಅದೃಷ್ಟ ಬದಲಾಯಿಸಿದೆ ಈ ಬಿಗ್ಬಾಸ್ ರಿಯಾಲಿಟಿ ಶೋ.
ಇತ್ತೀಚೆಗಷ್ಟೆ ತೆಲುಗು ಬಿಗ್ಬಾಸ್ 4 ಮುಗಿದಿದೆ. ಕೊರೊನಾ ಅನ್ಲಾಕ್ ಸಮಯದಲ್ಲಿ ಪ್ರಸಾರ ಪ್ರಾರಂಭಿಸಿದ ಮೊದಲ ರಿಯಾಲಿಟಿ ಶೋ ತೆಲುಗು ಬಿಗ್ಬಾಸ್ ಕೆಲ ದಿನಗಳ ಹಿಂದಷ್ಟೆ ಮುಗಿದಿದೆ. ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ಹಲವರ ಅದೃಷ್ಟ ಬದಲಾಗಿದೆ. ಅದರಲ್ಲಿ ಪ್ರಮುಖರು ದಿವಿ ವದತ್ಯ.
ಬಿಗ್ಬಾಸ್: ಯಾರು ಎಷ್ಟು ಪಡೆದರು-ಯಾರಿಗೆ ಒಲಿಯಿತು ಅದೃಷ್ಟ?
ಬಿಗ್ಬಾಸ್ ಮನೆಯಲ್ಲಿ ಕೊನೆಯ ವರೆಗೆ ಇದ್ದ ನಟಿ ದಿವಿ ವದತ್ಯ ಗೆ ಬಿಗ್ಬಾಸ್ ಫೈನಲ್ ದಿನವೇ ವೇದಿಕೆ ಮೇಲೆ ಚಿರಂಜೀವಿ ದೊಡ್ಡ ಅವಕಾಶವೊಂದನ್ನು ಘೋಷಿಸಿದರು. 'ನನ್ನ ಸಿನಿಮಾದಲ್ಲಿ ನಟಿಸುವ ಅವಕಾಶ ನಿನಗೆ ಕೊಡುತ್ತಿದ್ದೇನೆ' ಎಂದು ಚಿರಂಜೀವಿ ಹೇಳಿದ್ದರು. ಆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ಮತ್ತೊಂದು ದೊಡ್ಡ ಅವಕಾಶ ಹುಡುಕಿ ಬಂದಿದೆ ದಿವಿ ಗೆ.
ಪವನ್ ಕಲ್ಯಾಣ್ ಸಿನಿಮಾದಲ್ಲಿ ದಿವಿ
ಹೌದು, ನಟಿ ದಿವಿ ಗೆ ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸುವ ಮತ್ತೊಂದು ಅವಕಾಶ ಹುಡುಕಿ ಬಂದಿದೆ. ವಕೀಲ್ ಸಾಬ್ ನಂತರ ಪವನ್ ಕಲ್ಯಾಣ್ ನಟಿಸುತ್ತಿರುವ ಸಿನಿಮಾದಲ್ಲಿ ದಿವಿ ಗೆ ಪ್ರಮುಖ ಪಾತ್ರವೊಂದು ದೊರೆತಿದೆ. ಅವಕಾಶ ಸಿಕ್ಕಿರುವ ಬಗ್ಗೆ ಮಾತನಾಡಿರುವ ದಿವಿ, 'ಇದು ಕನಸು ನನಸಾದ ಅನುಭವ' ಎಂದಿದ್ದಾರೆ.
'ವೇದಾಲಂ' ರೀಮೇಕ್ನಲ್ಲಿ ಪೊಲೀಸ್ ಪಾತ್ರ
ಇನ್ನು ಚಿರಂಜೀವಿ ಅಭಿನಯಿಸುತ್ತಿರುವ 'ವೇದಾಲಂ' ಸಿನಿಮಾದ ತೆಲುಗು ರೀಮೇಕ್ನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ದಿವಿ. ಈ ವಿಷಯವನ್ನು ಚಿರಂಜೀವಿ ಅವರು ಬಿಗ್ಬಾಸ್ ಫೈನಲ್ ದಿನವೇ ವೇದಿಕೆ ಮೇಲೆ ಘೋಷಿಸಿದರು.
ಬಿಗ್ಬಾಸ್ ವಿನ್ನರ್ ಅಭಿಜಿತ್ ಗೆ ಸಿಕ್ಕಿತು ಭರ್ಜರಿ ಆಫರ್
ಅಭಿಜಿತ್ ಗೆ ಹಲವು ಸಿನಿಮಾಗಳ ಆಫರ್
ಇನ್ನೂ ಕೆಲವು ಬಿಗ್ಬಾಸ್ ಸ್ಪರ್ಧಿಗಳಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಬಿಗ್ಬಾಸ್ ಗೆದ್ದ ಅಭಿಜಿತ್ ದುದ್ದಲ ಗೆ ಮತ್ತೆ ಸಿನಿಮಾ ಅವಕಾಶಗಳು ಬರುವುದು ಪ್ರಾರಂಭವಾಗಿದೆ. ಈ ಹಿಂದೆ ಕೇವಲ ಒಂದು ಸಿನಿಮಾದಲ್ಲಿ ನಟಿಸಿ ನಂತರ ಅವಕಾಶವಂಚಿತರಾಗಿದ್ದ ಅಭಿ ಮುಂದೆ ಈಗ ಕನಿಷ್ಟ 3 ಕತೆಗಳಿವೆಯಂತೆ.
ಸೋಹೆಲ್ಗೆ ಮಾತುಕೊಟ್ಟಿರುವ ಚಿರಂಜೀವಿ
ಇನ್ನು 25 ಲಕ್ಷ ಹಣ ಪಡೆದು ಬಿಗ್ಬಾಸ್ನಿಂದ ಹೊರಗೆ ಹೋದ ಸೋಹೆಲ್ ಗೆ ಸಹ ಸಿನಿಮಾ ಅವಕಾಶಗಳು ದೊರಕುತ್ತಿವೆ. ಸೋಹೆಲ್ ನಿರ್ದೇಶಿಸುವ ಸಿನಿಮಾ ಕಾರ್ಯಕ್ರಮಕ್ಕೆ ಸ್ವತಃ ತಾವೇ ಬರುವುದಾಗಿ ಚಿರಂಜೀವಿ ಮಾತು ಕೊಟ್ಟಿದ್ದಾರೆ.