Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆದಿ ಲೋಕೇಶ್ ಬಿಚ್ಚಿಟ್ಟ ತನ್ನ ಒಂಟಿ ಕಣ್ಣಿನ ಸೀಕ್ರೆಟ್
ಬಳಿಕ ಸಂತೋಷ್ ಹೇಳಿದ ಸೀಕ್ರೆಟ್ ತುಂಬಾ ಇಂಟರೆಸ್ಟಿಂಗ್ ಆಗಿತ್ತು. ಹಣಕಾಸು ತೊಂದರೆಯಿಂದ ನಾನು ಕಾಲೇಜು ಓದಲು ಸಾಧ್ಯವಾಗಲಿಲ್ಲ. ನಾನು ಓದಿದ್ದದ್ದು ಪಿಯುಸಿ. ಆದರೆ ರೆಸ್ಯೂಮೆಯಲ್ಲಿ ಬಿ.ಕಾಂ ಎಂದು ಬರೆದಿದ್ದೆ. ಐದು ಕಂಪನಿಗಳಲ್ಲಿ ಸುಳ್ಳು ಹೇಳಿ ಕೆಲಸ ಮಾಡಿದ್ದೇನೆ. ಅದೂ ಫಾರ್ಚ್ಯೂನ್ 500 ಕಂಪನಿಗಳಲ್ಲಿ ಎಂಬುದು ವಿಶೇಷ. ಅವರ ಹೆಚ್ ಆರ್ ಪ್ರೋಸಸ್ ತುಂಬಾ ಟಫ್ ಇರುತ್ತದೆ. ಬಳಿಕ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದೆ. ಬಿ.ಕಾಂ ಮಾಡಿದ್ದೇನೆ ಎಂದು ಹೇಳಿ ಆರು ವರ್ಷ ಬೆಸ್ಟ್ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಎರಡನೇ ಸೀಕ್ರೆಟ್ ಎಂದರೆ ನನ್ನ ಜೀವನದಲ್ಲಿ ಹತ್ತು ಸಾವಿರ ನೋಡಿಯೇ ಇರಲಿಲ್ಲ. ಅದೇ ಸಮಯದಲ್ಲಿ ನನ್ನ ಗೆಳೆಯನ ತಂಗಿ ಸೀಮೆಎಣ್ಣೆ ಸ್ಟೌವ್ ಸಿಡಿದು ಗಾಯಗೊಂಡಿದ್ದರು. ಆಗ ದುಡ್ಡು ಬೇಕಾಗಿತ್ತು. ಆ ಸಂದರ್ಭದಲ್ಲಿ ಒಂದು ಕೆಲಸವನ್ನು ಒಪ್ಪಿಕೊಂಡೆ. ಒಂದು ಪೊಟ್ಟಣವನ್ನು ಯಾವುದೇ ಕಾರಣಕ್ಕೂ ತೆಗೆದು ನೋಡಬಾರದು ಎಂಬ ಕಂಡೀಷನ್ ಮೇಲೆ ಅದನ್ನು ಇನ್ನೊಬ್ಬರಿಗೆ ಸೇರಿಸಬೇಕಾಗಿತ್ತು. ಇದಕ್ಕಾಗಿ ರು.15 ಸಾವಿರ ಕೊಡ್ತೀನಿ ಎಂದರು.
ಬಳಿಕ ಆದಿ ಲೋಕೇಶ್ ಮಾತನಾಡುತ್ತಾ, ಇದುವರೆಗೂ ಯಾರಿಗೂ ಗೊತ್ತಿಲ್ಲದ ವಿಷಯ ಇದು. ಕೇವಲ ನನ್ನ ತಾಯಿ ಮತ್ತು ನನಗೆ ಮಾತ್ರ ಗೊತ್ತಿರುವ ಸಂಗತಿ ಇದು. ನನಗೆ ಕಾಣೋದೇ ಒಂದು ಕಣ್ಣು. ಎಡಗಣ್ಣು ನನಗೆ ಕಾಣುವುದಿಲ್ಲ. ಇನ್ನೊಂದು ಕಣ್ಣು ಸುಮ್ಮನೆ ಇದೆ. ಆದರೆ ಇನ್ನೊಂದು ಮುಚ್ಚಿಕೊಂಡರೆ ನಾನು ಕುರುಡನಂತೆಯೇ. ಹುಟ್ಟಿದಾಗಿನಿಂದ ನನಗೆ ಈ ಸಮಸ್ಯೆ ಇದೆ. ಈ ಸೀಕ್ರೆಟ್ ಯಾರಿಗೂ ಗೊತ್ತಿರಲಿಲ್ಲ. ಇದೀಗ ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದರು. ಈ ಸೀಕ್ರೆಟ್ ಕೇಳುತ್ತಿದ್ದಂತೆ ಎಲ್ಲರೂ ಗರಬಡಿದವರಂತಾದರು.
ಬಳಿಕ ಎಲ್ಲರ ಸೀಕ್ರೆಟ್ ಬಗ್ಗೆ ಚರ್ಚಿಸಿದರು. ಡಬ್ಬಾ ಸೀಕ್ರೆಟ್ ಎಂದರೆ ರೋಹಿತ್ ಹೇಳಿದ್ದು ಎಂದು ಅಕುಲ್ ಎಲ್ಲರೆ ಜೊತೆ ಹೇಳಿಕೊಂಡರು. ಇದಕ್ಕಾಗಿ ರೋಹಿತ್ ಸ್ವಲ್ಪ ಬೇಸರದಲ್ಲಿದ್ದ. ನಿಜವಾಗಿಯೂ ಹೇಳಬೇಕೆಂದರೆ ಅವರು ಹೇಳಿದ್ದು ಸೀಕ್ರೆಟ್ ತರಹ ಇರಲಿಲ್ಲ.
ರಹಸ್ಯ ಚಕ್ರದ ಬಗ್ಗೆ ಮನೆಯಲ್ಲಿ ಭಾರಿ ಚರ್ಚೆ ನಡೆಯಿತು. ದೀಪಿಕಾ ಅವರು ತಮ್ಮ ಸೀಕ್ರೆಟ್ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದರು. ಆದರೆ ನೀತೂ ಅವರಿಗೆ ಧೈರ್ಯ ತುಂಬಿದರು ನೀನೇನು ಹೆಸರು ಹೇಳಲಿಲ್ಲವಲ್ಲ. ಡೋಂಟ್ ವರಿ ಎಂದು ಧೈರ್ಯ ತುಂಬಿದರು. ಈ ಬಾರಿಯ ಸೀಕ್ರೆಟ್ ಗಳಿಂದ ಮನೆಯಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಇನ್ನಷ್ಟು ಗೌರವ, ನಂಬಿಕೆಗಳು ಬಂದಿರುವುದು ಕಂಡಿತು. ಮುಂದೇನು ಎಂಬುದು ನೋಡಬೇಕು.