Don't Miss!
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲವು ಸಲ ಆತ್ಮಹತ್ಯೆಗೆ ಯತ್ನಿಸಿದ್ದ ಅಕುಲ್ ಬಾಲಾಜಿ
ಮೂರು ಗಂಟೆ ಇರಬೇಕು ದಬದಬ ಬಾಗಿಲು ತಟ್ಟಿದ ಶಬ್ದ. ನಾನು ಮಲಗಿದ್ದೇನೆ ಎಂದರೆ ಸತ್ತ ಹೆಣನೇ. ಎದ್ದು ನೋಡಿದರೆ ನಮ್ಮ ಪ್ರೊಡ್ಯೂಸರ್. ಏನ್ರಣ್ಣಾ ಹಿಂಗೆ ಮಲಗಿದ್ದೀರಾ. ಪ್ರೆಸ್ ನವರೂ ಎಲ್ಲರೂ ಕಾಯ್ತಿದ್ದಾರೆ ನೀವು ಬರಬೇಕು ಎಂದರು. ನಾನು ಆಗಲ್ಲ ಎಂದೆ. ರೀ ಹಾಕೊಳ್ಳೋಕೆ ಬಟ್ಟೇನೆ ಇಲ್ಲ. ಎಲ್ಲಾ ಒಗೆದು ಒಣಹಾಕಿದ್ದೇನೆ ಎಂದೆ.
ಆಗ ಅವರು ಒಂದು ಜೊತೆ ಬಟ್ಟೆ ತೆಗೆದುಕೊಂಡು ಬಂದು ಜೊತೆಗೆ ಒಂದು ಹ್ಯಾಟ್ ಕೊಟ್ಟರು. ಅದು ಹಾಕಿಕೊಂಡು ಕಪಾಲಿ ಚಿತ್ರಮಂದಿರದ ಮುಂದೆ ಕ್ವಾಲಿಸ್ ನಿಂದ ಇಳಿಯಬೇಕಾದರೆ ಪಟಾಕಿ ಹೊಡೆದ ಸದ್ದು ಕೇಳಿಸಿತು. ಎಲ್ಲೋ ಶಿವಣ್ಣ ಬರ್ತಿರಬೇಕು ಎಂದುಕೊಂಡೆ.
ಬಳಿಕ ಶಕೀಲಾ ಬಳಿ ಅನಿತಾ ಮಾತನಾಡುತ್ತಾ, ನನ್ನ ಜೀವನದಲ್ಲಿ ಅತಿ ದೊಡ್ಡ ಸೀಕ್ರೆಟ್ ಇದೆ. ಆದನ್ನು ಇಲ್ಲಿ ಹೇಳಿದರೆ ನನ್ನ ಕೆರಿಯರ್ ಗೆ ಹೊಡೆತಾ ಬೀಳುತ್ತದೆ ಎಂದು ಶಕೀಲಾ ಜೊತೆ ಹೇಳಿದರು. ಅದನ್ನು ಹೇಳಬೇಕೋ ಬೇಡವೋ ನೀವೇ ಹೇಳಿ ಎಂದು ಶಕೀಲಾರನ್ನು ಕೇಳಿದರು. ಆದರೆ ಆ ಸೀಕ್ರೆಟ್ ಏನು ಎಂಬುದನ್ನು ಹೇಳಲು ಅವರಿಗೆ ಸಾಧ್ಯವಾಗಲಿಲ್ಲ.
ಅಕುಲ್ ಬಾಲಾಜಿ ತಮ್ಮ ಕಥೆಯನ್ನು ಹೇಳಿಕೊಂಡರು. ಒಬ್ಬ ನಟನಾಗಬೇಕು ಎಂದು ಚಿಕ್ಕಂದಿನಲ್ಲೇ ಕನಸು ಕಟ್ಟಿಕೊಂಡು ಬಂದವನು ನಾನು. ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಹುಟ್ಟಿ, ಕಡಪದಲ್ಲಿ ಬೆಳೆದು ಅದಾದ ಬಳಿಕ ನೆಲ್ಲೂರಿಗೆ ವಾಪಸ್ ಆದೆ. ಬಳಿಕ ಕಡಪ ಜಿಲ್ಲೆಯ ಸಣ್ಣ ಊರು ರೈಲ್ವೇ ಕೋಡೂರುನಲ್ಲಿ ನಮ್ಮದೊಂದು ಚಿತ್ರಮಂದಿರ ಇತ್ತು.
ನನ್ನ ಜೀವನವೆಲ್ಲಾ ಕೇವಲ ಸಿನಿಮಾ ಸಿನಿಮಾ ಎಂದಾಗಿತ್ತು. ಒಳ್ಳೆಯ ಸುಸ್ಥಿತಿಯಲ್ಲಿದ್ದ ಕುಟುಂಬ. ಆದರೂ ಒಂದು ಡೌನ್ ಫಾಲ್ ನೋಡ್ದೆ. ಅದಕ್ಕಾಗಿ ನಾನು ಯಾರನ್ನು ದೂರಲೂ ಇಷ್ಟಪಡಲ್ಲ. ಕೆಲವು ಸಲ ಹಣೆಬರಹ ಸರಿ ಇಲ್ಲದಿದ್ದರೆ ಏನು ಮಾಡಕ್ಕಾಗಲ್ಲ ಎಂದು ಹೇಳಿದರು.
ಅಂತಹ ಸಮಯದಲ್ಲಿ ನಮ್ಮ ತಂದೆ ತುಂಬಿದ ಸ್ಫೂರ್ತಿ, ಕೊಟ್ಟ ಪ್ರೋತ್ಸಾಹ ನನಗೆ ದೊಡ್ಡದು. ಕೆಲವು ಸಲ ಆತ್ಮಹತ್ಯೆಗೂ ಪ್ರಯತ್ನಿಸಿದ ಸಂದರ್ಭಗಳುಂಟು. ಆಗಲೇ ಜೀವನ ಇದಲ್ಲ ಇಲ್ಲಿಂದ ಆರಂಭ ಎಂಬ ಅರಿವಾಯಿತು. ಆಗ ಬೆಂಗಳೂರಿಗೆ ಬಂದಾಗ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ನಡುವೆ ರಿಯಾಲಿಟಿ ಶೋಗಳನ್ನು ನಡೆಸಿಕೊಂಡು ಬಂದೆ.
ಇಂದು ನಾನು ಇಲ್ಲಿದ್ದೇನೆ ಎಂದರೆ ಅದಕ್ಕೆ ರಿಯಾಲಿಟಿ ಶೋಗಳೇ ಕಾರಣ. ನಾನು ಮಾಡಿರುವ ರಿಯಾಲಿಟಿ ಶೋಗಳನ್ನು ಭಾರತದಲ್ಲಿ ಯಾರೂ ಮಾಡಲು ಪ್ರಯತ್ನಿಸಿಲ್ಲ ಎಂದು ಹೆಮ್ಮೆಯಿಂದ ಅಕುಲ್ ತಮ್ಮ ಜೀವನದ ಕೆಲ ಪುಟಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.