Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುನಾಮಿ ಕಿಟ್ಟಿ ಮುಖಕ್ಕೆ ಮಸಿ; ಕಣ್ಣೀರಿಟ್ಟ ನಟಿ ಶ್ರುತಿ
ಮಾತಿನಲ್ಲಿ ಒರಟು ಇರಬಹುದು. ಇತರರ ಜೊತೆ ಸಲುಗೆ ಇಂದ ಮಾತನಾಡಬಹುದು. ಆದ್ರೆ, ಬೇರೆಯವರ ತರಹ ಹಿಂದೆ ಒಂದು ಮುಂದೆ ಇನ್ನೊಂದು ಮಾತನಾಡುವ ಬುದ್ದಿ ಸುನಾಮಿ ಕಿಟ್ಟಿಗಿಲ್ಲ. ಅದನ್ನ ನೀವು ಕೂಡ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಗಮನಿಸಿರುತ್ತೀರಾ.
ಹೀಗಿದ್ದರೂ, 'ಬಿಗ್ ಬಾಸ್' ಮನೆ ಸದಸ್ಯರಿಗೆ ಸುನಾಮಿ ಕಿಟ್ಟಿ ಕಂಡ್ರೆ ಆಗಲ್ಲ. ಆಗಾಗ, ಒಂದಲ್ಲಾ ಒಂದು ಕಾರಣಕ್ಕೆ ಕಿಟ್ಟಿಯನ್ನ ಟಾರ್ಗೆಟ್ ಮಾಡುವ ಇತರೆ ಸ್ಪರ್ಧಿಗಳು ನಿನ್ನೆ ಸುನಾಮಿ ಕಿಟ್ಟಿ ಮುಖಕ್ಕೆ ಮಸಿ ಬಳಿದು ಅವಮಾನಿಸಿದರು. [ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!]
ಮನೆ ಸದಸ್ಯರು ಪರಸ್ಪರ ಮನಸ್ಸು ಮತ್ತು ಹೃದಯ ಎಷ್ಟು ಅರಿತುಕೊಂಡಿದ್ದಾರೆ ಅನ್ನುವುದನ್ನ ಪರೀಕ್ಷಿಸುವುದಕ್ಕೆ 'ಬಿಗ್ ಬಾಸ್' ನಿನ್ನೆ 'ನಾಕ್ ಆಫ್' ಅನ್ನುವ ವಿಶೇಷ ಚಟುವಟಿಕೆ ನೀಡಿದ್ದರು. ಅದರಲ್ಲಿ ಬಹುತೇಕ ಮಂದಿ ಒಂದೊಂದು ಕಾರಣ ಕೊಟ್ಟು ಕಿಟ್ಟಿ ಮುಖಕ್ಕೆ ಮಸಿ ಬಳಿದರು. ಮುಂದೆ ಓದಿ.....
ಕಿಟ್ಟಿ ಮುಖಕ್ಕೆ ಮಸಿ ಬಳಿದವರ್ಯಾರು?
'ಮನೆಯಲ್ಲಿ ಹೆಚ್ಚು ಮನುಷ್ಯತ್ವ ಇಲ್ಲದ ವ್ಯಕ್ತಿ' ಅಂತ ಅಯ್ಯಪ್ಪ, 'ಮನೆಯಲ್ಲಿ ಗಲೀಜಾಗಿರುವ ವ್ಯಕ್ತಿ' ಅಂತ ಕೃತಿಕಾ, 'Worst Attitude' ಅಂತ ನೇಹ ಗೌಡ, 'ನಂಬಿಕೆಗೆ ಅರ್ಹ ಅಲ್ಲ' ಅಂತ ನೇತ್ರ, 'Crooked ವ್ಯಕ್ತಿ' ಅಂತ ಪೂಜಾ ಗಾಂಧಿ ಮತ್ತು 'ಮನೆಯಲ್ಲಿ ತಾವು ದ್ವೇಷಿಸುವ ವ್ಯಕ್ತಿ' ಅಂತ ನಟಿ ಶ್ರುತಿ ಕಾರಣ ನೀಡಿ ಸುನಾಮಿ ಕಿಟ್ಟಿ ಮುಖಕ್ಕೆ ಮಸಿ ಬಳಿದರು. [ಹುಚ್ಚ ವೆಂಕಟ್ ಔಟ್ ಆದ್ಮೇಲೆ 'ಬಿಗ್ ಬಾಸ್' TRP ಏನಾಯ್ತು?]
ಬೇಸರಗೊಂಡ ಕಿಟ್ಟಿ
ಒಟ್ಟು ಆರು ಸದಸ್ಯರು ತಮಗೆ ಮಸಿ ಬಳಿದಿದ್ದಕ್ಕೆ ಸುನಾಮಿ ಕಿಟ್ಟಿ ಬೇಸರಗೊಂಡಿದ್ದರು. ಅದ್ರಲ್ಲೂ ನಟಿ ಶ್ರುತಿ ಮತ್ತು ನೇಹ ಗೌಡ ಕೊಟ್ಟ ಕಾರಣ ಅವರನ್ನ ಕೆರಳಿಸಿತ್ತು. [ನಟಿ ಶ್ರುತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಪಶ್ರುತಿ.!]
ಅಳಲು ತೋಡಿಕೊಂಡ ಕಿಟ್ಟಿ
''ಇವತ್ತು ನನಗೆ ಮಸಿ ಬಳಿದಿದ್ದಾರೆ. ನಾಳೆ ಕರ್ನಾಟಕದ ಜನ ಅವರಿಗೆ ಮಸಿ ಬಳಿಯುತ್ತಾರೆ. ಇನ್ಮುಂದೆ ಸೈಲೆಂಟ್ ಆಗಿರಲ್ಲ. ಎಲ್ಲರ ಗ್ರಹಚಾರ ಬಿಡಿಸುತ್ತೇನೆ'' ಅಂತ ಕಿಟ್ಟಿ ಕ್ಯಾಮರಾ ಮುಂದೆ ತಮ್ಮ ಅಳಲನ್ನ ತೋಡಿಕೊಳ್ತಿದ್ರು.
ಕಿಟ್ಟಿ ಪರ ಆನಂದ್
'ಬಿಗ್ ಬಾಸ್' ಮನೆಯ ಅರ್ಧಕರ್ಧ ಸದಸ್ಯರು ಕಿಟ್ಟಿ ವಿರುದ್ಧ ಮಾತನಾಡಿದ್ದರೆ, ಮಾಸ್ಟರ್ ಆನಂದ್ ಮಾತ್ರ ''ಬಿಗ್ ಬಾಸ್' ಮನೆಯಲ್ಲಿರುವ ಅರ್ಹ ಸದಸ್ಯ'' ಅಂತ ಕಿಟ್ಟಿಗೆ ಹಾರ ಹಾಕಿದ್ರು.
ಶ್ರುತಿಗೆ ಬೇಸರ
ಇನ್ನೂ ಕೃತಿಕಾ ನಟಿ ಶ್ರುತಿಯನ್ನ 'ಅಮ್ಮ-ಅಮ್ಮ' ಅಂತ ಹೇಳಿಕೊಂಡು ಓಡಾಡುವುದನ್ನ ಖಂಡಿಸಿ ಮಾಸ್ಟರ್ ಆನಂದ್, ಕೃತಿಕಾ ಮುಖಕ್ಕೆ ಮಸಿ ಬಳಿದದ್ದು ನಟಿ ಶ್ರುತಿಗೆ ಬೇಸರವಾಯ್ತು.
ಕಣ್ಣೀರಿಟ್ಟ ಶ್ರುತಿ
''ಬಳ್ಳಿಗೆ ಹೂ ಭಾರವೇ. ತಾಯಿಗೆ ಮಕ್ಕಳು ಭಾರವೇ . I LOVE YOU ALL. ಇಂತಹ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಅಂತದ್ರಲ್ಲಿ ನನಗೆ ಸಿಗುತ್ತಿದೆ. ದಯವಿಟ್ಟು ಅದನ್ನ ಕಡಿಮೆ ಮಾಡ್ಬೇಡಿ. ಕೃತಿಕಾ ನನ್ನ ಮಗಳಿದ್ದಹಾಗೆ'' ಅಂತ ನಟಿ ಶ್ರುತಿ ಕಣ್ಣೀರಿಟ್ಟರು.
ಪರಸ್ಪರ ಹಾರ ಬದಲಾಯಿಸಿಕೊಂಡ ರೆಹಮಾನ್-ನೇಹ ಗೌಡ
ಇನ್ನೂ ಇದೇ ಚಟುವಟಿಕೆಯಲ್ಲಿ 'Best Attitude' ಅಂತ ರೆಹಮಾನ್ ಗೆ ನೇಹಾ ಹಾರ ಹಾಕಿದ್ರೆ, 'ಉತ್ತಮ ನಡತೆ ಇರುವ ಸದಸ್ಯ' ಅಂತ ನೇಹ ಗೌಡಗೆ ರೆಹಮಾನ್ ಹಾರ ಹಾಕಿದ್ದು ಮತ್ತೊಮ್ಮೆ ಎಲ್ಲರ ಕಣ್ಣರಳಿಸಿತು.