'ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಬೋರೋ..ಬೋರು ಅಂತ ಮೂಗು ಮುರಿಯುತ್ತಿದ್ದವರ ಮೂಡ್ ಚೇಂಜ್ ಮಾಡಲು ಕಲರ್ಸ್ ಕನ್ನಡ ವಾಹಿನಿ ಹೊಸ ಟ್ವಿಸ್ಟ್ ನೀಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆ ಟ್ವಿಸ್ಟ್ ಪ್ರಕಾರ, 'ಬಿಗ್ ಬಾಸ್' ಮನೆಗೆ 'ಟಿ.ಆರ್.ಪಿ ಕಾ ಮಾಮ್ಲ' ಹುಚ್ಚ ವೆಂಕಟ್ ಎಂಟ್ರಿಕೊಟ್ಟಿದ್ದಾರಂತೆ. 'ದೊಡ್ಮನೆ' ಪ್ರವೇಶ ಮಾಡ್ತಿದ್ದಂತೆ, 'ಒಳ್ಳೆ ಹುಡುಗ' ಪ್ರಥಮ್ ಹಾಗೂ ಹುಚ್ಚ ವೆಂಕಟ್ ನಡುವೆ 'ಬಿಗ್' ಫೈಟ್ ನಡೆದಿದೆ ಎನ್ನಲಾಗಿದೆ.

ಸ್ಪರ್ಧಿ ಆಗಿ ಹೋದ್ರಾ ಹುಚ್ಚ ವೆಂಕಟ್.?
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ 'ವಿಶೇಷ ಅತಿಥಿ'ಯಾಗಿ ಭಾಗವಹಿಸಿದ್ದಾರೆ ಅಷ್ಟೆ. ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿಲ್ಲ ಎಂಬುದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಮಾಹಿತಿ.[ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

ಮೂರು ಗಂಟೆಗಳಲ್ಲಿ....
ಕೇವಲ 3 ಗಂಟೆಗಳ ಕಾಲ 'ಬಿಗ್ ಬಾಸ್' ಮನೆಯ ವಿಶೇಷ ಅತಿಥಿಯಾಗಲು ಹುಚ್ಚ ವೆಂಕಟ್ ಗೆ ಅವಕಾಶ ಸಿಕ್ತಂತೆ.['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

20 ನಿಮಿಷದಲ್ಲೇ ವಾಪಸ್.!
'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟ 20 ನಿಮಿಷದಲ್ಲೇ ಹುಚ್ಚ ವೆಂಕಟ್ ವಾಪಸ್ ಆಗ್ಬಿಟ್ರಂತೆ.! ಕಾರಣ ಮತ್ತೊಂದು ಹಲ್ಲೆ ಪ್ರಕರಣ.!

ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ.?
ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿರುವ ಪ್ರಕಾರ, 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ 20 ನಿಮಿಷಗಳಲ್ಲೇ ಹುಚ್ಚ ವೆಂಕಟ್ ವಾಪಸ್ ಆದರಂತೆ. ರಕ್ತ ಬರುವಂತೆ ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದಾರಂತೆ. ['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

ಕಳೆದ ಸೀಸನ್ ನಲ್ಲೂ ಇದೇ ರಂಪಾಟ
'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಗಾಯಕ ರವಿ ಮೂರೂರು ರವರಿಗೆ ಹೊಡೆದು ಹುಚ್ಚ ವೆಂಕಟ್ ಕಿಕ್ ಔಟ್ ಆಗಿದ್ದರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಕು'ಖ್ಯಾತಿ' ಪಡೆದಿದ್ದ ಹುಚ್ಚ ವೆಂಕಟ್.!
ರಿಯಾಲಿಟಿ ಶೋನಲ್ಲಿ ಹಲ್ಲೆ ಮಾಡಿ ಹುಚ್ಚ ವೆಂಕಟ್ ಕು'ಖ್ಯಾತಿ' ಪಡೆದಿದ್ದರು. ಈ ಬಾರಿ ಅದೇ ರಿಪೀಟ್ ಆದರೆ..?


Click it and Unblock the Notifications











