ಪ್ರತಿದಿನ ಬೇರೆಯವರ ಬಟ್ಟೆ ಒಗೆಯದೇ, ಭುವನ್ ಗೆ ಬೇರೆ ದಾರಿ ಇಲ್ಲ.!
ಮನೆಯಲ್ಲಿ ನಯಾಪೈಸೆ ಕೆಲಸ ಮಾಡದೇ ಇದ್ದರೂ, 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಮೇಲೆ, ರೂಲ್ಸ್ ಪ್ರಕಾರ ಎಲ್ಲರೂ ಎಲ್ಲಾ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಲೇಬೇಕು.
ಅದರಲ್ಲೂ, ಶಿಕ್ಷೆ ರೂಪದಲ್ಲಿ ಯಾರಿಗಾದರೂ, ಯಾವುದಾದರೂ ಕೆಲಸ ವಹಿಸಿದರೆ ಸ್ಪರ್ಧಿಗಳಿಗೆ ಕಿರಿಕಿರಿ ತಪ್ಪಿದಲ್ಲ. ಸದ್ಯಕ್ಕೆ ಭುವನ್ ಗೆ ಎದುರಾಗಿರುವುದು ಇದೇ ಪರಿಸ್ಥಿತಿ. ['ಬಿಗ್ ಬಾಸ್' ಮನೆಯಲ್ಲಿ ಸಂಜನಾ ಸ್ವಯಂವರ: ಭುವನ್ ಗದ್ದಲ.!]

ಪ್ರತಿ ವಾರ ಮನೆಯಿಂದ ಹೊರ ಹೋಗುವಾಗ, ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುತ್ತಾರೆ.
ಅದರಂತೆ, ಈ ವಾರ 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಿಂದ ಹೊರಬಿದ್ದ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಹಾಗೂ ನಟಿ ಶಾಲಿನಿ ರವರಿಗೆ ವಿಶೇಷ ಅಧಿಕಾರ ಲಭಿಸಿತು. ಅದರ ಅನುಸಾರ, ಪ್ರತಿದಿನ ಬೆಳಗ್ಗೆ ಮನೆ ಸದಸ್ಯರ ಬಟ್ಟೆ ತೊಳೆಯುವ ಒಬ್ಬ ಸದಸ್ಯರ ಹೆಸರನ್ನು ಇಬ್ಬರೂ ಸೇರಿ ಆಯ್ಕೆ ಮಾಡಬೇಕಿತ್ತು.

ತಕ್ಷಣ 'ಭುವನ್ ಪೊನ್ನಣ್ಣ' ಹೆಸರನ್ನು ಶಾಲಿನಿ ಹಾಗೂ ಶೀತಲ್ ಶೆಟ್ಟಿ ಸೂಚಿಸಿದರು. ಪರಿಣಾಮ, 'ಬಿಗ್ ಬಾಸ್' ರವರ ಮುಂದಿನ ಆದೇಶದವರೆಗೆ 'ಬಿಗ್' ಮನೆಯಲ್ಲಿ ಸದಸ್ಯರು ನೀಡುವ ಬಟ್ಟೆಯನ್ನು ಒಗೆಯದೇ ಭುವನ್ ಗೆ ಬೇರೆ ದಾರಿಯಿಲ್ಲ.


Click it and Unblock the Notifications











