Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಕಲೇಟ್ ಕಳ್ಳರು, ಇವರೆಂಥಾ ಸೆಲೆಬ್ರಿಟಿಗಳು.! 'ಚೀಪ್' ಅವರೋ.. ಇವರೋ..?
Recommended Video
ಡೈಲಾಗ್ ನಂಬರ್ 1: ಕ್ಯಾಪ್ಟನ್ ಆದಾಗ ರಿಯಾಝ್ ಹಣ್ಣನ್ನ ಎಲ್ಲರಿಗೂ ಸಮನಾಗಿ ಹಂಚಿದ್ದಕ್ಕೆ, 'ಇದು ಚೀಪ್ ಥಿಂಕಿಂಗ್' ಅಂತ ಸುದೀಪ್ ಎದುರೇ ಆಶಿತಾ ಕಾಮೆಂಟ್ ಮಾಡಿದ್ದರು. ಸಾಲದಕ್ಕೆ ನಾವು ಎಲ್ಲವನ್ನೂ ಹಂಚಿಕೊಂಡು ತಿನ್ನುತ್ತೇವೆ ಎಂದು ದೊಡ್ಡತನ ಮೆರೆದಿದ್ದರು.
ಡೈಲಾಗ್ ನಂಬರ್ 2: 'ಸ್ಟಾಕ್ ಚೆಕ್ಕಿಂಗ್ ಮಾಡಿದರೆ ಉರಿಯುತ್ತೆ' ಅಂತ ಅನುಪಮಾ ರೋಷಾವೇಶದಿಂದ ಹೇಳಿದ್ದರು.
ಡೈಲಾಗ್ ನಂಬರ್ 3: ಹಾಲನ್ನ ಎತ್ತಿಟ್ವಿ ನಿಜ, ಆದ್ರೆ ಅದರಿಂದ ಏನನ್ನೂ ಮಾಡಿಕೊಂಡು ತಿಂದಿಲ್ಲ. ಒಂದು ಟೀ ಮಾಡೋಕೆ ಅಂತ ನಿಂತರೆ ನಾಲ್ಕು ಜನ ಮುಂದೆ ನಿಲ್ಲುತ್ತಾರೆ, ಹಿಂಸೆ ಆಗುತ್ತದೆ ಅಂತ ಅನುಪಮಾ ಗೌಡ ಕಣ್ಣು ಕೆಂಪಗೆ ಮಾಡಿಕೊಂಡಿದ್ದರು.
ಈಗ ಈ ಎಲ್ಲ ಡೈಲಾಗ್ ಗಳೇ ಸೆಲೆಬ್ರಿಟಿ ಸ್ಪರ್ಧಿಗಳಿಗೆ ತಿರುಗೇಟು ನೀಡುತ್ತಿವೆ. ಹಣ್ಣು ಹಂಚಿಕೆ ಮಾಡಿದ್ದಕ್ಕೆ ಆಶಿತಾ 'ಚೀಪ್' ಎಂದಿದ್ದರು. ಆದ್ರೆ, ಅದೇ ಆಶಿತಾಗೆ ಅನುಪಮಾ ಗೌಡ ಬಿಸ್ಕತ್ತು, ಕೇಕ್ ಲೆಕ್ಕ ಹಾಕಿ ತೆಗೆದುಕೊಂಡಿದ್ದು ಕಾಣಲಿಲ್ಲ.! ಒಮ್ಮೆ ಹಾಲನ್ನ ಮುಚ್ಚಿಟ್ಟು ದೊಡ್ಡ ರಾಮಾಯಣಕ್ಕೆ ಕಾರಣವಾಗಿದ್ದ ಅನುಪಮಾ ಈಗ ಚಾಕಲೇಟ್ ಕದ್ದು ತಿಂದಿದ್ದಾರೆ.
ಮತ್ತೆತ್ತಿದರೆ, ಜನಸಾಮಾನ್ಯ ಸ್ಪರ್ಧಿಗಳತ್ತ ಬೆಟ್ಟು ಮಾಡುವ ಸೆಲೆಬ್ರಿಟಿ ಸ್ಪರ್ಧಿಗಳನ್ನ ವೀಕ್ಷಕರು ತೀರಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಡುಗೆ ಮನೆಯಲ್ಲಿ ಅನುಪಮಾ ಗೌಡ ವರ್ತನೆ ಬಗ್ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ ಛೀಮಾರಿ ಹಾಕುತ್ತಿದ್ದಾರೆ. ಮುಂದೆ ಓದಿರಿ....
ಕಳ್ಳಿ ಅನುಪಮಾ ಗೌಡ.!
ಚಾಕಲೇಟ್ ಕದ್ದು ತಿಂದ ಅನುಪಮಾ ಗೌಡ ಟ್ರೋಲ್ ಪೇಜ್ ಗಳಿಗೆ ಆಹಾರ ಆಗಿರುವುದು ಹೀಗೆ....
ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?
ಇದು ವೀಕ್ಷಕರ ಖಡಕ್ ಪ್ರಶ್ನೆ
ಚಾಕಲೇಟ್ ಕದ್ದು ತಿನ್ನುವ, ಹಾಲು ಮುಚ್ಚಿಡುವ ಸೆಲೆಬ್ರಿಟಿಗಳ ಬಗ್ಗೆ ವೀಕ್ಷಕರಿಗೆ ಬೇಸರ ಇದೆ. ''ಇದೇ ಕೆಲಸವನ್ನ ಜನಸಾಮಾನ್ಯ ಸ್ಪರ್ಧಿಗಳು ಮಾಡಿದ್ರೆ, ಸೆಲೆಬ್ರಿಟಿ ಸ್ಪರ್ಧಿಗಳು ಸುಮ್ಮನೆ ಬಿಡ್ತಿದ್ರಾ'' ಅನ್ನೋದು ವೀಕ್ಷಕರ ಪ್ರಶ್ನೆ.
ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...
ಸುದೀಪ್ ಮಾತನಾಡಬೇಕು
ರಿಯಾಝ್ ಮಾಡಿದ ಕೆಲಸ ತಪ್ಪು ಎನ್ನುವ ಸೆಲೆಬ್ರಿಟಿಗಳು ಅನುಪಮಾ ಮಾಡಿದ ಕೆಲಸಕ್ಕೆ ಏನಂತಾರೆ.? ''ಬರುವ ಶನಿವಾರ ಈ ಟಾಪಿಕ್ ಬಗ್ಗೆ ಸುದೀಪ್ ಮಾತನಾಡಲೇಬೇಕು'' ಅಂತ ವೀಕ್ಷಕರು ಒತ್ತಾಯಿಸುತ್ತಿದ್ದಾರೆ.
ದೊಡ್ಡ ರಾದ್ಧಾಂತ ಆಗಲು, ಸಮೀರಾಚಾರ್ಯ ಸಿಟ್ಟಾಗಲು ನೇರ ಕಾರಣ ಅನುಪಮಾ.!
ನಾಚಿಕೆ ಇಲ್ವಾ.?
''ಹಣ್ಣನ್ನ ರಿಯಾಝ್ ಹಂಚಿದರೆ ಚೀಪ್, ಅದೇ ಸೆಲೆಬ್ರಿಟಿಗಳು ಚಾಕಲೇಟ್ ಕದ್ದು ತಿಂದರೆ ಕ್ಯೂಟ್. ಡಬಲ್ ಸ್ಟ್ಯಾಂಡರ್ಡ್ ಇರುವ ಸೆಲೆಬ್ರಿಟಿಗಳಿಗೆ ನಾಚಿಕೆ ಅನ್ನೋದೇ ಇಲ್ವಾ.?'' - ವೀಕ್ಷಕರ ಪ್ರಶ್ನೆ
ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!
ಬೇಜವಾಬ್ದಾರಿ ಯಾರಿಗೆ ಹೆಚ್ಚು.?
''ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಬೇಜವಾಬ್ದಾರಿ ಜಾಸ್ತಿ'' ಎಂಬುದು ವೀಕ್ಷಕರ ಅಭಿಪ್ರಾಯ.
ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!
ಈ ಕಾಮೆಂಟ್ಸ್ ನೋಡಿ....
'ಬಿಗ್ ಬಾಸ್' ಕಾರ್ಯಕ್ರಮವನ್ನ ವೀಕ್ಷಕರು ಎಷ್ಟು ಸೂಕ್ಷ್ಮವಾಗಿ ನೋಡುತ್ತಾರೆ ಎಂಬುದಕ್ಕೆ ಈ ಕಾಮೆಂಟ್ ಸಾಕ್ಷಿ.
ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!
ಇದು ಚೀಪ್ ಅಲ್ವಾ.?
ಮೂರು ಜನ ಸೆಲೆಬ್ರಿಟಿಗಳು ಚಾಕಲೇಟ್ ತಿನ್ನುತ್ತಿರುವಾಗ, ಸಮೀರಾಚಾರ್ಯ ಜೊತೆ ಹಂಚಿಕೊಂಡು ತಿನ್ನಲಿಲ್ಲ. ಇದು ಚೀಪ್ ಅಲ್ವಾ.? ಇದಕ್ಕೆ ಮನುಷ್ಯತ್ವ ಅಂತಾರಾ ಅನ್ನೋದು ವೀಕ್ಷಕರ ಪ್ರಶ್ನೆ
ಪ್ರಜ್ಞೆ ಬೇಡ್ವಾ.?
ಜನ ನೋಡುತ್ತಿರುತ್ತಾರೆ ಎಂಬ ಸಾಮಾನ್ಯ ಜ್ಞಾನ ಇಲ್ಲದೆ, ಈ ತರಹ ಕೆಲಸ ಮಾಡುವ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಏನ್ನನ್ನಬೇಕು.?
ಇದು ಯಾವ ನ್ಯಾಯ
''ರಿಯಾಝ್ ಮಾಡಿದರೆ ತಪ್ಪು, ಇವರೆಲ್ಲ ಮಾಡಿದರೆ ಸರಿ... ವಾವ್.! ಇದು ಯಾವ ನ್ಯಾಯ... ಸುದೀಪ್ ಪ್ಲೀಸ್ ಕೇಳಿ ಇದನ್ನ'' - ಇದು ವೀಕ್ಷಕರ ಆಗ್ರಹ
ಸಾವಿರ ಸಲ ಬರೆಸಬೇಕಿತ್ತು
''ಹಾಗಲಕಾಯಿ ಜ್ಯೂಸ್ ಕುಡಿಸುವ ಬದಲು, ನಾನು ಮಾಡಿದ್ದು ತಪ್ಪು ಅಂತ ಸಾವಿರ ಸಲ ಬರೆಯಿಸಬೇಕಿತ್ತು'' 'ಬಿಗ್ ಬಾಸ್' ಕೊಟ್ಟ ಶಿಕ್ಷೆ ಬಗ್ಗೆ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿರುವುದು ಹೀಗೆ....
'ಕಳ್ಳಿ' ಬೋರ್ಡ್ ಕೊಡಬೇಕಿತ್ತು
''ಅನುಪಮಾಗೆ 'ಕಳ್ಳಿ' ಅನ್ನೋ ಬೋರ್ಡ್ ಕೊಟ್ಟು ಒಂದು ದಿನ ಪೂರ್ತಿ ಹಾಕಿಕೊಳ್ಳಬೇಕು ಎನ್ನಬೇಕಿತ್ತು'' ಎಂಬುದು ವೀಕ್ಷಕರ ಅಭಿಪ್ರಾಯ