Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ.!
Recommended Video
'ಜೊತೆ ಜೊತೆಯಲಿ' ಹಾಗೂ 'ನೀಲಿ' ಸೀರಿಯಲ್ ಗಳಲ್ಲಿ ಅಭಿನಯಿಸಿದ ನಟಿ ಆಶಿತಾ ಚಂದ್ರಪ್ಪಗೆ 'ಗಣರಾಜ್ಯ' ಅಂದ್ರೇನು ಎಂಬುದೇ ಗೊತ್ತಿಲ್ಲ.! ಹಾಗೇ, 'ಬಾಹುಬಲಿ' ಅಂದ್ರೆ ಗೊಮ್ಮಟೇಶ್ವರನ ಇನ್ನೊಂದು ಹೆಸರೂ ಅನ್ನೋದೂ ಕೂಡ ಆಕೆಗೆ ತಿಳಿದಿಲ್ಲ.!
ಹೌದು, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರದ ಕ್ಯಾಪ್ಟನ್ ಟಾಸ್ಕ್ ಅನುಸಾರವಾಗಿ ಸ್ಪರ್ಧಿಗಳ ಸಾಮಾನ್ಯ ಜ್ಞಾನವನ್ನ 'ಬಿಗ್ ಬಾಸ್' ಪರೀಕ್ಷಿಸಿದರು.
ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!
ಇದರಂತೆ, ನಟಿ ಆಶಿತಾಗೆ ''ಭಾರತ ಗಣರಾಜ್ಯಗೊಂಡಿದ್ದು ಯಾವಾಗ.?'' ಎಂದು 'ಬಿಗ್ ಬಾಸ್' ಪ್ರಶ್ನಿಸಿದರು. ಆಗ, ''ವಾಟ್ ಈಸ್ ಗಣರಾಜ್ಯ.?'' ಎಂದು ಕೇಳಿಬಿಟ್ಟರು ಆಶಿತಾ.
'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!
'ಗಣರಾಜ್ಯ' ಅಂದರೆ 'ರಿಪಬ್ಲಿಕ್' ಅಂತ ಸಮೀರಾಚಾರ್ಯ ಹೇಳಿದ್ದಕ್ಕೆ '1960' ಅಂತ ತಪ್ಪು ಉತ್ತರ ಕೊಟ್ಟರು ಆಶಿತಾ.
ಬಳಿಕ, ''ಬಾಹುಬಲಿ ಪ್ರತಿಮೆ ಇರುವ ಜಾಗ ಯಾವುದು.?'' ಎಂದು 'ಬಿಗ್ ಬಾಸ್' ಪ್ರಶ್ನಿಸಿದ್ದಕ್ಕೆ, ''ಸಿನಿಮಾನಾ.? ಹೈದರಾಬಾದ್.!'' ಎಂದು ಆಶಿತಾ ಉತ್ತರಿಸಿದಾಗ ಎಲ್ಲರೂ ನಕ್ಕರು.
ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!
''ಸರಿಯಾದ ಉತ್ತರ ಶ್ರವಣಬೆಳಗೊಳ'' ಎಂದು 'ಬಿಗ್ ಬಾಸ್' ಹೇಳಿದಾಗ ''ಓ... ದೇವರದ್ದಾ.? ನನಗೇನು ಗೊತ್ತು.?'' ಎಂದರು ಆಶಿತಾ. ''ಗೊಮ್ಮಟೇಶ್ವರನ ಹೆಸರು ಬಾಹುಬಲಿ'' ಎಂದು ಸಿಹಿ ಕಹಿ ಚಂದ್ರು ಹೇಳಿದಕ್ಕೆ ''ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ'' ಎಂದರು ಆಶಿತಾ.
ಎರಡೂ ತಪ್ಪು ಉತ್ತರಗಳನ್ನು ನೀಡಿದ ಆಶಿತಾ, ಕ್ಯಾಪ್ಟನ್ ರೇಸ್ ನಿಂದ ಹೊರಬಿದ್ದರು.