Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿ ಭಾವುಕರಾದ ಚಂದನ್ ಶೆಟ್ಟಿ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಲು ಕ್ಷಣಗಣನೆ ಶುರು ಆಗಿರುವುದರಿಂದ ಚಂದನ್ ಶೆಟ್ಟಿ ಕೊಂಚ ಭಾವುಕರಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ತಮ್ಮ 105 ದಿನಗಳ ಜರ್ನಿಯನ್ನ ಮೆಲುಕು ಹಾಕುತ್ತಿರುವ ಚಂದನ್ ಶೆಟ್ಟಿ, ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ತಮಗೆ ಶ್ರುತಿ ಪ್ರಕಾಶ್ ಮೇಲೆ ಕ್ರಷ್ ಆಗಿದೆ ಎಂದು ಚಂದನ್ ಶೆಟ್ಟಿ ಹೇಳಿದ್ದರು. ಆದ್ರೆ, ಶ್ರುತಿ ಪ್ರಕಾಶ್ ಹೆಚ್ಚು ಆತ್ಮೀಯರಾಗಿದ್ದು ಜಯರಾಂ ಕಾರ್ತಿಕ್ ಜೊತೆಗೆ. ಹೀಗಾಗಿ, ಈ ಬಾರಿಯ 'ಬಿಗ್ ಬಾಸ್' ಒಂಥರಾ ಲವ್ ಟ್ರೈಯಾಂಗಲ್ ಗೆ ಸಾಕ್ಷಿ ಆಗಿತ್ತು.
ಇದೇ ಗ್ಯಾಪ್ ನಲ್ಲಿ ಶ್ರುತಿ ಪ್ರಕಾಶ್ ಅವರನ್ನ ಚಂದನ್ ಶೆಟ್ಟಿ ನಾಮಿನೇಟ್ ಮಾಡಿದ್ದರು. ಸಾಲದಕ್ಕೆ, ಶ್ರುತಿ ಪ್ರಕಾಶ್ ಜೊತೆ ಮಾಡ್ತಿರೋದೆಲ್ಲ ಬರೀ ಡವ್ ಅಂತೆಲ್ಲ ಹೇಳಿಕೆ ನೀಡಿದ್ದರು. ಇದರಿಂದ ಶ್ರುತಿಗೆ ಸ್ವಲ್ಪ ಬೇಸರ ಕೂಡ ಆಗಿತ್ತು.
ಇದೀಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದ್ಮೇಲೆ ಶ್ರುತಿಗೆ ಚಂದನ್ ಕ್ಷಮೆ ಕೇಳಿದ್ದಾರೆ. ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಶ್ರುತಿ ಪ್ರಕಾಶ್ ಬಳಿ ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಇತ್ತ ದೊಡ್ಡ ಮನಸ್ಸಿನ ಶ್ರುತಿ ಕೂಡ ಚಂದನ್ ರನ್ನ ಕ್ಷಮಿಸಿದ್ದಾರೆ.
'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?
ಗ್ರ್ಯಾಂಡ್ ಫಿನಾಲೆ ವರೆಗೂ ಬಂದ ಶ್ರುತಿ ಪ್ರಕಾಶ್ ಸದ್ಯ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ. ನಿವೇದಿತಾ ಕೂಡ ಔಟ್ ಆಗಿದ್ದಾರೆ.
ಚಂದನ್ ಶೆಟ್ಟಿ, ದಿವಾಕರ್ ಹಾಗೂ ಜಯರಾಂ ಕಾರ್ತಿಕ್ ಟಾಪ್ 3 ಹಂತಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಮೂವರ ಪೈಕಿ ಯಾರಿಗೆ 'ಬಿಗ್ ಬಾಸ್' ಟ್ರೋಫಿ ಸಿಗುತ್ತೋ ನೋಡ್ಬೇಕು.