Don't Miss!
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?
Recommended Video
ಬೀದಿ ಬೀದಿಗಳಲ್ಲಿ ಆಯುರ್ವೇದಿಕ್ ಪ್ರಾಡಕ್ಟ್ ಮಾರುತ್ತಾ ಕಾಲ ಕಳೆಯುತ್ತಿದ್ದ 'ಸೇಲ್ಸ್ ಮ್ಯಾನ್' ದಿವಾಕರ್ 'ಬಿಗ್ ಬಾಸ್' ಮನೆಗೆ ಬಂದ್ಮೇಲೆ ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ.
ಹಿಂದು ಮುಂದೆ ಯೋಚನೆ ಮಾಡದೆ, ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ, ಅನಿಸಿದ್ದನ್ನ ನೇರವಾಗಿ ಮಾತನಾಡುವ ದಿವಾಕರ್ ಕಂಡ್ರೆ 'ಬಿಗ್ ಬಾಸ್' ಮನೆಯಲ್ಲಿ ಅಷ್ಟಕಷ್ಟೆ.
'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!
ಹಾಗ್ನೋಡಿದ್ರೆ, ಮೊದಲೆರಡು ವಾರ ಜಗಳ, ಗದ್ದಲ, ಗಲಾಟೆಯಿಂದ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಸದ್ದು ಮಾಡಿದವರು ಇದೇ ದಿವಾಕರ್. ಇಂತಿಪ್ಪ ದಿವಾಕರ್ ಗೆ 'ದೊಡ್ಮನೆ'ಯಲ್ಲಿ ಆತ್ಮೀಯ ಗೆಳೆಯ ಯಾರು ಗೊತ್ತಾ.? ಬೇರಾರೂ ಅಲ್ಲ, ಚಂದನ್ ಶೆಟ್ಟಿ.!
ತಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ಚಂದನ್ ಶೆಟ್ಟಿ ಅಂದ್ರೆ ದಿವಾಕರ್ ಗೆ ಅಚ್ಚುಮೆಚ್ಚು. ಹೀಗಾಗಿ ತಮಗಿಂತ ಮುಂಚೆ ಚಂದನ್ ಶೆಟ್ಟಿ ಔಟ್ ಆದರೆ ಬೇಸರ ಆಗುತ್ತೆ ಅಂತ ದಿವಾಕರ್ ಹೇಳಿಕೊಂಡಿದ್ದಾರೆ.
''ನಾನು ಇರುವವರೆಗೂ ನೀನು ಹೋಗಬಾರದು ಅಷ್ಟೆ. ಯಾರಿಗೆ ಬೇಜಾರು ಆಗುತ್ತೋ, ಗೊತ್ತಿಲ್ಲ. ನನಗಂತೂ ನೀನು (ಚಂದನ್ ಶೆಟ್ಟಿ) ಹೋದರೆ ಬೇಜಾರು ಆಗುತ್ತೆ. ನಾನು ನಿನಗಿಂತ ಮುಂಚೆ ಹೋದರೆ ಪರ್ವಾಗಿಲ್ಲ. 'ಬಿಗ್ ಬಾಸ್' ಮನೆಗೆ ಬಂದು ನನಗೆ ಒಳ್ಳೆಯ ಸ್ನೇಹಿತ ಸಿಕ್ಕಿದ್ದಾನೆ. 'ಬಿಗ್ ಬಾಸ್'ನಲ್ಲಿ ಏನು ಗೆದ್ದೆ ಎಂದರೆ ಒಳ್ಳೆಯ ಸ್ನೇಹಿತ ಗೆದ್ದೆ ಎನ್ನುತ್ತೇನೆ'' ಎಂದು ಚಂದನ್ ಶೆಟ್ಟಿಗೆ ದಿವಾಕರ್ ಹೇಳಿದರು.
ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?
ದಿವಾಕರ್ ಮಾತುಗಳನ್ನು ಕೇಳಿ ಚಂದನ್ ಶೆಟ್ಟಿ ಖುಷಿ ಪಟ್ಟರು. ಇದೇ ವೇಳೆ ''ನಾವೆಲ್ಲ ಒಳ್ಳೆಯ ಫ್ರೆಂಡ್ಸ್. ನಾವು ಒಂದು ತಂಡ ಅಂತಿಲ್ಲ. ನಮ್ಮ ನಮ್ಮಲ್ಲಿ ಒಂದೊಳ್ಳೆ ಫ್ರೆಂಡ್ ಶಿಪ್ ಬೆಳೆದಿದೆ. ಒಳ್ಳೆಯ ಬಾಂಧವ್ಯ ಇದೆ. ಸದ್ಯ ಸಮೀರಾಚಾರ್ಯ ಹೋಗಲಿಲ್ಲ. ಅವರು ಹೋಗಿದ್ದರೆ, ನನಗೆ ತುಂಬಾ ಬೇಜಾರು ಆಗುತ್ತಿತ್ತು'' ಎಂದು ಚಂದನ್ ಶೆಟ್ಟಿ ಹೇಳಿದರು.