Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಧ ಕೋಟಿ ಬಹುಮಾನ ಹಣದಲ್ಲಿ ಚಂದನ್ ಶೆಟ್ಟಿ ಮತ್ತು ಫ್ಯಾಮಿಲಿ ಏನ್ ಮಾಡ್ತಾರೆ ಗೊತ್ತಾ.?
Recommended Video
'ಮೂರೇ ಮೂರು ಪೆಗ್ ಗೆ...' ಹಾಡಿನ ಮೂಲಕ ಕರುನಾಡಲ್ಲಿ ಹೊಸ ಸಂಚಲನ ಹುಟ್ಟು ಹಾಕಿದ ಕನ್ನಡ Rapper ಚಂದನ್ ಶೆಟ್ಟಿ ಸದ್ಯ 'ಬಿಗ್ ಬಾಸ್' ವಿನ್ನರ್ ಆಗಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಚಂದನ್ ಶೆಟ್ಟಿ, ಇದೀಗ ಅದೇ ಅಭಿಮಾನಿಗಳ ಕೃಪಾಕಟಾಕ್ಷದಿಂದ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
106 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇರುವಲ್ಲಿ ಯಶಸ್ವಿ ಆದ ಚಂದನ್ ಶೆಟ್ಟಿಗೆ, ಗೆಲುವಿನ ಟ್ರೋಫಿಯೊಂದಿಗೆ ಅರ್ಧ ಕೋಟಿ ರೂಪಾಯಿ (ಐವತ್ತು ಲಕ್ಷ) ಲಭಿಸಿದೆ.
ಬಹುಮಾನವಾಗಿ ಸಿಕ್ಕಿರುವ ಐವತ್ತು ಲಕ್ಷ ರೂಪಾಯಿಯಲ್ಲಿ ಚಂದನ್ ಶೆಟ್ಟಿ ಮತ್ತು ಕುಟುಂಬ ಏನ್ ಮಾಡ್ತಾರೆ ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ತಂದೆ ಕೈಗೆ ಹಣ ಕೊಟ್ಟ ಚಂದನ್ ಶೆಟ್ಟಿ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಗೆದ್ದ ಚಂದನ್ ಶೆಟ್ಟಿಗೆ ಐವತ್ತು ಲಕ್ಷ ರೂಪಾಯಿ ಇರುವ ಸೂಟ್ ಕೇಸ್ ನ ಸುದೀಪ್ ನೀಡಿದರು. ತಕ್ಷಣ ಆ ಸೂಟ್ ಕೇಸ್ ನ ಚಂದನ್ ಶೆಟ್ಟಿ ತಮ್ಮ ತಂದೆಗೆ ನೀಡಿದರು. ಇದಕ್ಕೆ ಕಾರಣ ಏನು ಅಂದ್ರೆ...
ಸ್ವಂತ ಮನೆ ಮಾಡಬೇಕು.!
''ನಮ್ಮ ಕುಟುಂಬಕ್ಕೆ ಈ ಭೂಮಿ ಮೇಲೆ ಸ್ವಂತ ಜಾಗ ಅಂತ ಇಲ್ಲ. ಇದ್ದ ಆಸ್ತಿಯನ್ನ ಅನಿವಾರ್ಯ ಕಾರಣಗಳಿಂದ ಮಾರಬೇಕಾಯಿತು. ಸ್ವಂತ ಮನೆ ಮಾಡಬೇಕು ಎಂಬುದು ನನ್ನ ತಂದೆ ಆಸೆ. ಬರುವ ಹಣದಲ್ಲಿ ನನ್ನ ತಂದೆ ಆಸೆಯನ್ನ ಈಡೇರಿಸುತ್ತೇನೆ'' ಎಂದು ವಾರಗಳ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಹೇಳಿಕೊಂಡಿದ್ದರು. ಆಡಿದ ಮಾತಿನಂತೆ, 'ಬಿಗ್ ಬಾಸ್' ಗೆದ್ದ ಮೇಲೆ ತಮ್ಮ ತಂದೆಗೆ ಬಹುಮಾನ ಹಣವನ್ನು ಚಂದನ್ ಶೆಟ್ಟಿ ನೀಡಿದರು.
ಇವರೆಲ್ಲ 'ಬಿಗ್ ಬಾಸ್' ಗೆಲ್ಲಬೇಕಂತೆ.! ಯಾಕಂತೆ.?
ಚಂದನ್ ತಾಯಿ ಕೂಡ ಅದನ್ನೇ ಹೇಳಿದ್ದರು.!
''ನಮಗೆ ಸ್ವಂತ ಮನೆ ಇಲ್ಲ. ಇದ್ದ ಮನೆ ಕಳೆದುಕೊಂಡಿದ್ದೇವೆ. ಸಾಯುವ ಮುನ್ನ ಸ್ವಂತ ಮನೆ ಮಾಡಿಕೊಂಡು ನೆಮ್ಮದಿ ಆಗಿರಬೇಕು ಎಂಬ ಆಸೆ ಇದೆ. ಗೆದ್ದ ದುಡ್ಡಲ್ಲಿ ಮನೆ ಮಾಡಬೇಕು ಅಂತ ಆಸೆ ಇದೆ'' ಎಂದು ಚಂದನ್ ಶೆಟ್ಟಿ ತಾಯಿ ಕೂಡ ಹೇಳಿದ್ದರು.
ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!
ಯಾವುದೇ ಹಬ್ಬ ಮಾಡಿಲ್ಲ.!
ಮೂರು ತಿಂಗಳಿನಿಂದ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ಇದ್ದ ಕಾರಣ, ತಮ್ಮ ಮನೆಯಲ್ಲಿ ಚಂದನ್ ಶೆಟ್ಟಿ ಕುಟುಂಬ ಯಾವುದೇ ಹಬ್ಬ ಆಚರಿಸಲಿಲ್ವಂತೆ.
'ಬಿಗ್ ಬಾಸ್' ಗೆದ್ದ ಅರ್ಹ ವ್ಯಕ್ತಿ ಚಂದನ್ ಶೆಟ್ಟಿ: ವೀಕ್ಷಕರಿಗೆ ಖುಷಿಯೋ ಖುಷಿ.!
ಚಂದನ್ ಶೆಟ್ಟಿ ಪ್ರಾಣಿ ಪ್ರಿಯ
ಚಂದನ್ ಶೆಟ್ಟಿ ಪ್ರಾಣಿ ಪ್ರಿಯ. ಹೀಗಾಗಿ, 'ಬಿಗ್ ಬಾಸ್' ಗೆದ್ದಿರುವ ಚಂದನ್ ಶೆಟ್ಟಿಗೆ ಸರ್ಪ್ರೈಸ್ ನೀಡಲು ತಂದೆ-ತಾಯಿ ನಾಯಿ ಮರಿಯೊಂದನ್ನು ತಂದಿದ್ದಾರೆ.