Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ನಿಮಗೆಷ್ಟು ತಿಳಿದಿದೆ?
'ಬಿಗ್ ಬಾಸ್' ಕನ್ನಡದ ಕಾರ್ಯಕ್ರಮದ ಈ ಹಿಂದಿನ ಆವೃತ್ತಿಗಳಲ್ಲಿ ಕಂಡಂತೆ ಈ ಬಾರಿ ಯಾರಾದರೂ ಧಾರ್ಮಿಕ ಪ್ರತಿಪಾದಕರು ಬರಬಹುದು ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆಗೆ ಉತ್ತರವಾಗಿ ಬಂದವರೇ ಪಂಡಿತ ಸಮೀರಾಚಾರ್ಯ.
ದೇವಾಸ್ಥಾನದ ಆರ್ಚಕರು ಎಂದಾಕ್ಷಣ ಬರಿ ಪೂಜೆ, ಪುನಸ್ಕಾರ, ದೈವ ಆರಾಧನೆ ಮಾತ್ರ ಗೊತ್ತಿರುತ್ತೆ ಎಂದುಕೊಂಡಿದ್ದರೇ ತಪ್ಪು. ಸಮೀರಾಚಾರ್ಯ ಅವರು ಬಹುಮುಖ ಪ್ರತಿಭೆ.
ಧಾರ್ಮಿಕ ತತ್ವಗಳು, ಆದರ್ಶಗಳ ಜೊತೆಗೆ ವಿವಿಧ ಬಗೆಯ ಪ್ರತಿಭೆ ಹೊಂದಿರುವ ವ್ಯಕ್ತಿ. ಬಿಗ್ ಬಾಸ್ ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ಒಂದು ಸಣ್ಣ ಪರಿಚಯ ಇಲ್ಲಿದೆ ನೋಡಿ.
ಹುಬ್ಬಳ್ಳಿಯ ಆರ್ಚಕರು
ಪಂಡಿತ ಸಮೀರಾಚಾರ್ಯ. ವಯಸ್ಸು 28. ಮದುವೆ ಆಗಿ ಒಂದೂವರೆ ವರ್ಷವಾಗಿದೆ. ಇವರ ಪತ್ನಿಯ ಹೆಸರು ಶ್ರಾವಣಿ.
ರಕ್ಷಿತ್ ಶೆಟ್ಟಿ ಅಂದ್ರೆ ಇಷ್ಟ
ಪಂಡಿತ ಸಮೀರಾಚಾರ್ಯ ಅವರಿಗೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅಂದ್ರೆ ತುಂಬ ಇಷ್ಟ. ಹಾಗೂ ಆಲೂ ಪರೋಟ ಅಂದ್ರೆ ಇಷ್ಟ,
ಬಹುಮುಖ ಪ್ರತಿಭೆ
ಪಂಡಿತ ಸಮೀರಾಚಾರ್ಯ ಅವರು ಬರಿ ಆರ್ಚಕರು ಮಾತ್ರವಲ್ಲ. ಒಳ್ಳೆಯ ಪ್ರತಿಭೆ ಕೂಡ ಹೌದು. ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು ತಬಲ ನುಡಿಸುತ್ತಾರೆ. ಮಿಮಿಕ್ರಿ ಕೂಡ ಮಾಡ್ತಾರೆ.
ಟಿವಿಯಲ್ಲೂ ಕಾರ್ಯಕ್ರಮ ನೀಡಿದ್ದಾರೆ
ಟಿವಿಯಲ್ಲಿ ಹಲವು ಬಾರಿ ಪ್ರವಚನ ಕಾರ್ಯಕ್ರಮಗಳನ್ನ ಪಂಡಿತ ಸಮೀರಾಚರ್ಯ ಅವರು ನೀಡಿದ್ದಾರೆ.
'ಬಿಗ್ ಬಾಸ್'ಗೆ ಬಂದ ಉದ್ದೇಶ
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆಲ್ಲುವ ಹಣದಿಂದ ದೇವಸ್ಥಾನಕ್ಕೆ ಬಳಸಬೇಕು ಹಾಗೂ ಶಾಲೆಯೊಂದನ್ನ ಉದ್ಧಾರ ಮಾಡಬೇಕು ಎಂಬ ಆಸೆಯಿಂದ ಬಂದಿದ್ದಾರೆ.