Just In
Don't Miss!
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- News
ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ ಕಾಡುತ್ತಿರುತ್ತದೆ. ನಾಮಿನೇಟ್ ಆದವರ ಪೈಕಿ ಒಬ್ಬರು ಔಟ್ ಆಗುವುದು ಖಚಿತ ಆದ್ದರಿಂದ ಡೇಂಜರ್ ಝೋನ್ ನಲ್ಲಿ ಇರುವವರಿಗೆ ಆತಂಕ ಹೆಚ್ಚು.
ಆದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ದಿವಾಕರ್ ಗೆ ಭಯ ಇಲ್ಲ, ಆತಂಕ ಕೂಡ ಇಲ್ಲ. ಯಾಕಂದ್ರೆ, ''ನಾಮಿನೇಟ್ ಆದಾಗಲೇ, ಜನರಿಗೆ ನಮ್ಮ ಪರಿಚಯ ಆಗುವುದು'' ಎಂಬ ಸಿದ್ಧಾಂತ ದಿವಾಕರ್ ರವರದ್ದು.
ಇದೇ ಸಿದ್ಧಾಂತವನ್ನ ನಿವೇದಿತಾ ಗೌಡ ರವರಿಗೆ ದಿವಾಕರ್ ಭೋದನೆ ಮಾಡುತ್ತಿದ್ದರು. ಮುಂದೆ ಓದಿರಿ...

ಬೇಸರಗೊಂಡಿದ್ದ ನಿವೇದಿತಾ ಗೌಡ
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಐದನೇ ವಾರ ಓಪನ್ ನಾಮಿನೇಷನ್ ನಡೆದಾಗ, ನಿವೇದಿತಾ ಗೌಡ ನಾಮಿನೇಟ್ ಆದರು. ಈ ಬಗ್ಗೆ ನಿವೇದಿತಾ ಗೌಡ ಕೊಂಚ ಬೇಸರಗೊಂಡಿದ್ದರು. ಆಗ, ದಿವಾಕರ್ ಆಕೆಗೆ ಬುದ್ಧಿಮಾತು ಹೇಳಿದರು.
'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

ಜನರಿಗೆ ಪರಿಚಯ ಆಗುವುದು.!
''ನಾವು ನಾಮಿನೇಷನ್ ಗೆ ಬರಬೇಕು. ಬಂದಾಗಲೇ, ಜನರಿಗೆ ಪರಿಚಯ ಆಗುವುದು. ಟಿವಿಯಲ್ಲಿ ಆಡ್ ಬರುತ್ತದೆ. ಅದಕ್ಕೆ ದುಡ್ಡು ಯಾಕೆ ಕೊಡುತ್ತಾರೆ ಅಂದ್ರೆ, ಜನ ನೋಡಲಿ ಅಂತ'' ಎಂದು ತಮ್ಮ ಅಭಿಪ್ರಾಯವನ್ನ ದಿವಾಕರ್ ಹೊರಹಾಕಿದರು.
ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಉಳಿಸಿದಾಗಲೇ ಬೆಲೆ ಗೊತ್ತಾಗುವುದು
''ಈಗ ನೀನು (ನಿವೇದಿತಾ) ನಾಮಿನೇಟ್ ಆಗಿದ್ದೀಯಾ. ನಿನ್ನ ಹೆಸರು ಟಿವಿ ಮೇಲೆ ಹೋದಾಗ ಜನರಿಗೆ ಪರಿಚಯ ಆಗುತ್ತೆ. ನಮ್ಮನ್ನ ಜನ ಉಳಿಸಿದಾಗಲೇ, ನಮ್ಮ ಬೆಲೆ ಗೊತ್ತಾಗುವುದು. ಉಳಿಸಿಲ್ಲ ಅಂದ್ರೆ ನಮ್ಮ ಬೆಲೆ ನಮಗೆ ಗೊತ್ತಾಗಲ್ಲ'' ಎಂದು ನಿವೇದಿತಾಗೆ ದಿವಾಕರ್ ಹೇಳಿದರು.
'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!

ಒಂದೇ ಬಾರಿ ನಾಮಿನೇಟ್ ಆಗಿ ಹೋಗಬಾರದು
''ಎರಡು ವಾರ ನೀನು (ನಿವೇದಿತಾ) ಉಳಿದುಕೊಂಡೆ. ಜನ ಉಳಿಸಿದ್ದಾರೆ. ತೇಜಸ್ವಿನಿ ಒಂದೇ ಬಾರಿ ನಾಮಿನೇಟ್ ಆಗಿದ್ದು. ಹಾಗೇ ಹೊರಟು ಹೋದರು. ಆ ತರಹ ಆಗಬೇಕಾ.? ಎಲಿಮಿನೇಷನ್ ಗೆ ಬಂದಾಗಲೇ, ನಾವು ಇದ್ದೀವಿ ಅಂತ ಬೆಲೆ'' ಎಂದರು ದಿವಾಕರ್