Don't Miss!
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ ಕಾಡುತ್ತಿರುತ್ತದೆ. ನಾಮಿನೇಟ್ ಆದವರ ಪೈಕಿ ಒಬ್ಬರು ಔಟ್ ಆಗುವುದು ಖಚಿತ ಆದ್ದರಿಂದ ಡೇಂಜರ್ ಝೋನ್ ನಲ್ಲಿ ಇರುವವರಿಗೆ ಆತಂಕ ಹೆಚ್ಚು.
ಆದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ದಿವಾಕರ್ ಗೆ ಭಯ ಇಲ್ಲ, ಆತಂಕ ಕೂಡ ಇಲ್ಲ. ಯಾಕಂದ್ರೆ, ''ನಾಮಿನೇಟ್ ಆದಾಗಲೇ, ಜನರಿಗೆ ನಮ್ಮ ಪರಿಚಯ ಆಗುವುದು'' ಎಂಬ ಸಿದ್ಧಾಂತ ದಿವಾಕರ್ ರವರದ್ದು.
ಇದೇ ಸಿದ್ಧಾಂತವನ್ನ ನಿವೇದಿತಾ ಗೌಡ ರವರಿಗೆ ದಿವಾಕರ್ ಭೋದನೆ ಮಾಡುತ್ತಿದ್ದರು. ಮುಂದೆ ಓದಿರಿ...
ಬೇಸರಗೊಂಡಿದ್ದ ನಿವೇದಿತಾ ಗೌಡ
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಐದನೇ ವಾರ ಓಪನ್ ನಾಮಿನೇಷನ್ ನಡೆದಾಗ, ನಿವೇದಿತಾ ಗೌಡ ನಾಮಿನೇಟ್ ಆದರು. ಈ ಬಗ್ಗೆ ನಿವೇದಿತಾ ಗೌಡ ಕೊಂಚ ಬೇಸರಗೊಂಡಿದ್ದರು. ಆಗ, ದಿವಾಕರ್ ಆಕೆಗೆ ಬುದ್ಧಿಮಾತು ಹೇಳಿದರು.
'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!
ಜನರಿಗೆ ಪರಿಚಯ ಆಗುವುದು.!
''ನಾವು ನಾಮಿನೇಷನ್ ಗೆ ಬರಬೇಕು. ಬಂದಾಗಲೇ, ಜನರಿಗೆ ಪರಿಚಯ ಆಗುವುದು. ಟಿವಿಯಲ್ಲಿ ಆಡ್ ಬರುತ್ತದೆ. ಅದಕ್ಕೆ ದುಡ್ಡು ಯಾಕೆ ಕೊಡುತ್ತಾರೆ ಅಂದ್ರೆ, ಜನ ನೋಡಲಿ ಅಂತ'' ಎಂದು ತಮ್ಮ ಅಭಿಪ್ರಾಯವನ್ನ ದಿವಾಕರ್ ಹೊರಹಾಕಿದರು.
ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!
ಉಳಿಸಿದಾಗಲೇ ಬೆಲೆ ಗೊತ್ತಾಗುವುದು
''ಈಗ ನೀನು (ನಿವೇದಿತಾ) ನಾಮಿನೇಟ್ ಆಗಿದ್ದೀಯಾ. ನಿನ್ನ ಹೆಸರು ಟಿವಿ ಮೇಲೆ ಹೋದಾಗ ಜನರಿಗೆ ಪರಿಚಯ ಆಗುತ್ತೆ. ನಮ್ಮನ್ನ ಜನ ಉಳಿಸಿದಾಗಲೇ, ನಮ್ಮ ಬೆಲೆ ಗೊತ್ತಾಗುವುದು. ಉಳಿಸಿಲ್ಲ ಅಂದ್ರೆ ನಮ್ಮ ಬೆಲೆ ನಮಗೆ ಗೊತ್ತಾಗಲ್ಲ'' ಎಂದು ನಿವೇದಿತಾಗೆ ದಿವಾಕರ್ ಹೇಳಿದರು.
'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!
ಒಂದೇ ಬಾರಿ ನಾಮಿನೇಟ್ ಆಗಿ ಹೋಗಬಾರದು
''ಎರಡು ವಾರ ನೀನು (ನಿವೇದಿತಾ) ಉಳಿದುಕೊಂಡೆ. ಜನ ಉಳಿಸಿದ್ದಾರೆ. ತೇಜಸ್ವಿನಿ ಒಂದೇ ಬಾರಿ ನಾಮಿನೇಟ್ ಆಗಿದ್ದು. ಹಾಗೇ ಹೊರಟು ಹೋದರು. ಆ ತರಹ ಆಗಬೇಕಾ.? ಎಲಿಮಿನೇಷನ್ ಗೆ ಬಂದಾಗಲೇ, ನಾವು ಇದ್ದೀವಿ ಅಂತ ಬೆಲೆ'' ಎಂದರು ದಿವಾಕರ್