Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ನಟ ಜಯರಾಂ ಕಾರ್ತಿಕ್.!
ಬಹುತೇಕ ಸ್ಪರ್ಧಿಗಳ ಊಹೆ ಸುಳ್ಳಾಗಿದೆ. ಸೆಲೆಬ್ರಿಟಿ ಸ್ಪರ್ಧಿಗಳ ಆಸೆಗೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ. 'ಬಿಗ್ ಬಾಸ್' ಮನೆಯೊಳಗೆ ಸದಾ ನಗುನಗುತ್ತಾ ಕಾಲ ಕಳೆದ ನಟ, ಸಿ.ಸಿ.ಎಲ್ ಆಟಗಾರ ಜಯರಾಂ ಕಾರ್ತಿಕ್ 'ಬಿಗ್ ಬಾಸ್' ಗೆಲ್ಲುವ ರೇಸ್ ನಿಂದ ಹೊರಬಿದ್ದಿದ್ದಾರೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನ ಜಯರಾಂ ಕಾರ್ತಿಕ್ ಗೆದ್ದೇ ಗೆಲ್ಲುತ್ತಾರೆ, ಗೆಲ್ಲಲೇಬೇಕು ಎಂಬುದು ದಯಾಳ್, ತೇಜಸ್ವಿನಿ, ಆಶಿತಾ, ಜಗನ್ ಸೇರಿದಂತೆ ಎಲ್ಲ ಸೆಲೆಬ್ರಿಟಿ ಸ್ಪರ್ಧಿಗಳ ಇಚ್ಛೆ ಆಗಿತ್ತು. ಹಾಗೇ, ಜೆಕೆ ಅಭಿಮಾನಿಗಳ ಆಶಯ ಕೂಡ ಆಗಿತ್ತು. ಆದ್ರೆ, ಇದು ಈಡೇರಲಿಲ್ಲ.
ಟಾಪ್ 3 ಹಂತಕ್ಕೆ ಏರಿದ್ದ ಜೆಕೆ, ಗೆಲ್ಲಲು ಒಂದೇ ಒಂದು ಹೆಜ್ಜೆ ಬಾಕಿ ಇರುವಾಗ ಎಡವಿ ಬಿದ್ದಿದ್ದಾರೆ. ಜಯರಾಂ ಕಾರ್ತಿಕ್ ಜೊತೆಗೆ ಚಂದನ್ ಶೆಟ್ಟಿ ಹಾಗೂ ದಿವಾಕರ್ ಗ್ರ್ಯಾಂಡ್ ಫಿನಾಲೆಯ ಟಾಪ್ 3 ಸ್ಥಾನ ತಲುಪಿದ್ದರು. ಈ ಮೂವರ ಪೈಕಿ ಮೊದಲು ಸೂಟ್ ಕೇಸ್ ಹಿಡಿದು 'ಬಿಗ್ ಬಾಸ್' ಮನೆಯಿಂದ ಹೊರಬಂದವರು ಜಯರಾಂ ಕಾರ್ತಿಕ್.
''ಕನ್ನಡಿಗರು ನನ್ನ ಮಗನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ'' ಎಂದು ಜಯರಾಂ ಕಾರ್ತಿಕ್ ತಂದೆ 'ಬಿಗ್ ಬಾಸ್' ವೇದಿಕೆ ಮೇಲೆ ಹೇಳಿದ್ದರು. ಆದರೆ ಆ ಮಾತು ನಿಜ ಆಗಲಿಲ್ಲ. ಕಾಮನ್ ಮ್ಯಾನ್ ದಿವಾಕರ್ ಮತ್ತು ಕನ್ನಡ rapper ಚಂದನ್ ಶೆಟ್ಟಿ ಟಾಪ್ 2 ಹಂತಕ್ಕೆ ಲಗ್ಗೆ ಇಟ್ಟರು.
''ಜೀವನದಲ್ಲಿ ಹೇಗಿರಬೇಕು ಅಂತ ಸಾಕಷ್ಟು ಕಲಿತಿದ್ದೇನೆ. ಇದರ ಬಗ್ಗೆ ಖುಷಿ ಇದೆ'' ಎಂದ ಜೆಕೆ, ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಮನೆಯಿಂದ ಹೊರಬಂದರು. ಜೆಕೆ ಔಟ್ ಆಗಿದ್ದಕ್ಕೆ ದಯಾಳ್ ಕಣ್ಣೀರಿಟ್ಟರು. ಸೆಲೆಬ್ರಿಟಿ ಸ್ಪರ್ಧಿಗಳು ಶಾಕ್ ಆದರು.
ಸದ್ಯ ಚಂದನ್ ಶೆಟ್ಟಿ ಹಾಗೂ ದಿವಾಕರ್ ಮಧ್ಯೆ ಗೆಲ್ಲೋರು ಯಾರು ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.