Don't Miss!
- News Bank Holidays in April: ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಪಟ್ಟಿ ಇಲ್ಲಿದೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ಮೊಸರಿಗಾಗಿ ಗಲಾಟೆ ಮಾಡಿದವರೇ ಇಂದು ಸಮೀರಾಚಾರ್ಯಗೆ ತಿನ್ನಿಸಿದರು.!
ಎತ್ತಿಟ್ಟಿದ್ದ ಮೊಸರು ಖಾಲಿ ಆದಾಗ, ಕ್ಯಾಪ್ಟನ್ ಆಗಿದ್ದ ಕೃಷಿ ತಾಪಂಡ ಕಿರುಚಾಡಿದರು. ಇನ್ಮೇಲೆ ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಇರುವುದಿಲ್ಲ ಅಂತ ಶಪಥ ಮಾಡಿದರು.
ಮೊಸರನ್ನ ಅವಲಕ್ಕಿ ಜೊತೆ ಮಿಕ್ಸ್ ಮಾಡಿಕೊಂಡು ಸಮೀರಾಚಾರ್ಯ ತಿಂದಿದ್ರಿಂದ, 'ಬಿಗ್ ಬಾಸ್' ಮನೆಯಲ್ಲಿ ಮಹಾಯುದ್ಧವೇ ನಡೆದು ಹೋಯ್ತು. ಬಳಿಕ ''ಎರಡು ಒಲೆ ಉರಿಯುವುದು ಬೇಡ, ಇನ್ಮೇಲೆ ಇಲ್ಲೇ ತಿನ್ನುವೆ. ನನ್ನ ಭಾಗದ ತಿಂಡಿ-ಊಟವನ್ನ ಎತ್ತಿಟ್ಟಿರಿ. ಹಸಿವಾದ ಮೇಲೆ ತಿನ್ನುವೆ'' ಎಂದು ಬೇಸರದಿಂದ ನುಡಿದರು ಸಮೀರಾಚಾರ್ಯ.
ಒಂದು ಕಪ್ ಮೊಸರಿಗಾಗಿ 'ಬಿಗ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!
ಇಷ್ಟೆಲ್ಲ ಆದ್ಮೇಲೆ, ಬಹುಶಃ ಸಮೀರಾಚಾರ್ಯ ಊಟ ಮಾಡಲಿಲ್ಲ ಅಂತ ಕಾಣುತ್ತೆ. ಹೀಗಾಗಿ, ಸಮೀರಾಚಾರ್ಯ ಅವರಿಗೆ ಅದೇ ಕೃಷಿ ತಾಪಂಡ ಊಟ ತಿನ್ನಿಸಿದರು.
''ಮೂರು ಹೊತ್ತು ಊಟ ಮಾಡಿ ಅಂತ ಎಷ್ಟು ಬಾರಿ ನಿಮಗೆ ಹೇಳುವುದು.? ಊಟ ಮಾಡದೆ ಬಾತ್ ರೂಮ್ ಗೆ ಹೋಗಿ ಯಾಕೆ ಒಬ್ಬರೇ ಕೂರುತ್ತೀರಾ.? ನಿಮ್ಮ ಹೊಟ್ಟೆಗೆ ನೀವು ಮೋಸ ಮಾಡಿಕೊಂಡು ಏನು ಸಾಧಿಸುತ್ತಿದ್ದೀರಾ.?'' ಎನ್ನುತ್ತಾ ಸಮೀರಾಚಾರ್ಯ ಅವರಿಗೆ ಊಟ ತಿನ್ನಿಸಿದರು ಕೃಷಿ ತಾಪಂಡ.
ಇದಕ್ಕೆ ಮಾನವೀಯತೆ ಅಂತ ಕರೆಯಬೇಕೋ, ಅಥವಾ ಗೇಮ್ ಪ್ಲಾನ್ ಎನ್ನಬೇಕೋ ನಿಮಗೆ ಬಿಟ್ಟಿದ್ದು. ಯಾಕಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ಯಾರು ಯಾವಾಗ ಸ್ನೇಹಿತರಾಗುತ್ತಾರೋ, ಯಾರು ಯಾವಾಗ ಶತ್ರುಗಳಾಗುತ್ತಾರೋ, ಹೇಳುವುದು ಬಹಳ ಕಷ್ಟ. ಸ್ಪರ್ಧಿಗಳ ಪ್ರತಿಯೊಂದು ನಡೆಯನ್ನೂ ಜನ ಗಮನಿಸುವುದರಿಂದ, ಎಲ್ಲರೂ ಹುಷಾರಾಗಿ ಹೆಜ್ಜೆ ಇಡಲೇಬೇಕು ಅಲ್ಲವೇ.?!