'ಬಿಗ್ ಬಾಸ್'ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ.?
Recommended Video

ಇದೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆ ಒಳಗೆ ಹೋಗಲು ಜನ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 'ಬಿಗ್ ಬಾಸ್' ಆಯೋಜಕರು 'ವೂಟ್' ಮೂಲಕ ಅರ್ಜಿ ಆಹ್ವಾನಿಸಿದ್ದರು.
ಕಿರುತೆರೆಯ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್' ನಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಷ್ಟು ಮಂದಿ 'ಬಿಗ್ ಬಾಸ್' ಮನೆ ಒಳಗೆ ಕಾಲಿಡ್ತಾರೋ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಹೀಗಿರುವಾಗಲೇ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆ ಆಗಿದೆ.
ಹೊಸ ಪ್ರೋಮೋ ನೋಡಿದ್ರೆ, ಈ ಬಾರಿಯ 'ಬಿಗ್ ಬಾಸ್' ಆವೃತ್ತಿಯಲ್ಲಿ 'ಕಾಮನ್ ಮ್ಯಾನ್'ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಹಾಗಿದೆ. ಮುಂದೆ ಓದಿರಿ...

ಎರಡನೇ ಪ್ರೋಮೋ ಮಾರ್ಕೆಟ್ ಸೆಟ್ ನಲ್ಲಿ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎರಡನೇ ಪ್ರೋಮೋ ಮಾರ್ಕೆಟ್ ಸೆಟ್ ನಲ್ಲಿ ಚಿತ್ರೀಕರಣಗೊಂಡಿತ್ತು. ಹೊಸ ಅತಿಥಿಗಳಿಗೆ ಅಡುಗೆ ಮಾಡಲು ಸುದೀಪ್ ತರಕಾರಿ ಖರೀದಿಸುವ ಪ್ರೋಮೋ ಅದಾಗಿತ್ತು. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಹೊಸ ಪ್ರೋಮೋ ನೋಡಿ...
ಇದೀಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ 'ಬಿಗ್ ಬಾಸ್' ಮನೆ ಒಳಗೆ ಹೋಗಲು ಜನಸಾಮಾನ್ಯರು ಸುದೀಪ್ ಬಳಿ ಕೇಳುವ ಹಾಗೆ ಚಿತ್ರಿಸಲಾಗಿದೆ. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಇದರ ಅರ್ಥ ಏನಿರಬಹುದು.?
ಈ ಎರಡು ಪ್ರೋಮೋಗಳನ್ನು ಗಮನಿಸಿದರೆ, ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ಸೂಚನೆ ನೀಡಿದೆ.

ವೀಕ್ಷಕರ ಅಭಿಲಾಷೆ ಕೂಡ ಅದೇ ಆಗಿತ್ತು.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರೈತರು, ಯೋಧರು ಭಾಗವಹಿಸಬೇಕು ಎಂಬುದು ಹಲವು ವೀಕ್ಷಕರ ಇಚ್ಛೆ ಆಗಿತ್ತು. ಅದು ಈ ಬಾರಿ ಈಡೇರುತ್ತಾ ಕಾದು ನೋಡೋಣ. ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಓಪನ್ನಿಂಗ್ ಅಕ್ಟೋಬರ್ 15ಕ್ಕೆ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ.


Click it and Unblock the Notifications











