Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ದಿವಾಕರ್ 'ಹೀರೋ' ಆದರೆ ಅಚ್ಚರಿ ಪಡಬೇಡಿ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಿ ಇನ್ನೂ ಎರಡು ದಿನ ಕಳೆದಿಲ್ಲ. ನ್ಯೂಸ್ ಚಾನೆಲ್ ಗಳಿಗೆ 'ಬಿಗ್ ಬಾಸ್' ಸ್ಪರ್ಧಿಗಳು ಇನ್ನೂ ಸಂದರ್ಶನ ನೀಡುವುದೂ ಮುಗಿದಿಲ್ಲ. ನಿನ್ನೆ ಮೊನ್ನೆಯಷ್ಟೇ 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಟ್ಟ ಸ್ಪರ್ಧಿಗಳು ಇನ್ನೂ ಕುಟುಂಬದವರ ಜೊತೆಗೆ ಕೂತು ನೆಮ್ಮದಿಯಾಗಿ ನಾಲ್ಕು ಮಾತಾಡಿಲ್ಲ. ಅಷ್ಟು ಬೇಗ ದಿವಾಕರ್ ಅವರಿಗೆ ಸ್ಯಾಂಡಲ್ ವುಡ್ ನಿಂದ ಬುಲಾವ್ ಬಂದಿದ್ಯಂತೆ.!
ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ.... 106 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿದ್ದ ದಿವಾಕರ್ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರ್ತಿದ್ಯಂತೆ.
ಇದ್ಯಾವುದೋ ಗಾಸಿಪ್ ಬಿಡಿ ಅಂತ ಮೂಗು ಮುರಿಯಬೇಡಿ. ''ಸಿನಿಮಾ ಹಾಗೂ ಸೀರಿಯಲ್ ನಲ್ಲಿ ಅಭಿನಯಿಸುವ ಆಫರ್ ಬಂದಿದೆ'' ಅಂತ ಸ್ವತಃ ದಿವಾಕರ್ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...
ಆಫರ್ ಗಳ ಬಗ್ಗೆ ಬಾಯ್ಬಿಟ್ಟ ದಿವಾಕರ್
'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ಸಂದರ್ಶನ ನೀಡುವಲ್ಲಿ ಬಿಜಿಯಾಗಿರುವ ದಿವಾಕರ್, ತಮಗೆ ಸ್ಯಾಂಡಲ್ ವುಡ್ ನಿಂದ ಕರೆ ಬಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ರನ್ನರ್ ಅಪ್ ಆದ ದಿವಾಕರ್ ಗೆ ಸಿಕ್ಕ ಬಹುಮಾನ ಇದೇ.!
ಸಿನಿಮಾ ಹಾಗೂ ಸೀರಿಯಲ್ ನಲ್ಲಿ ನಟಿಸುವ ಚಾನ್ಸ್
''ಆಗಲೇ ಸಿನಿಮಾ ಮತ್ತು ಸೀರಿಯಲ್ ಆಫರ್ ಬರುತ್ತಿದೆ. ಇನ್ನೂ ಯೋಚನೆ ಮಾಡಬೇಕು. ಒಂದೊಳ್ಳೆ ನಿರ್ಧಾರ ತೆಗೆದುಕೊಳ್ಳಬೇಕು'' ಎಂದು ಸಂದರ್ಶನವೊಂದರಲ್ಲಿ ದಿವಾಕರ್ ಹೇಳಿದ್ದಾರೆ. ಹೀಗಾಗಿ, ಸದ್ಯದಲ್ಲೇ 'ದಿವಾಕರ್ ಹೀರೋ' ಆಗಿರುವ ಸಿನಿಮಾ ಅನೌನ್ಸ್ ಆದರೆ ಅಚ್ಚರಿ ಪಡಬೇಡಿ
ದಿವಾಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ ಲೀಕ್ ಆಗಿದೆ.! ಇದು ಸತ್ಯವೋ.? ಸುಳ್ಳೋ.?
ಸೇಲ್ಸ್ ಕೆಲಸ ಮಾತ್ರ ಬಿಡಲ್ಲ.!
ಸಿನಿಮಾ ಹಾಗೂ ಸೀರಿಯಲ್ ನಲ್ಲಿ ಆಕ್ಟ್ ಮಾಡಿದರೂ, ಸೇಲ್ಸ್ ಬಿಸಿನೆಸ್ ನ ಮಾತ್ರ ದಿವಾಕರ್ ಬಿಡಲ್ವಂತೆ. ''ನನ್ನ ಬ್ಯಾಗ್ ಮಾತ್ರ ಯಾವಾಗಲೂ ನನ್ನ ಜೊತೆ ಇರಬೇಕು'' ಅಂತಾರೆ ದಿವಾಕರ್.
ದಿವಾಕರ್ ಫಿನಾಲೆವರೆಗೂ ಬಂದಿರೋದು ಅನುಕಂಪದಿಂದ.! ಒಪ್ತೀರಾ.?
ಕೋಪ ಕಮ್ಮಿ ಆಗಿದ್ಯಂತೆ
''ಫೈನಲ್ ವರೆಗೂ ಬರುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಒಂದೆರಡು ವಾರ ಇದ್ದು ಬರಬಹುದು ಅಂತ ಅಂದುಕೊಂಡಿದ್ದೆ'' ಎನ್ನುವ ದಿವಾಕರ್ ಗೆ 'ಬಿಗ್ ಬಾಸ್' ಮನೆಯೊಳಗೆ ಇದ್ದು ಬಂದ್ಮೇಲೆ ಕೋಪ ಕಮ್ಮಿ ಆಗಿದ್ಯಂತೆ.