Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಮನೆಯಲ್ಲಿ ಆದ ಎಡವಟ್ಟಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು
Recommended Video
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದ್ದಾರೆ. ತಮ್ಮಿಂದ ಆದ ಎಡವಟ್ಟಿಗೆ ಸಿಹಿ ಕಹಿ ಚಂದ್ರು ತಲೆ ಬಾಗಿದ್ದಾರೆ.
ಅಷ್ಟಕ್ಕೂ, ಆಗಿದ್ದೇನು ಅಂದ್ರೆ ಕಳೆದ ವಾರ ಪ್ರಸಾರ ಆದ 'ಬಿಗ್ ಬಾಸ್' ಸಂಚಿಕೆಯಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್ ಗೆ 'ವಡ್ಡ' ಎಂದುಬಿಟ್ಟಿದ್ದರು ಸಿಹಿ ಕಹಿ ಚಂದ್ರು.
ಸಿಹಿ ಕಹಿ ಚಂದ್ರು 'ವಡ್ಡ' ಎಂದು ಬಳಸಿದಕ್ಕೆ 'ಅಖಿಲ ಕರ್ನಾಟಕ (ಭೋವಿ) ವಡ್ಡರ ಯುವ ವೇದಿಕೆ' ಕಾರ್ಯಕರ್ತರು ಕುಪಿತಗೊಂಡಿದ್ದರು. ಜೊತೆಗೆ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಿರುವ 'ಇನ್ನೋವೇಟಿವ್ ಫಿಲ್ಮ್ ಸಿಟಿ' ಎದುರು ಪ್ರತಿಭಟನೆ ನಡೆಸಿದ್ದರು.
'ಬಿಗ್ ಬಾಸ್- 5' ಸ್ಫರ್ಧಿ ಸಿಹಿ ಕಹಿ ಚಂದ್ರು ವಿರುದ್ದ ಪ್ರತಿಭಟನೆ
ಪ್ರತಿಭಟನೆಯ ಗಂಭೀರತೆ ಅರಿತ 'ಬಿಗ್ ಬಾಸ್' ಆಯೋಜಕರು, 'ದೊಡ್ಮನೆ'ಯೊಳಗಿದ್ದ ಸಿಹಿ ಕಹಿ ಚಂದ್ರುಗೆ ಘಟನೆಯನ್ನ ವಿವರಿಸಿದರು. ಬಳಿಕ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದರು.
''ಕಳೆದ ವಾರ ನಾನು ಉದ್ದೇಶ ಇಲ್ಲದೆ ಆಡಿದ ಮಾತು ಒಂದು ಜನಾಂಗಕ್ಕೆ ನೋವುಂಟು ಮಾಡಿದೆ ಅಂತ ತಿಳಿಯಿತು. ಅದರಿಂದ ನನಗೂ ನೋವಾಗಿದೆ. ಹಂಗಿಸುವ ಉದ್ದೇಶದಿಂದ ನಾನು ಆ ಮಾತನ್ನು ಹೇಳಲಿಲ್ಲ. ಆ ಪದ ಬಳಸಿದ್ದು ನನ್ನ ತಪ್ಪು. ಹೀಗಾಗಿ ನಾನು ಕ್ಷಮೆ ಕೇಳುತ್ತೇನೆ'' ಎಂದು ಕೈಮುಗಿದು ಕೇಳಿಕೊಂಡರು ಸಿಹಿ ಕಹಿ ಚಂದ್ರು.