Don't Miss!
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಯಮದ ವಿರುದ್ಧ ಹೋದ ಸಿಹಿ ಕಹಿ ಚಂದ್ರು ಎಡವಿದ್ದು ಎಲ್ಲಿ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರದ ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲಿ 'ಬೇಕು' ಅಂತಲೇ ತಪ್ಪು ಉತ್ತರಗಳನ್ನು ನೀಡಿ, ಕ್ಯಾಪ್ಟನ್ ರೇಸ್ ನಿಂದ ಸಿಹಿ ಕಹಿ ಚಂದ್ರು ಹೊರಬಿದ್ದರಂತೆ. ಸಿಹಿ ಕಹಿ ಚಂದ್ರು ಹೀಗೆ ಮಾಡಿದ್ರಿಂದಾಗಿ, ನಿವೇದಿತಾಗೆ ಕ್ಯಾಪ್ಟನ್ ಆಗುವ ಅವಕಾಶ ಸಿಕ್ತಂತೆ. ಹಾಗಂತ 'ಬಿಗ್ ಬಾಸ್' ಮನೆಯಲ್ಲಿ ಸ್ವತಃ ಸಿಹಿ ಕಹಿ ಚಂದ್ರು ಹೇಳಿಕೊಂಡಿದ್ದಾರೆ.
ಟಾಸ್ಕ್ ನಲ್ಲಿ 'ಬೇಕು' ಅಂತಲೇ ತಪ್ಪು ಉತ್ತರ ನೀಡಿದ್ದು ರೀತಿ-ನೀತಿ, ನಿಯಮದ ವಿರುದ್ದ ಎಂದಿದ್ದಾರೆ ಕಿಚ್ಚ ಸುದೀಪ್.
ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!
ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಸಿಹಿ ಕಹಿ ಚಂದ್ರು ಅವರ ನಡವಳಿಕೆ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ''ನಿವೇದಿತಾ ಅವರಿಗೆ ಕ್ಯಾಪ್ಟೆನ್ಸಿ ಬಿಟ್ಟುಕೊಡಲು ಬೇಕು ಅಂತ ತಪ್ಪು ಉತ್ತರಗಳನ್ನು ನೀಡಿದ್ರಾ.?'' ಎಂದು ಸುದೀಪ್ ಪ್ರಶ್ನಿಸಿದರು.
''ಎರಡು ತಪ್ಪು ಉತ್ತರ ಕೊಟ್ಟೆ'' ಎಂದು ಸಿಹಿ ಕಹಿ ಚಂದ್ರು ಹೇಳಿದಾಗ, ''ಇದು ನಿಯಮದ ವಿರುದ್ಧ ಅಲ್ವಾ.?'' ಅಂತ ಸುದೀಪ್ ಮರು ಪ್ರಶ್ನಿಸಿದರು. ''ನಿವೇದಿತಾ ಎಕ್ಸೈಟ್ ಮೆಂಟ್ ಗೆ ಕಲ್ಲು ಹಾಕುತ್ತೇನೆ ಅನಿಸ್ತು. ಹೀಗಾಗಿ ಬಿಟ್ಟುಕೊಟ್ಟೆ'' ಎಂದು ಸಿಹಿ ಕಹಿ ಚಂದ್ರು ಹೇಳಿದಕ್ಕೆ, ''ಆಟವನ್ನ ಆಟದ ತರಹ ಆಡಬೇಕು ಅಲ್ವೇ.?'' ಎಂದರು ಸುದೀಪ್.
ಜೊತೆಗೆ, ''ತಾವು ಅದನ್ನ ಹೇಳದೇ ಇದ್ದರೆ ಚೆನ್ನಾಗಿರುತ್ತಿತ್ತು. ತಾವು ಎಡವಿದ್ದು ಇಲ್ಲೇ.! ಒಂದು ಸಲ ಗಾರ್ಡನ್ ಏರಿಯಾದಲ್ಲಿ, ಇನ್ನೊಂದು ಸಲ ಅಡುಗೆ ಮನೆಯಲ್ಲಿ ಇದೇ ಟಾಪಿಕ್ ಬಗ್ಗೆ ನೀವು ಮಾತನಾಡುತ್ತೀರಿ. ಯಾರೇ ಆಗಲಿ, ಕ್ಯಾಪ್ಟೆನ್ಸಿನ ಗಳಿಸಿಕೊಳ್ಳಬೇಕೇ ಹೊರತು ದಾನ ಮಾಡಿದ ಹಾಗೆ ಆಗಬಾರದು'' ಎಂದರು ಸುದೀಪ್.