Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?
ಮತ್ತೆತ್ತಿದ್ರೆ ನಂಬರ್ ಬಗ್ಗೆ ಮಾತನಾಡುವ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ಸಂಖ್ಯೆಗಳೇ ಪ್ರಪಂಚ. ಏನೇ ಆದರೂ, ಹೋದರೂ ಅದಕ್ಕೆ ನಂಬರ್ ತಳುಕು ಹಾಕುವ ಜಯಶ್ರೀನಿವಾಸನ್ ಕಂಡ್ರೆ ಚಂದನ್ ಶೆಟ್ಟಿ ಕೆಲ ದಿನಗಳಿಂದ ಉರಿದು ಬೀಳ್ತಿದ್ದಾರೆ.
ಹೀಗಾಗಿ ಈ ವಾರ ನಾಮಿನೇಟ್ ಆಗಿದ್ದ ಜಯಶ್ರೀನಿವಾಸನ್, 'ಬಿಗ್ ಬಾಸ್' ಮನೆಯಿಂದ ಔಟ್ ಆಗಬೇಕು ಎಂಬುದು ಚಂದನ್ ಶೆಟ್ಟಿ ಬಯಕೆ. ಇದನ್ನೇ, ತಮ್ಮ ಆತ್ಮೀಯ ದಿವಾಕರ್ ಬಳಿ ಹೇಳಿಕೊಂಡಿದ್ದಾರೆ ಚಂದನ್ ಶೆಟ್ಟಿ.
'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!
''ಜಯಶ್ರೀನಿವಾಸನ್ ಹೊರಗೆ ಹೋಗಬೇಕು. ಅವರು ಇರಬಾರದು. ನನಗೆ ಅವರ ಮೇಲೆ ಸಖತ್ ಬೇಜಾರಾಗಿದೆ. ಒಂದನೇ ನಂಬರ್, ಆರನೇ ನಂಬರ್ ಪಕ್ಕ ಕುಳಿತುಕೊಳ್ಳಬೇಕು ಅಂತಾರೆ. ನಾವೇನು ಹೊಲಸಾ.? ಅವೆಲ್ಲ ನಡೆಯಲ್ಲ ಇಲ್ಲಿ...'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಚಂದನ್ ಶೆಟ್ಟಿ.
ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!
ಜೊತೆಗೆ, ''ಏನದು.. ಲೆಕ್ಕಾಚಾರನಾ... ಮನುಷ್ಯನಿಗೆ ಕೊಡುವ ಮರ್ಯಾದೆನಾ.? ನನ್ನ ಪಕ್ಕ ಅವರು ಕೂರಬಾರದಂತೆ... ಇದು ಮನುಷ್ಯನಿಗೆ ಕೊಡುವ ಗೌರವನಾ.? ನೀನು ಎಂಟನೇ ನಂಬರ್, ಲೋ ಶನಿಮಹಾತ್ಮ ನಿನ್ನ ಪಕ್ಕ ಕೂರಲ್ಲ ಅಂತಾರೆ'' ಎಂದು ಜಯಶ್ರೀನಿವಾಸನ್ ಹೇಳಿದ್ದನ್ನ, ದಿವಾಕರ್ ಬಳಿ ನೆನಪಿಸಿಕೊಳ್ಳುತ್ತಾ ಚಂದನ್ ಶೆಟ್ಟಿ ತಮ್ಮ ಅಸಮಾಧಾನವನ್ನ ಹೊರಹಾಕಿದರು.