Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ 'ಬಿಗ್ ಬಾಸ್' ಮನೆಯಿಂದ ಮನೆ ಕಡೆ ಹೆಜ್ಜೆ ಹಾಕುವವರು ಯಾರು.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಒಂಬತ್ತು ವಾರಗಳು ಕಳೆದು ಹೋಗಿವೆ. ಈ ಒಂಬತ್ತು ವಾರಗಳಲ್ಲಿ ದಯಾಳ್ ಪದ್ಮನಾಭನ್, ಸಿಹಿ ಕಹಿ ಚಂದ್ರು, ಜಗನ್ನಾಥ್ ಸೇರಿದಂತೆ ಪ್ರಬಲ ಸ್ಪರ್ಧಿಗಳೇ ವೀಕ್ಷಕರ ಬೆಂಬಲ ಇಲ್ಲದೆ ಹೊರಬಿದ್ದಿದ್ದಾರೆ.
ವಾರದಿಂದ ವಾರಕ್ಕೆ ಸ್ಪರ್ಧೆ ಕಠಿಣ ಆಗುತ್ತಿದ್ದಂತೆಯೇ, ಹತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ 'ಬಿಗ್ ಬಾಸ್' ಹೊಸ ಟ್ವಿಸ್ಟ್ ಕೊಟ್ಟರು.
ಮಹಿಳಾ ಸ್ಪರ್ಧಿಗಳು ಇಬ್ಬರು ಪುರುಷ ಸದಸ್ಯರನ್ನ ನಾಮಿನೇಟ್ ಮಾಡಬೇಕಾಗಿದ್ದರೆ, ಪುರುಷ ಸದಸ್ಯರು ಇಬ್ಬರು ಮಹಿಳಾ ಸದಸ್ಯರನ್ನು ನಾಮಿನೇಟ್ ಮಾಡಬೇಕಾಗಿತ್ತು.
ಹಾಗಾದ್ರೆ, ಈ ವಾರ ಯಾರ್ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ.? ನೋಡೋಣ ಬನ್ನಿ....
ಈ ವಾರ ಕ್ಯಾಪ್ಟನ್ ಇಲ್ಲ.!
ಸಾಮಾನ್ಯವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಯುವ ಮುನ್ನ ಕ್ಯಾಪ್ಟನ್ ಆಯ್ಕೆ ಆಗಬೇಕು. ಆದ್ರೆ, ಈ ವಾರ ಹಾಗೆ ಆಗಲಿಲ್ಲ. ''ಈ ವಾರ ಕ್ಯಾಪ್ಟನ್ ಇಲ್ಲ. ಮನೆಯ ಜವಾಬ್ದಾರಿಗಳನ್ನು ಸದಸ್ಯರನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳಬೇಕು'' ಎಂದು 'ಬಿಗ್ ಬಾಸ್' ಘೋಷಿಸಿದರು. ಕ್ಯಾಪ್ಟನ್ ಆಯ್ಕೆ ಆಗದ ಕಾರಣ ಯಾರಿಗೂ ಇಮ್ಯೂನಿಟಿ ಲಭಿಸಲಿಲ್ಲ. ಹೀಗಾಗಿ ಯಾರೂ ಸೇಫ್ ಆಗಲಿಲ್ಲ.
ಈ ವ್ಯಕ್ತಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗ್ಬೇಕಂತೆ.!
ಸಮೀರಾಚಾರ್ಯಗೆ ಅತಿ ಹೆಚ್ಚು ವೋಟ್ಸ್
ನಿವೇದಿತಾ ಗೌಡ, ಲಾಸ್ಯ, ಅನುಪಮಾ ಗೌಡ, ಶ್ರುತಿ ಹಾಗೂ ಕೃಷಿ... ಸಮೀರಾಚಾರ್ಯ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ ಸಮೀರಾಚಾರ್ಯ ನಾಮಿನೇಟ್ ಆದರು.
ದಿವಾಕರ್ ದುರ್ಬಲ ಸ್ಪರ್ಧಿಯೇ.? ಅನುಪಮಾ ಹೇಳಿದ ಮಾತಿನ ಅರ್ಥವೇನು.?
ಡೇಂಜರ್ ಝೋನ್ ನಲ್ಲಿ ನಿವೇದಿತಾ
ರಿಯಾಝ್, ಜಯಶ್ರೀನಿವಾಸನ್, ದಿವಾಕರ್ ಮತ್ತು ಜೆಕೆ ವೋಟ್ ಮಾಡಿದ್ರಿಂದಾಗಿ ನಿವೇದಿತಾ ಗೌಡ ನಾಮಿನೇಟ್ ಆದರು.
'ದೊಡ್ಮನೆ'ಯಿಂದ ಜಗನ್ ಔಟ್: ವೀಕ್ಷಕರ ಖುಷಿಗೆ ಪಾರವೇ ಇಲ್ಲ.!
ಜಯಶ್ರೀನಿವಾಸನ್ ಗೆ ತಲೆ ಬಿಸಿ
ನಿವೇದಿತಾ ಮತ್ತು ಲಾಸ್ಯ 'ಕೃಪೆ'ಯಿಂದ ಜಯಶ್ರೀನಿವಾಸನ್ ಗೆ ಈ ವಾರ ಕೂಡ ಎಲಿಮಿನೇಷನ್ ತಲೆ ಬಿಸಿ ಇದೆ.
ಸುದೀಪ್ ಕೊಟ್ಟ ಒಂದೇ ಚಮಕ್ ಗೆ ಗೊಳೋ ಎಂದು ಕಣ್ಣೀರಿಟ್ಟ ನಟಿ ಸಂಯುಕ್ತ.!
ನಾಮಿನೇಟ್ ಆದ ಅನುಪಮಾ
ದಿವಾಕರ್ ಮತ್ತು ಸಮೀರಾಚಾರ್ಯ, ಅನುಪಮಾ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸಿದರು.
ದಿವಾಕರ್ ಗೆ ಅಗ್ನಿಪರೀಕ್ಷೆ
ಶ್ರುತಿ ಪ್ರಕಾಶ್ ಮತ್ತು ಅನುಪಮಾ ವೋಟ್ ಹಾಕಿದ್ರಿಂದಾಗಿ, ದಿವಾಕರ್ ನಾಮಿನೇಟ್ ಆಗಿದ್ದಾರೆ.
ಸಂಯುಕ್ತ ವಿರುದ್ಧ ಮೂರು ಮತಗಳು
ಸಂಯುಕ್ತ ಹೆಗ್ಡೆ ಸ್ಪರ್ಧಿ ಅಲ್ಲ ಎಂಬ ಗುಟ್ಟು ಇನ್ನೂ ರಟ್ಟಾಗದ ಕಾರಣ ಚಂದನ್ ಶೆಟ್ಟಿ, ಸಮೀರಾಚಾರ್ಯ ಮತ್ತು ಜೆಕೆ ಸಂಯುಕ್ತ ವಿರುದ್ಧ ವೋಟ್ ಮಾಡಿದರು. ಆದ್ರೆ, ಆಕೆ ಸ್ಪರ್ಧಿ ಅಲ್ಲದ ಕಾರಣ ನಾಮಿನೇಟ್ ಆದರೂ ಒಂದೇ ಬಿಟ್ಟರೂ ಒಂದೇ.!
ನೇರವಾಗಿ ನಾಮಿನೇಟ್ ಆದ ಲಾಸ್ಯ
ಕಳೆದ ವಾರ ಹೊರ ಬಂದ ಜಗನ್ ರಿಂದ ಜೆಕೆ ಸೂಪರ್ ಅಧಿಕಾರ ಪಡೆದುಕೊಂಡಿದ್ದರು. ಅದರ ಅನುಸಾರ, ಯಾರಾದರೂ ಒಬ್ಬ ಸದಸ್ಯರನ್ನ ಜೆಕೆ ನೇರವಾಗಿ ನಾಮಿನೇಟ್ ಮಾಡಬಹುದಿತ್ತು. ಸೂಪರ್ ಅಧಿಕಾರವನ್ನು ಬಳಸಿಕೊಂಡ ಜೆಕೆ, ಲಾಸ್ಯ ರನ್ನ ನೇರವಾಗಿ ನಾಮಿನೇಟ್ ಮಾಡಿದರು.
ಒಂದು ವೋಟ್ ನಲ್ಲಿ ಮಿಸ್ ಆದವರು.!
ನಟಿ ಶ್ರುತಿ ಪ್ರಕಾಶ್ ಹಾಗೂ ಕೃಷಿ ತಾಪಂಡ ವಿರುದ್ಧ ಒಂದು ವೋಟ್ ಬಿದ್ದ ಕಾರಣ ನಾಮಿನೇಷನ್ ನಿಂದ ಬಚಾವ್ ಆದರು
ಆರು ಮಂದಿ ಪೈಕಿ ಯಾರಿಗೆ ನಿಮ್ಮ ಬೆಂಬಲ.?
ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಜಯಶ್ರೀನಿವಾಸನ್, ಅನುಪಮಾ ಮತ್ತು ಲಾಸ್ಯ.... ಈ ಆರು ಮಂದಿ ಪೈಕಿ ನಿಮ್ಮ ಬೆಂಬಲ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ... ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...