Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಸಂಯುಕ್ತ ಹೆಗ್ಡೆ ಮಾಡಿದ್ದು ತಪ್ಪು: ಇದು ಕಿಚ್ಚ ಸುದೀಪ್ ಕೊಟ್ಟ ತೀರ್ಪು.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ನಟಿ ಸಂಯುಕ್ತ ಹೆಗ್ಡೆ, ಅದೇ ಗೌರವದಿಂದ ಹೊರಗೆ ಹೋಗುವ ಬದಲು... 'ಬಿಗ್ ಬಾಸ್' ಮನೆಯ ಮೂಲ ನಿಯಮ ಉಲ್ಲಂಘಿಸಿ, ಸಮೀರಾಚಾರ್ಯ ಮೇಲೆ ದೈಹಿಕ ಹಲ್ಲೆ ನಡೆಸಿ, 'ಬಿಗ್ ಬಾಸ್'ರಿಂದ ಹೊರದಬ್ಬಿಸಿಕೊಂಡರು.
ಆಟ ಚಾಲ್ತಿಯಲ್ಲಿ ಇದ್ದ ಸಂದರ್ಭದಲ್ಲಿ ಚಂದನ್ ಶೆಟ್ಟಿ ಮೇಲೆ ಕೂತ ಸಂಯುಕ್ತ, ಚಂದನ್ ಶೆಟ್ಟಿಯನ್ನ ಬಿಡಿಸಲು ಬಂದ ಸಮೀರಾಚಾರ್ಯ ಮೇಲೆ 'ಗಂಭೀರ ಆರೋಪ' ಮಾಡಿ, ಅವರಿಗೆ ಹೊಡೆದರು. 'ಬಿಗ್ ಬಾಸ್' ಮನೆಯೊಳಗೆ ಯಾರು ಯಾರ ಮೇಲೂ ಹಲ್ಲೆ ಮಾಡುವಂತಿಲ್ಲ. ಈ ನಿಯಮ ಮುರಿದ ಸಂಯುಕ್ತಗೆ 'ಬಿಗ್ ಬಾಸ್' ಗೇಟ್ ಪಾಸ್ ನೀಡಿದರು.
'ಕಿರಿಕ್' ಸಂಯುಕ್ತ ಮುಖಕ್ಕೆ ಮಹಾ ಮಂಗಳಾರತಿ ಮಾಡಿದ ನೆಟ್ಟಿಗರು.!
ಈ ಇಡೀ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದರು. ಆಗ ಸುದೀಪ್ ಹೇಳಿದಿಷ್ಟು...
ನಡೆಯಬಾರದ ಘಟನೆ, ನಡೆದು ಹೋಯ್ತು.!
''ಎಲ್ಲ ವಿಚಾರಗಳಿಗೂ ದೃಷ್ಟಿ ಬೊಟ್ಟು ಇಡುವ ತರಹ ಒಂದು ಘಟನೆ ಮನೆಯಲ್ಲಿ ನಡೆಯುತ್ತೆ. ಆ ಘಟನೆ ನಡೆಯಬಾರದಿತ್ತು. ನಡೆದು ಹೋಯ್ತು'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಆರಂಭದಲ್ಲಿಯೇ ಸುದೀಪ್ ನುಡಿದರು.
'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!
ಸಂಯುಕ್ತ ಮಾಡಿದ್ದು ತಪ್ಪು.!
''ಅತಿಥಿಯಾಗಿ ಬಂದ ಸಂಯುಕ್ತ, ಸಮೀರಾಚಾರ್ಯ ಮೇಲೆ ಕೈ ಮಾಡಿದ್ದು ತಪ್ಪು. ಹಾಗೇ ಅದು ನೋವಿನ ವಿಚಾರ. ಹೊಡೆದಿದ್ದಕ್ಕೆ ಅವರು ಕೊಟ್ಟ ಕಾರಣ, ವಿವರಣೆಗಳು ಯಾವುದೂ ಒಪ್ಪುವ ಹಾಗೆ ಇರಲಿಲ್ಲ'' ಎಂದರು ಸುದೀಪ್
ಸುದೀಪ್ ಮುಂದೆ ಸಂಯುಕ್ತ ಏನು ಹೇಳಿದ್ರೋ, ಅದನ್ನೇ ಮಾಡಿ ತೋರಿಸಿದ್ರು.!
ಇದು ಸರಿಯಿಲ್ಲ
''ಈ ಬೇಜವಾಬ್ದಾರಿ ವರ್ತನೆಗೆ ಸಂಯುಕ್ತ ಅವರು ಮನೆಯಿಂದ ಹೊರಗೆ ಹೋದರು. ಸಂಯುಕ್ತ ಅವರೇ.... not right'' - ಸುದೀಪ್
'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೆಗ್ಡೆ 'ಕಿಕ್' ಔಟ್ ಆಗಿದ್ಯಾಕೆ.?
ಅವಮಾನ, ನೋವು ಅರ್ಥ ಆಗಿದೆ
''ಸಮೀರಾಚಾರ್ಯ ಅವರೇ... ಆ ಸಮಯದಲ್ಲಿ ನಿಮಗೆ ಆದ ಅವಮಾನ, ನೋವು ನಮಗೆ ಅರ್ಥ ಆಗುತ್ತೆ'' ಎಂದು ಸಮೀರಾಚಾರ್ಯಗೆ ಸಮಾಧಾನ ಪಡಿಸಿದರು ಸುದೀಪ್.