Don't Miss!
- News ‘ದೇವೇಗೌಡ್ರು ಕೋಲಾರದಲ್ಲಿ ಕುಟುಂಬದವರಿಗೆ ಬಿಟ್ಟು ಕಾರ್ಯಕರ್ತರಿಗೆ ಟಿಕೆಟ್ ಯಾಕೆ ಕೊಟ್ರು ಗೊತ್ತಾ?’
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿವಾಕರ್ ಕೈಯಲ್ಲಿ ಐದು ಲಕ್ಷ ಹಣ: ನಡೆಯುತ್ತಾ ಕುದುರೆ ವ್ಯಾಪಾರ.?
'ಬಿಗ್ ಬಾಸ್' ಮನೆ ಇದೀಗ ರಾಜಕೀಯ ರಣರಂಗವಾಗಿ ಪರಿಣಮಿಸಿದೆ. 'ಪ್ರಜಾರಾಜ್ಯ' ಚಟುವಟಿಕೆ ಚಾಲ್ತಿಯಲ್ಲಿ ಇರುವ ಕಾರಣ, 'ಬಿಗ್ ಬಾಸ್' ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳು ತಲೆಯೆತ್ತಿವೆ.
'ಬಿಗ್ ಬಾಸ್' ಮನೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಎರಡು ಪಕ್ಷಗಳ ನಡುವೆ ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಚುನಾವಣೆಗಾಗಿ 'ಬಿಗ್ ಬಾಸ್' ಹತ್ತು ಲಕ್ಷ ಮೀಸಲಿಟ್ಟಿದ್ದರು.
ಸೀಕ್ರೆಟ್ ರೂಮ್ ನಲ್ಲಿ ಇರುವ 'ಕಿಂಗ್ ಮೇಕರ್ಸ್' ನಿರ್ಣಯದಂತೆ ಚುನಾವಣೆಗೆ ಮೀಸಲಾಗಿದ್ದ ಹತ್ತು ಲಕ್ಷದಲ್ಲಿ ಎರಡು ಪಕ್ಷಗಳಿಗೆ ತಲಾ ಐದು ಲಕ್ಷವನ್ನ 'ಬಿಗ್ ಬಾಸ್' ಹಂಚಿದ್ದಾರೆ.
ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!
ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ ಬಹುಮತ ಪಡೆಯಬೇಕು. ಎರಡೂ ಪಕ್ಷದಲ್ಲಿ ನಾಲ್ಕು ಸದಸ್ಯರಿದ್ದಾರೆ. ಒಂದು ಪಕ್ಷ ಬಹುಮತ ಪಡೆಯಲು ಐದು ಮತ ಬೇಕು. ಎದುರಾಳಿ ಪಕ್ಷದಿಂದ ಸದಸ್ಯರನ್ನು ಸೆಳೆಯಲು.. ಕುದುರೆ ವ್ಯಾಪಾರ ಮಾಡಲು 'ಬಿಗ್ ಬಾಸ್' ದುಡ್ಡು ನೀಡಿದ್ರಾ.? ಗೊತ್ತಿಲ್ಲ.
ಆದ್ರೆ, ಪಕ್ಷದ ಮುಖಂಡರಾದ ದಿವಾಕರ್ ಹಾಗೂ ಶ್ರುತಿ ಕೈಯಲ್ಲಿ 'ಪಕ್ಷದ ನಿಧಿ' ರೂಪದಲ್ಲಿ ತಲಾ ಐದು ಲಕ್ಷ ಸೇರಿದೆ. ಬಹುಮತ ಪಡೆಯಲು 'ಬಿಗ್ ಬಾಸ್' ಮನೆಯಲ್ಲಿ ಸದಸ್ಯರು ಏನೆಲ್ಲ ತಂತ್ರ, ಪ್ರತಿತಂತ್ರ ರೂಪಿಸುತ್ತಾರೆ ಎಂಬುದು ಮುಂದಿನ ಆಟ.
'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!
ಯಾವ ಪಕ್ಷಕ್ಕೆ ಬಹುಮತ ಸಿಕ್ಕರೂ, ಯಾರಿಗೆ ಅಧಿಕಾರ ಲಭಿಸಬೇಕು ಎಂಬ ನಿರ್ಧಾರ 'ಕಿಂಗ್ ಮೇಕರ್ಸ್' ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಕೈಯಲ್ಲಿದೆ. ಈ ಸತ್ಯ 'ಬಿಗ್ ಬಾಸ್' ಮನೆಯೊಳಗೆ ಇರುವವರಿಗೆ ಗೊತ್ತಿಲ್ಲ ಅಷ್ಟೇ.!