Don't Miss!
- News ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಕೋಟಿ ಒಡೆಯ: ಒಟ್ಟು ಆಸ್ತಿ ಎಷ್ಟು ಗೊತ್ತಾ?
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್ ಕನ್ನಡ-5': ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದರು 'ಬಿಗ್ ಬಾಸ್'. ಆದ್ರೆ, ಹನ್ನೆರಡನೇ ವಾರ ಯಾವುದೇ ಟ್ವಿಸ್ಟ್ ಇಲ್ಲದೇ, ಸೀದಾ ಸಾದಾ ನಾಮಿನೇಷನ್ ಪ್ರಕ್ರಿಯೆ ನಡೆಯಿತು.
ಪ್ರತಿ ಬಾರಿಯಂತೆ ಈ ಬಾರಿಯೂ ಕನ್ಫೆಶನ್ ರೂಮ್ ಒಳಗೆ ತೆರಳಿ, 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ತಾವು ಇಚ್ಛೆ ಪಡುವ ಇಬ್ಬರು ಸದಸ್ಯರ ಹೆಸರನ್ನು ಎಲ್ಲ ಸ್ಪರ್ಧಿಗಳು ಹೇಳಬೇಕಿತ್ತು.
ಹಾಗಾದ್ರೆ, ಹನ್ನೆರಡನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಅಂತ ನೋಡೋಣ ಬನ್ನಿ...
ಸಮೀರಾಚಾರ್ಯ ಸೇಫ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೆರಡನೇ ವಾರದ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಆಯ್ಕೆ ಆಗಿದ್ದರು. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮೀರಾಚಾರ್ಯ ಸೇಫ್ ಆದರು.
ಇಡೀ ರಾತ್ರಿ ನಿದ್ದೆಗೆಟ್ಟು ಎರಡನೇ ಬಾರಿ ಕ್ಯಾಪ್ಟನ್ ಆದ ಸಮೀರಾಚಾರ್ಯ
ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು
ಕಳೆದ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಚಲಾವಣೆ ಆದವು. ಜೆಕೆ, ಕೃಷಿ, ಶ್ರುತಿ ಹಾಗೂ ಅನುಪಮಾ ಗೌಡ ವೋಟ್ ಮಾಡಿದ್ರಿಂದಾಗಿ ರಿಯಾಝ್ ನಾಮಿನೇಟ್ ಆದರು.
'ಬಿಗ್ ಬಾಸ್' ಚದುರಂಗದಾಟ: ಸ್ಪರ್ಧಿಗಳ ತಲೆಯಲ್ಲಿ ಹೆಬ್ಬಾವು ಹರಿದಾಟ
ಡೇಂಜರ್ ಝೋನ್ ನಲ್ಲಿ ನಿವೇದಿತಾ ಗೌಡ
ನಿವೇದಿತಾ ಗೌಡ ಕಂಡ್ರೆ ಶ್ರುತಿ, ಅನುಪಮಾ ಹಾಗೂ ಕೃಷಿಗೆ ಅಷ್ಟಕಷ್ಟೆ. ಈ ಮೂವರು ಮತ ಹಾಕಿದ್ರಿಂದಾಗಿ ಈ ವಾರವೂ ನಿವೇದಿತಾ ಗೌಡ ಡೇಂಜರ್ ಝೋನ್ ನಲ್ಲಿ ಇದ್ದಾರೆ.
ಸತ್ಯವನ್ನ ಸಮೀರಾಚಾರ್ಯ ಬಾಯ್ಬಿಟ್ರೆ ಶಿಕ್ಷೆ ಗ್ಯಾರೆಂಟಿ.!
ಶ್ರುತಿ ಪ್ರಕಾಶ್ ಮಿಸ್ ಆಗಿಲ್ಲ
ರಿಯಾಝ್, ಚಂದನ್ ಹಾಗೂ ನಿವೇದಿತಾ... ಶ್ರುತಿ ಪ್ರಕಾಶ್ ರವರನ್ನ ನಾಮಿನೇಟ್ ಮಾಡಿದರು.
ಆತ್ಮಹತ್ಯೆಗೆ ಯತ್ನಿಸಿದ್ದ ಅನುಪಮಾ: ದೊಡ್ಡ ರಹಸ್ಯ ಬಯಲು ಮಾಡಿದ 'ಅಕ್ಕ'.!
ನಾಮಿನೇಟ್ ಆದ ಜಯರಾಂ ಕಾರ್ತಿಕ್
ಚಂದನ್ ಶೆಟ್ಟಿ ಹಾಗೂ ರಿಯಾಝ್ ಜೆಕೆ ವಿರುದ್ಧ ಮತ ಹಾಕಿದರು. ಹೀಗಾಗಿ ಈ ವಾರ ಜೆಕೆಗೂ ಅಗ್ನಿಪರೀಕ್ಷೆ.
'ಬಿಗ್ ಬಾಸ್' ಮುಂದೆ 'ಕಾಮನ್ ಮ್ಯಾನ್' ದಿವಾಕರ್ ಇಟ್ಟಿರುವ 'ದೊಡ್ಡ' ಬೇಡಿಕೆ ಏನ್ಗೊತ್ತಾ.?
ಈ ಬಾರಿ ಸೇಫ್ ಆಗ್ತಾರಾ ಕೃಷಿ ತಾಪಂಡ.?
ಅದಾಗಲೇ ಒಮ್ಮೆ ಎಲಿಮಿನೇಟ್ ಆಗಿ, ಸೆಕೆಂಡ್ ಚಾನ್ಸ್ ಪಡೆದುಕೊಂಡು, 'ಬಿಗ್ ಬಾಸ್' ಮನೆಯೊಳಗೆ ರೀ ಎಂಟ್ರಿ ಕೊಟ್ಟಿರುವ ಕೃಷಿ ತಾಪಂಡ ಈ ವಾರ ನಾಮಿನೇಟ್ ಆಗಿದ್ದಾರೆ. ಕೃಷಿ ತಾಪಂಡಗೆ ಈ ವಾರವೂ ವೀಕ್ಷಕರು ಬೆಂಬಲ ನೀಡುತ್ತಾರಾ.?
ನೇರವಾಗಿ ನಾಮಿನೇಟ್ ಆದ ಅನುಪಮಾ
ಕ್ಯಾಪ್ಟನ್ ಆಗಿರುವ ಸಮೀರಾಚಾರ್ಯ, ಅನುಪಮಾ ಗೌಡ ಅವರನ್ನ ನೇರವಾಗಿ ನಾಮಿನೇಟ್ ಮಾಡಿದರು. ಹೀಗಾಗಿ, ಅನುಪಮಾಗೂ ಈ ವಾರ ಎಲಿಮಿನೇಷನ್ ತಲೆಬಿಸಿ ತಪ್ಪಿದ್ದಲ್ಲ.
ಈ ಆರು ಜನರ ಪೈಕಿ ನಿಮ್ಮ ಮತ ಯಾರಿಗೆ.?
ಅನುಪಮಾ ಗೌಡ, ಕೃಷಿ ತಾಪಂಡ, ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ನಿವೇದಿತಾ ಗೌಡ ಹಾಗೂ ರಿಯಾಝ್... ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...
Kirik Party
Kirik Party (2016) Kannada DVDRip Movie Part 2 - Video Dailymotion