Just In
- 31 min ago
ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್
- 46 min ago
ಖರ್ಚು ಹೆಚ್ಚು, ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ: ದರ್ಶನ್
- 56 min ago
#MyGuru ಅಭಿಯಾನ: ನನ್ನ ಅಣ್ಣ ನನ್ನ ಗುರು ಎಂದು ಚಿರು ಸ್ಮರಿಸಿದ ಧ್ರುವ ಸರ್ಜಾ
- 1 hr ago
ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಸ್ತುಗಳಿಗಾಗಿ ಹುಡುಕಾಡಿದರು: ತಾಪ್ಸಿ
Don't Miss!
- News
ಸತೀಶ್ ಜಾರಕಿಹೊಳಿ ಅಂದು ಹೇಳಿದ್ದ ಆ ಒಂದು 'ವಸ್ತು' ಇದೇ ಏನು?
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- Sports
ಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ
- Automobiles
ಆರ್ 15 ಬೈಕಿನ ಎಂಜಿನ್ನೊಂದಿಗೆ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ ಯಮಹಾ ಮ್ಯಾಕ್ಸಿ ಸ್ಕೂಟರ್
- Education
WCD Ballari Recruitment 2021: ಅಂಗನವಾಡಿಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏರ್ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನುಪಮಾ ಫ್ರೆಂಡ್ ಆಗಿದ್ದಕ್ಕೆ ಮನಸ್ಸು ಬದಲಾಯಿಸಿದ್ರಂತೆ ಶ್ರುತಿ ಪ್ರಕಾಶ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ಬಂತು. ಹದಿನಾಲ್ಕು ವಾರಗಳ ಈ ಜರ್ನಿಯಲ್ಲಿ ಕಾಮನ್ ಮ್ಯಾನ್ ದಿವಾಕರ್ ಕ್ಯಾಪ್ಟನ್ ಆಗಿಲ್ಲ.
ಕಳೆದ ವಾರ ದಿವಾಕರ್ ಕ್ಯಾಪ್ಟನ್ ಆಗುವ ಸಾಧ್ಯತೆ ಇತ್ತು. ಆದ್ರೆ, ಅದಕ್ಕೆ ನಟಿ ಅನುಪಮಾ ಅಡ್ಡಿ ಪಡಿಸಿದರು. ದಿವಾಕರ್ ಅವರನ್ನ ಕ್ಯಾಪ್ಟನ್ ಮಾಡಲು ಚಂದನ್ ಶೆಟ್ಟಿ ಹಾಗೂ ಶ್ರುತಿ ಪ್ರಕಾಶ್ ಮನಸ್ಸು ಮಾಡಿದ್ದರು. ಆದ್ರೆ, ಅಷ್ಟರಲ್ಲಿ ಅನುಪಮಾ ಮೂಗು ತೂರಿಸಿದರು. ಶ್ರುತಿ ಪ್ರಕಾಶ್ ಮನಸ್ಸು ಬದಲಾಯಿಸಿದರು. ಎರಡನೇ ಬಾರಿಗೆ ಅನುಪಮಾ ಕ್ಯಾಪ್ಟನ್ ಆದರು. ದಿವಾಕರ್ ಅವಕಾಶ ವಂಚಿತರಾದರು.
ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ವೀಕ್ಷಕರೊಬ್ಬರು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಶ್ರುತಿ ಪ್ರಕಾಶ್ ಅವರಿಗೆ ಪ್ರಶ್ನಿಸಿದರು. ಮುಂದೆ ಓದಿರಿ...

ಕಾಲರ್ ಆಫ್ ದಿ ವೀಕ್ ಕೇಳಿದ ಪ್ರಶ್ನೆ ಏನು.?
''ಇಷ್ಟು ದಿನ ದಿವಾಕರ್ ಕ್ಯಾಪ್ಟನ್ ಆಗಿರಲಿಲ್ಲ. ನೀವು ಚೀಟಿ ಕೊಟ್ಟಿದ್ದರೆ, ಅವರು ಈ ವಾರ ಕ್ಯಾಪ್ಟನ್ ಆಗುತ್ತಿದ್ದರು. ಚೀಟಿ ಕೊಡುವುದಕ್ಕೆ ನೀವು ಮೊದಲು ಒಪ್ಪಿಕೊಳ್ತೀರಾ. ಆಮೇಲೆ, ಅನುಪಮಾ ಬೇಡ ಅಂದ್ಮೇಲೆ ಅನುಪಮಾಗೆ ಚೀಟಿ ಕೊಡ್ತೀರಾ. ಅನುಪಮಾ ನಿಮ್ಮ ಫ್ರೆಂಡ್ ಅಂತ ಮಾತ್ರಕ್ಕೆ ನಿಮ್ಮ ಡಿಸಿಷನ್ ಚೇಂಜ್ ಮಾಡಿದ್ರಾ.? ಅಥವಾ ದಿವಾಕರ್ ಒಳ್ಳೆಯ ಕ್ಯಾಪ್ಟನ್ ಆಗಲ್ಲ ಅಂತ ನಿಮಗೆ ಅನ್ಸುತ್ತಾ.?'' ಎಂದು ಬೆಂಗಳೂರಿನ ಶ್ವೇತ ಎಂಬುವರು ಶ್ರುತಿ ಪ್ರಕಾಶ್ ಗೆ ಪ್ರಶ್ನೆ ಕೇಳಿದರು.
ಶ್ರುತಿ ತಲೆಕೆಡಿಸಿ, ದಿವಾಕರ್ ಕ್ಯಾಪ್ಟನ್ ಆಗುವುದನ್ನು ತಪ್ಪಿಸಿದ ಅನುಪಮಾ.!

ಶ್ರುತಿ ಕೊಟ್ಟ ಉತ್ತರ ಏನು.?
''ದಿವಾಕರ್ ಒಳ್ಳೆಯ ಕ್ಯಾಪ್ಟನ್ ಆಗಲ್ಲ ಅಂತ ನನಗೆ ಅನಿಸಲಿಲ್ಲ. ಅನುಪಮಾ ನನ್ನ ಫ್ರೆಂಡ್ ನಿಜ. ಅನುಪಮಾಗೆ ಚೀಟಿ ಕೊಟ್ಮೇಲೆ, ಆಕೆಗೂ ನಾನು ಹೇಳಿದೆ ದಿವಾಕರ್ ಗೆ ಚಾನ್ಸ್ ಕೊಡೋಣ ಅಂತ. ಆದ್ರೆ, ಹಾಗೆ ಆಗಲಿಲ್ಲ'' ಎಂದಷ್ಟೇ ಶ್ರುತಿ ಪ್ರಕಾಶ್ ಉತ್ತರಿಸಿದರು.

ಕ್ಯಾಪ್ಟನ್ ಆದ್ರೆ...
ಕ್ಯಾಪ್ಟನ್ ಆದ್ರೆ ನಾಮಿನೇಷನ್ ನಿಂದ ಇಮ್ಯೂನಿಟಿ ಸಿಗುತ್ತೆ. ಹೀಗಾಗಿ ಎಲಿಮಿನೇಷನ್ ನಿಂದ ಬಚಾವ್ ಆಗಲು ಅನುಪಮಾ ಗೌಡ ಕ್ಯಾಪ್ಟನ್ ಆಗಲು ಪಟ್ಟು ಹಿಡಿದರು.

ದಿವಾಕರ್ ಗೆ ಅವಕಾಶವೇ ಸಿಗಲಿಲ್ಲ.!
ಇನ್ನೂ ಈ ವಾರ ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿಲ್ಲ. ಎಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದಾರೆ. ಮುಂದಿನ ವಾರ ಫಿನಾಲೆ ನಡೆಯಲಿದೆ. ಅಲ್ಲಿಗೆ, ದಿವಾಕರ್ ಕ್ಯಾಪ್ಟನ್ ಆಗುವ ಕನಸು ಕನಸಾಗಿಯೇ ಉಳಿಯಲಿದೆ.