Don't Miss!
- News ಪಿಕ್ ಪಾಕೇಟ್ ಕಾಂಗ್ರೆಸ್, ಕನ್ನಡಿಗರ ಕೈಗೆ 'ಚಿಪ್ಪು' ಪೋಸ್ಟರ್ ಬಿಡುಗಡೆ: ಬಿಜೆಪಿ ತಿರುಗೇಟು
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿವೇದಿತಾಗೆ 'ಮೆಂಟಲ್', 'ಡವ್ ರಾಣಿ' ಎಂದ ದಿವಾಕರ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇದೇ ಶನಿವಾರ ಹಾಗೂ ಭಾನುವಾರ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
'ಬಿಗ್ ಬಾಸ್' ಮನೆಗೆ ಗುಡ್ ಬೈ ಹೇಳುವ ಸಮಯ ಬಂದಿರುವುದರಿಂದ, ಪ್ರತಿ ಕ್ಷಣ ಕೂಡ ಖುಷಿ ಖುಷಿಯಾಗಿ ಕಳೆಯಬೇಕು ಎಂದು ಟಾಪ್ 5 ಸ್ಪರ್ಧಿಗಳು ಅಂದುಕೊಳ್ಳುತ್ತಿರುವಾಗಲೇ, ನಿವೇದಿತಾ ಗೌಡ ಗೊಳೋ ಎಂದು ಕಣ್ಣೀರು ಸುರಿಸಿದ್ದಾರೆ. ಅದಕ್ಕೆ ಕಾರಣ ದಿವಾಕರ್ ಅವರ ಮಾತುಗಳು.!
ಹಾಡುಗಳ ಆಯ್ಕೆ ವಿಚಾರದಲ್ಲಿ ದಿವಾಕರ್ ಹಾಗೂ ನಿವೇದಿತಾ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಮಗೆ ಮೆಲೋಡಿ ಸಾಂಗ್ ಬೇಕು, ಹೀಗಾಗಿ 'ಪರವಶನಾದೆನು...' ಹಾಡನ್ನ ಆಯ್ಕೆ ಮಾಡಿ ಎಂದು ನಿವೇದಿತಾ ಕೇಳಿಕೊಂಡರೆ... ವಿಷ್ಣುವರ್ಧನ್ ಅವರ ಹಾಡು ಹಾಕಲು ದಿವಾಕರ್ ಬೇಡಿಕೆ ಇಟ್ಟರು.
ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ನಿವೇದಿತಾಗೆ 'ಮೆಂಟಲ್', 'ಡವ್ ರಾಣಿ' ಅಂತೆಲ್ಲ ದಿವಾಕರ್ ಹೇಳಿದರು. ಇದರಿಂದ ಬೇಸರಗೊಂಡ ನಿವೇದಿತಾ ಗೊಳೋ ಎಂದು ಕಣ್ಣೀರು ಸುರಿಸಿದರು.
'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?
ಕೊನೆಗೆ 'ಪರವಶನಾದೆನು...' ಹಾಡು ಆಯ್ಕೆ ಆಯ್ತು. ಇತ್ತ ವಿಷ್ಣುವರ್ಧನ್ ಅವರ 'ಪ್ರೀತಿಯೇ ನನ್ನುಸಿರು...' ಹಾಡು ಕೂಡ 'ಬಿಗ್ ಬಾಸ್' ಮನೆಯೊಳಗೆ ಅಕುಲ್ ಬಾಲಾಜಿ ಬಂದ್ಮೇಲೆ ಪ್ಲೇ ಆಯ್ತು.
'ಬಿಗ್ ಬಾಸ್' ಮನೆಯೊಳಗೆ ಕೊನೆಯ ಕ್ಷಣಗಳನ್ನು ಸಂತಸದಿಂದ ಕಳೆಯುವುದನ್ನು ಬಿಟ್ಟು ಈಗಲೂ ಕಿತ್ತಾಡುತ್ತಿರುವುದನ್ನು ನೋಡಿ ವೀಕ್ಷಕರಿಗೂ ಬೇಸರ ಆಗಿದೆ.