Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್ ಕನ್ನಡ-5': ಮೂರನೇ ವಾರ ಗೇಟ್ ಪಾಸ್ ಯಾರಿಗೆ.?
Recommended Video
ಜನಸಾಮಾನ್ಯ ಸ್ಪರ್ಧಿಗಳ ಪರ ದನಿ ಎತ್ತಿ, ಸೆಲೆಬ್ರಿಟಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಇತ್ತ 'ಮೊಟ್ಟೆ' ಆಟದಲ್ಲಿ ಸಿಕ್ಕಾಪಟ್ಟೆ ಗರಂ ಆಗಿದ್ದ ದಯಾಳ್ ಪದ್ಮನಾಭನ್ ರನ್ನೂ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಇತ್ತ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೂ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಟಾರ್ಗೆಟ್ ಆಗಿದ್ದಾರೆ.
ಜನಸಾಮಾನ್ಯರನ್ನ ಔಟ್ ಮಾಡುತ್ತಿರುವ 'ಬಿಗ್ ಬಾಸ್'ಗೆ ವೀಕ್ಷಕರ ಧಿಕ್ಕಾರ.!
ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಮೂರನೇ ವಾರ ಹೊರ ಹೋಗಲು ನಾಮಿನೇಟ್ ಆಗಿರುವ ಸದಸ್ಯರು ಯಾರು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ....
ಕ್ಯಾಪ್ಟನ್ ಆದ ಸಮೀರಾಚಾರ್ಯ
ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮೀರಾಚಾರ್ಯ ಕ್ಯಾಪ್ಟನ್ ಆದರು. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮೀರಾಚಾರ್ಯ ಸೇಫ್ ಆದರು.
ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!
ನೇರವಾಗಿ ನಾಮಿನೇಟ್ ಆಗಿರುವ ಶ್ರುತಿ, ದಿವಾಕರ್
'ಕಳಪೆ' ಕಿತ್ತಾಟದ ಪರಿಣಾಮ ಕಳೆದ ವಾರದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನೇರವಾಗಿ ನಾಮಿನೇಟ್ ಆಗಿದ್ದಾರೆ.
'ಕಳಪೆ' ಕಿತ್ತಾಟ: ಶ್ರುತಿ ಪ್ರಕಾಶ್ ಮಾಡಿದ್ದು ತಪ್ಪು ಎಂದ ಕಿಚ್ಚ ಸುದೀಪ್.!
ಡೇಂಜರ್ ಝೋನ್ ನಲ್ಲಿ ರಿಯಾಝ್
ಇದ್ದದ್ದನ್ನ ಇದ್ದ ಹಾಗೆ ಹೇಳುವ ರಿಯಾಝ್ ಈ ವಾರ ಕೂಡ ಡೇಂಜರ್ ಝೋನ್ ನಲ್ಲಿ ಇದ್ದಾರೆ. ಸಿಹಿ ಕಹಿ ಚಂದ್ರು, ಜೆಕೆ, ಆಶಿತಾ, ಅನುಪಮ ಗೌಡ, ಜಗನ್, ಕೃಷಿ ತಾಪಂಡ, ದಯಾಳ್, ಶ್ರುತಿ ಪ್ರಕಾಶ್ ಸೇರಿದಂತೆ ಒಟ್ಟು ಎಂಟು ಮಂದಿ ಮತ ಚಲಾಯಿಸಿದರಿಂದ ರಿಯಾಝ್ ನಾಮಿನೇಟ್ ಆಗಿದ್ದಾರೆ.
ಟಾರ್ಗೆಟ್ ಆದ ಜಯಶ್ರೀನಿವಾಸನ್
ಜಯಶ್ರೀನಿವಾಸನ್ ರವರನ್ನ ನಿವೇದಿತಾ ಗೌಡ, ಜೆಕೆ, ತೇಜಸ್ವಿನಿ, ಆಶಿತಾ, ಅನುಪಮಾ ಗೌಡ, ಜಗನ್, ಕೃಷಿ ತಾಪಂಡ ಹಾಗೂ ದಯಾಳ್ ನಾಮಿನೇಟ್ ಮಾಡಿದ್ದಾರೆ.
ದಯಾಳ್ ಮಿಸ್ ಆಗಲಿಲ್ಲ.!
ಜಯಶ್ರೀನಿವಾಸನ್, ರಿಯಾಝ್, ನಿವೇದಿತಾ ಗೌಡ, ಸಿಹಿ ಕಹಿ ಚಂದ್ರು, ಚಂದನ್ ಶೆಟ್ಟಿ ಸೇರಿದಂತೆ ಒಟ್ಟು ಐದು ಮಂದಿ ದಯಾಳ್ ಪದ್ಮನಾಭನ್ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಕಳುಹಿಸಲು ಇಚ್ಛಿಸಿದ್ದಾರೆ.
ನಾಮಿನೇಟ್ ಆದ ನಿವೇದಿತಾ ಗೌಡ
ಸೆಲೆಬ್ರಿಟಿಗಳ ಮಧ್ಯೆ ಸೇರಿಕೊಂಡು ಸೆಲೆಬ್ರಿಟಿಯೇ ಆಗಿರುವ ನಿವೇದಿತಾ ಗೌಡ ರನ್ನ ಚಂದನ್ ಶೆಟ್ಟಿ, ತೇಜಸ್ವಿನಿ, ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನಾಮಿನೇಟ್ ಮಾಡಿದ್ದಾರೆ.
ಮೊದಲ ಬಾರಿ ನಾಮಿನೇಟ್ ಆದ ಅನುಪಮ ಗೌಡ
'ಅಕ್ಕ' ಅನುಪಮಾ ಗೌಡ ಹೆಸರನ್ನ ಕ್ಯಾಪ್ಟನ್ ಸಮೀರಾಚಾರ್ಯ ಸೂಚಿಸಿದರಿಂದ, ಅನುಪಮಾ ಗೌಡ ನೇರವಾಗಿ ನಾಮಿನೇಟ್ ಆದರು.
ಒಂದು ವೋಟ್ ಪಡೆದವರು.!
ಜಗನ್ನಾಥ್ ಹಾಗೂ ಸಿಹಿ ಕಹಿ ಚಂದ್ರು ಕೇವಲ ಒಂದು ವೋಟ್ ಪಡೆದರಿಂದಾಗಿ ನಾಮಿನೇಷನ್ ನಿಂದ ಸೇಫ್ ಆದರು.
ಈ ವಾರ ಯಾರು ಹೊರ ಹೋಗಬೇಕು.?
ರಿಯಾಝ್, ದಯಾಳ್, ಜಯಶ್ರೀನಿವಾಸನ್, ನಿವೇದಿತಾ ಗೌಡ, ದಿವಾಕರ್, ಶ್ರುತಿ ಪ್ರಕಾಶ್, ಅನುಪಮಾ ಗೌಡ ಪೈಕಿ ಈ ವಾರ ಯಾರು ಔಟ್ ಆಗಬೇಕು.? ನಿಮ್ಮ ಮತ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.