'ಬಿಗ್ ಬಾಸ್': ಈ ವಾರ ಯಾರಿಗೂ ವೋಟ್ ಮಾಡಿ ಹಣ ವ್ಯರ್ಥ ಮಾಡಬೇಡಿ.!
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರ ಆರಂಭವಾಗಿದೆ. ಆರನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಮತಗಳ ಆಧಾರದ ಮೇಲೆ ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್, ರಿಯಾಝ್, ಸಮೀರಾಚಾರ್ಯ, ಜಯಶ್ರೀನಿವಾಸನ್, ಅನುಪಮಾ ಗೌಡ, ಜಗನ್ನಾಥ್ ಹಾಗೂ ಸಿಹಿ ಕಹಿ ಚಂದ್ರು ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಈ ಎಂಟು ಜನರ ಪೈಕಿ ಈ ವಾರ ಯಾರ ಪರವಾಗಿಯೂ ನೀವು ಎಸ್.ಎಂ.ಎಸ್ ಕಳುಹಿಸಿ ವೋಟ್ ಮಾಡಬೇಡಿ. ಅಪ್ಪಿ-ತಪ್ಪಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನ ಉಳಿಸಲು ನೀವೇನಾದರೂ ಎಸ್.ಎಂ.ಎಸ್ ಮಾಡಿದರೆ, ನಿಮ್ಮ ಹಣ ವ್ಯರ್ಥ ಆಗುವುದು ಖಚಿತ. ಮುಂದೆ ಓದಿರಿ....

ಈ ವಾರ ಯಾರೂ ಔಟ್ ಆಗಲ್ಲ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ ಯಾರೂ ಎಲಿಮಿನೇಟ್ ಆಗಲ್ಲ. ನಾಮಕಾವಸ್ತೆಗಾಗಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ ಹೊರತು ಈ ವಾರ ಯಾರೂ ಔಟ್ ಆಗುವುದಿಲ್ಲ. ಹೀಗಾಗಿ, ಯಾರ ಪರವಾಗಿಯೂ ನೀವು ಎಸ್.ಎಂ.ಎಸ್ ಮಾಡಬೇಡಿ.

ವೋಟಿಂಗ್ ಲೈನ್ ಗಳು ತೆರೆದಿಲ್ಲ.!
''ಈ ವಾರ ಎಲಿಮಿನೇಷನ್ ಇಲ್ಲದಿರುವ ಕಾರಣ ಯಾವುದೇ ವೋಟಿಂಗ್ ಲೈನ್ ಗಳು ತೆರೆದಿರುವುದಿಲ್ಲ'' ಎಂಬ ಸೂಚನೆ 'ಬಿಗ್ ಬಾಸ್' ಸಂಚಿಕೆಯಲ್ಲೇ ಹಾಕಲಾಗಿದೆ.

ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದೆ
ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಈ ವಾರ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳೆಲ್ಲ ಮಕ್ಕಳಾಗಿದ್ದಾರೆ.

'ಕಿರಿಕ್ ಕೀರ್ತಿ'
'ಕನ್ನಡ ಮೇಷ್ಟ್ರು' ಆಗಿ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ 'ಕಿರಿಕ್' ಕೀರ್ತಿ ಎಂಟ್ರಿಕೊಟ್ಟಿದ್ದಾರೆ. ಈ ವಾರ ಇನ್ನೂ ಯಾರೆಲ್ಲ ಅತಿಥಿಗಳು ಬರ್ತಾರೋ ನೋಡೋಣ.


Click it and Unblock the Notifications











