Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿಯ ಸಂದೇಶ ಬೆಂಕಿಯಲ್ಲಿ ಹೊತ್ತಿ ಉರಿದಾಗ...
'ಬಿಗ್ ಬಾಸ್' ಮನೆ ಅಂದ್ರೇನೇ ಹಾಗೆ, ಅಲ್ಲಿ ಆಡಿಸಿದಾತ ಆಡಿದಂತೆಯೇ ಆಡಬೇಕು. ಅಲ್ಲಿ ಆಡುವ ಪ್ರತಿಯೊಂದು ಆಟದ ಹಿಂದೆಯೂ ಒಂದು ಅರ್ಥ ಇರುತ್ತೆ. ಸಂಬಂಧ, ಭಾವನೆ, ಹಸಿವು... ಇವೆಲ್ಲದರ ನಿಜವಾದ ಬೆಲೆ ಗೊತ್ತಾಗುವುದು ಇಲ್ಲಿಯೇ.
ಹೊರಗಿನ ಪ್ರಪಂಚದ ಸಂಬಂಧ ಕಡಿದುಕೊಂಡು.. ಮೊಬೈಲ್, ಟಿವಿ, ಇಂಟರ್ ನೆಟ್ ಇದಾವುದೂ ಇಲ್ಲದೆ... ಕುಟುಂಬದವರ ಜೊತೆಗೂ ಸಂಪರ್ಕ ಇಲ್ಲದೆ ಒಂಬತ್ತು ವಾರ ಕಳೆದಿರುವ ಸ್ಪರ್ಧಿಗಳಿಗೆ ಕುಟುಂಬದವರ ಮೌಲ್ಯ ಎಂಥದ್ದು ಅಂತ ನಿನ್ನೆ 'ಬಿಗ್ ಬಾಸ್' ಅರ್ಥ ಮಾಡಿಸಿದರು.
ಎಲ್ಲ ಸ್ಪರ್ಧಿಗಳ ಕುಟುಂಬಗಳಿಂದ ಪ್ರೀತಿಯ ಸಂದೇಶ ಸಂಗ್ರಹಿಸಿದ್ದ 'ಬಿಗ್ ಬಾಸ್', ಕೇವಲ ಐದು ಮಂದಿಗೆ ಮಾತ್ರ ಪತ್ರವನ್ನ ಓದುವ ಅವಕಾಶ ನೀಡಿದರು.
ಮತ್ತದೇ ತಪ್ಪು ಮಾಡಿದ್ರಾ.? ಎರಡು ಪ್ಯಾಕೆಟ್ ಹಾಲು ಮುಚ್ಚಿಟ್ಟಿದ್ದು ಯಾಕೆ.?
ಮನೆಯಿಂದ ಬಂದಿರುವ ಪ್ರೀತಿಯ ಸಂದೇಶವನ್ನು ಓದಲು ಅರ್ಹವಲ್ಲದ ಸ್ಪರ್ಧಿಯ ಪತ್ರವನ್ನು ಇತರೆ ಸ್ಪರ್ಧಿಗಳು ಉರಿಯುತ್ತಿರುವ ಬೆಂಕಿಗೆ ಹಾಕಬೇಕಿತ್ತು.
ಹಾಗೆ... ನಿವೇದಿತಾ ಗೌಡ, ಜೆಕೆ, ಕೃಷಿ ತಾಪಂಡ, ಶ್ರುತಿ ಪ್ರಕಾಶ್, ಸಮೀರಾಚಾರ್ಯ ಹಾಗೂ ಜಗನ್ ಗೆ ಅವರವರ ಕುಟುಂಬದಿಂದ ಬಂದಿದ್ದ ಪತ್ರಗಳು ಬೆಂಕಿಗೆ ಆಹುತಿ ಆದವು. ಪತ್ರಗಳು ಬೆಂಕಿಗೆ ಬಿದ್ದಿದ್ದನ್ನು ಕಂಡು ಸ್ಪರ್ಧಿಗಳು ಭಾವುಕರಾದರು.
'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!
ಅನುಪಮಾ ಗೌಡ, ದಿವಾಕರ್, ಚಂದನ್ ಶೆಟ್ಟಿ, ಜಯಶ್ರೀನಿವಾಸನ್ ಹಾಗೂ ರಿಯಾಝ್ ಗೆ ಮಾತ್ರ ಪತ್ರ ಓದುವ ಅವಕಾಶ ಸಿಕ್ತು. ಭಾರದ ಹೃದಯದಿಂದಲೇ ಪತ್ರ ಓದಿದ ಸ್ಪರ್ಧಿಗಳು ಕಣ್ಣೀರಿಟ್ಟರು. ಒಟ್ನಲ್ಲಿ ದೂರ ಇದ್ದರೆ ಸಂಬಂಧದ ಬೆಲೆ ಗೊತ್ತಾಗುವುದು ಎಂದು 'ಬಿಗ್ ಬಾಸ್' ಎಲ್ಲ ಸ್ಪರ್ಧಿಗಳಿಗೂ ಅರಿವು ಮೂಡಿಸಿದರು.