twitter
    For Quick Alerts
    ALLOW NOTIFICATIONS  
    For Daily Alerts

    ಜಗನ್ ಔಟ್ ಆದರು, ಜೆಕೆ ಕಣ್ಣೀರಿಟ್ಟರು, ಅನುಪಮಾ ಮುತ್ತಿಟ್ಟರು.!

    By Harshitha
    |

    'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ ಹಾಗೂ 'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಮಾಜಿ ಪ್ರೇಮಿಗಳು ಎಂಬ ಸಂಗತಿ ಬಟಾಬಯಲಾಗಿದ್ದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿಯೇ.!

    'ಬಿಗ್ ಬಾಸ್' ಮನೆಯೊಳಗೆ ಬಂಧಿ ಆದ್ಮೇಲೆ, ಜಗನ್ ಹಾಗೂ ಅನುಪಮಾ ನಡುವೆ ವಾದ-ವಾಗ್ವಾದ ನಡೆದಿತ್ತು. ಜಗನ್ ರಿಂದ ಸ್ವಲ್ಪ ದೂರವೇ ಉಳಿದಿದ್ದ ಅನುಪಮಾ ಗೌಡ ಈಗ ಜಗನ್ ಗಾಗಿ ಕಣ್ಣೀರು ಸುರಿಸಿದ್ದಾರೆ.

    'ಬಿಗ್ ಬಾಸ್' ಮನೆಯಿಂದ ಜಗನ್ ಔಟ್ ಆದ್ಮೇಲೆ, ಕಣ್ಣೀರಿಟ್ಟ ಅನುಪಮಾ... ಜಗನ್ ರನ್ನ ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ. ಸಾಲದಕ್ಕೆ, ಜಗನ್ ಹಾಕಿದ್ದ ಟಿ-ಶರ್ಟ್ ನ ಬಿಚ್ಚಿಸಿಕೊಂಡಿದ್ದಾರೆ. ಮುಂದೆ ಓದಿರಿ...

    ಕಣ್ಣೀರಿಟ್ಟ ಅನುಪಮಾ

    ಕಣ್ಣೀರಿಟ್ಟ ಅನುಪಮಾ

    ''ಜಗನ್ ಎಲಿಮಿನೇಟ್ ಆಗಿದ್ದಾರೆ'' ಅಂತ ಸುದೀಪ್ ಘೋಷಿಸುತ್ತಿದ್ದಂತೆಯೇ, ನಟಿ ಅನುಪಮಾ ಗೌಡ ಕಣ್ಣೀರಿಟ್ಟರು. ಜಗನ್ ರನ್ನ ಅಪ್ಪಿಕೊಂಡು, ಮುತ್ತಿಟ್ಟರು. 'ಬಿಗ್ ಬಾಸ್' ಮನೆಯೊಳಗೆ ಜಗನ್ ನೆನಪಿಗಾಗಿ, ಅವರು ಹಾಕಿದ್ದ ಟಿ-ಶರ್ಟ್ ನ ಬಿಚ್ಚಿಸಿಕೊಂಡರು ನಟಿ ಅನುಪಮಾ ಗೌಡ.

    ಅಂತೂ ಸಂಯುಕ್ತ ಆಡಿದ ಮಾತು ನಿಜ ಆಗ್ಹೋಯ್ತು: ಜಗನ್ ಮನೆಗೆ ಹೋದ್ರು.!ಅಂತೂ ಸಂಯುಕ್ತ ಆಡಿದ ಮಾತು ನಿಜ ಆಗ್ಹೋಯ್ತು: ಜಗನ್ ಮನೆಗೆ ಹೋದ್ರು.!

    ಕಣ್ಣೀರು ಸುರಿಸಿದ ಜೆಕೆ

    ಕಣ್ಣೀರು ಸುರಿಸಿದ ಜೆಕೆ

    'ಬಿಗ್ ಬಾಸ್' ಮನೆಯೊಳಗೆ ಸದಾ ಹಸನ್ಮುಖಿ ಆಗಿರುವ ಜೆಕೆ, ಜಗನ್ ಔಟ್ ಆದ್ಮೇಲೆ ಭಾವುಕರಾದರು. 'ಬಿಗ್ ಬಾಸ್' ಮನೆಯೊಳಗೆ ಜೆಕೆ ಕಣ್ಣೀರು ಸುರಿಸಿರುವುದು ಇದೇ ಮೊದಲ ಬಾರಿಗೆ.

    ಜಗನ್ ಗೆ ಅಧಿಕಾರ ಸಿಗಲಿಲ್ಲ: ಈಗೆಲ್ಲವೂ ಜೆಕೆ ಪಾಲಾಯ್ತಲ್ಲ.!ಜಗನ್ ಗೆ ಅಧಿಕಾರ ಸಿಗಲಿಲ್ಲ: ಈಗೆಲ್ಲವೂ ಜೆಕೆ ಪಾಲಾಯ್ತಲ್ಲ.!

    ಭಾವುಕರಾದ ಕೃಷಿ, ಶ್ರುತಿ

    ಭಾವುಕರಾದ ಕೃಷಿ, ಶ್ರುತಿ

    ಜಗನ್ ಔಟ್ ಆಗಿದ್ದಕ್ಕೆ ಕೃಷಿ ತಾಪಂಡ ಹಾಗೂ ಶ್ರುತಿ ಪ್ರಕಾಶ್ ಕೂಡ ಕಣ್ಣೀರು ಸುರಿಸಿದರು.

    ಜನಾಭಿಪ್ರಾಯಕ್ಕೆ ಮಣಿದು 'ಬಿಗ್ ಬಾಸ್' ಮನೆಯಿಂದ ಹೊರಬಂದ 'ಜಗಳಗಂಟ' ಜಗನ್.!ಜನಾಭಿಪ್ರಾಯಕ್ಕೆ ಮಣಿದು 'ಬಿಗ್ ಬಾಸ್' ಮನೆಯಿಂದ ಹೊರಬಂದ 'ಜಗಳಗಂಟ' ಜಗನ್.!

    ಆರತಿ ಎತ್ತಿದ ಹುಡುಗಿಯರು

    ಆರತಿ ಎತ್ತಿದ ಹುಡುಗಿಯರು

    'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಡುವ ಮುನ್ನ ಹುಡುಗಿಯರೆಲ್ಲ ಆರತಿ ಎತ್ತಿ ಜಗನ್ ರನ್ನ ಕಳುಹಿಸಿಕೊಟ್ಟರು.

    ಮುಂದಿನ ವಾರ ಹೊರಗೆ ಬರ್ತಾರಂತೆ ಅನುಪಮಾ ಗೌಡ.!

    ಮುಂದಿನ ವಾರ ಹೊರಗೆ ಬರ್ತಾರಂತೆ ಅನುಪಮಾ ಗೌಡ.!

    ಮುಂದಿನ ವಾರ ಜಗನ್ ರವರ ಜನ್ಮದಿನ. ಹೀಗಾಗಿ, ''ಹುಟ್ಟುಹಬ್ಬಕ್ಕೆ ನಿನ್ನ ಮಿಸ್ ಮಾಡಿಕೊಳ್ಳುತ್ತೇನೆ. ಮುಂದಿನ ವಾರ ನಾನು ಹೊರಗೆ ಬಂದರೆ, ಒಟ್ಟಿಗೆ ಸೆಲೆಬ್ರೇಟ್ ಮಾಡೋಣ. ನಾನು ನಿನ್ನ ಹಿಂದೆಯೇ ಬರ್ತೀನಿ ಅನ್ಸುತ್ತೆ'' ಎಂದು ಜಗನ್ ಬಳಿ ಹೇಳಿಕೊಂಡಿದ್ದಾರೆ ನಟಿ ಅನುಪಮಾ ಗೌಡ

    English summary
    Bigg Boss Kannada 5: Week 9: Jayaram Karthik, Anupama Gowda, Krishi Thapanda becomes emotional because of Jaganath's elimination.
    Sunday, December 17, 2017, 13:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X