Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಂತೂ ಸಂಯುಕ್ತ ಆಡಿದ ಮಾತು ನಿಜ ಆಗ್ಹೋಯ್ತು: ಜಗನ್ ಮನೆಗೆ ಹೋದ್ರು.!
ಬೇಕು ಅಂತ ಸಂಯುಕ್ತ ಹಾಗೆ ಮಾತನಾಡಿದ್ರೋ.. ಅಥವಾ, ಬಾಯಿ ತಪ್ಪಿ ಹಾಗೆ ಹೇಳಿಬಿಟ್ರೋ.. ಇಲ್ಲ, ತಿರುಗೇಟು ನೀಡುವ ಸಲುವಾಗಿ ತಮಾಷೆಯಿಂದ ಕಾಮೆಂಟ್ ಮಾಡಿದ್ರೋ.. ಗೊತ್ತಿಲ್ಲ.! ಒಟ್ನಲ್ಲಿ, ಜಗನ್ ಬಗ್ಗೆ ನಟಿ ಸಂಯುಕ್ತ ಹೇಳಿದ ಮಾತು ನಿಜವಾಗಿದೆ.
''ನಿಮ್ಮನ್ನ ಮನೆಗೆ ಕಳುಹಿಸಿದ ಬಳಿಕವೇ ನಾನು ಹೊರಗೆ ಹೋಗುವುದು'' ಅಂತ ನಟಿ ಸಂಯುಕ್ತ ನಾಲ್ಕೈದು ದಿನಗಳ ಹಿಂದೆಯಷ್ಟೇ ಜಗನ್ ಬಳಿ ಹೇಳಿದ್ದರು.
''ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಒಂದೇ ಆಯ್ತು'' ಎಂಬಂತೆ ನಟಿ ಸಂಯುಕ್ತ ಹೇಳಿದ ಹಾಗೆ, ಜಗನ್ ಮನೆ ಕಡೆ ಮುಖ ಮಾಡಿದ್ದಾರೆ. ನಟಿ ಸಂಯುಕ್ತ ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಇರುವಾಗಲೇ, ಜಗನ್ ಎಲಿಮಿನೇಟ್ ಆಗಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಲ್ಲಿ 'ಕಿರಿಕ್' ಹುಡುಗಿ
'ಬಿಗ್ ಬಾಸ್' ಮನೆಯೊಳಗೆ ನಟಿ ಸಂಯುಕ್ತ ಹೆಗ್ಡೆ ಕಾಲಿಟ್ಟ ಕೂಡಲೆ ಎಲ್ಲರ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದರು. ಜಗನ್ ಹಾಗೂ ಆಶಿತಾ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಸಂಯುಕ್ತ, ''ನಿಮ್ಮನ್ನ ಕಳುಹಿಸಿ ಆದ್ಮೇಲೆ ನಾನು ಮನೆಗೆ ಹೋಗುವುದು ಅಂತ ಡಿಸೈಡ್ ಮಾಡಿಕೊಂಡೇ ಬಂದಿದ್ದೇನೆ'' ಎಂದು ಜಗನ್ ಗೆ ಹೇಳಿದ್ದರು.
ಜಗಳಗಂಟ
ಜಗನ್
ಗೆ
ಮಾತಲ್ಲೇ
ಗುಂಡ್
ಪಿನ್
ಚುಚ್ಚಿದ
ಸಂಯುಕ್ತ
ಹೆಗ್ಡೆ.!

ಸಂಯುಕ್ತ ಮಾತು ನಿಜವಾಗಿದೆ.!
ಸಂಯುಕ್ತ ಆಡಿದ ಮಾತಿನಂತೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಒಂಬತ್ತನೇ ವಾರ ನಟ ಜಗನ್ನಾಥ್ ಎಲಿಮಿನೇಟ್ ಆದರು.

ಸುದೀಪ್ ಹೇಳಿದ್ದೇನು.?
ಜಗನ್ ಎಲಿಮಿನೇಟ್ ಆಗಿದ್ದಾರೆ ಅಂತ ಘೋಷಿಸಿದ್ಮೇಲೆ, ಸಂಯುಕ್ತ ಗೆ ನಟ ಸುದೀಪ್ ಹೇಳಿದಿಷ್ಟು - ''ತಮಾಷೆಗೆ ಒಂದು ಮಾತು ಹೇಳಿದ್ರಿ, ನಿಮ್ಮನ್ನ ಕಳುಹಿಸಿದ ಮೇಲೆ ನಾನು ಹೊರಗೆ ಹೋಗುವುದು ಅಂತ. ಭಗವಂತ ಅಸ್ತು ಅಂದನೇನೋ ಗೊತ್ತಿಲ್ಲ. ಈ ಮಾತು ಯಾಕೆ ನೆನಪಿಸಿದೆ ಅಂದ್ರೆ, ಕೆಲವೊಮ್ಮೆ ನಾವು ಆಡಿದ ಮಾತುಗಳು ನಿಜ ಆದರೆ ಮನಸ್ಸಿಗೆ ಭಾರಿ ಬೇಸರ ಆಗುತ್ತೆ. ಜಗನ್ ಹೋಗುವುದೇ ಇಲ್ಲ ಎಂಬ ಕಾರಣಕ್ಕೆ ನೀವು ಹೇಳಿರಬಹುದು ನನಗೆ ಗೊತ್ತಿದೆ''

ಕ್ಷಮೆ ಕೇಳಿದ ಸಂಯುಕ್ತ
ಜಗನ್ ಔಟ್ ಆದ್ಮೇಲೆ, ''ಸಾರಿ ಜಗನ್, ನಾನು ತಮಾಷೆ ಮಾಡಿದ್ದು'' ಎಂದರು ನಟಿ ಸಂಯುಕ್ತ. ಸಂಯುಕ್ತ ಮಾಡಿದ ತಮಾಷೆ, ಜಗನ್ ಪಾಲಿಗೆ ಅಮಾವಾಸ್ಯೆ ಆಯ್ತೇನೋ.!