Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿಗಳ ಪೈಕಿ ಅಕ್ಷತಾ ಪಾಂಡವಪುರ ಕೂಡ ಒಬ್ಬರು. ಎಂ.ಜೆ.ರಾಕೇಶ್ ಜೊತೆಗಿನ Intense ಫ್ರೆಂಡ್ ಶಿಪ್ ನಿಂದಾಗಿ ಅಕ್ಷತಾ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದರು. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಟ್ರೋಲ್ ಆಗಿದ್ದರು. ಅಕ್ಷತಾ ಮತ್ತು ರಾಕೇಶ್ ರನ್ನ ಹೊರಗೆ ಹಾಕಿ ಅಂತ ಮೈಸೂರಿನಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.
ತಮ್ಮ ಬಗ್ಗೆ ಹೊರಗಿನ ಜಗತ್ತಿನಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ ಅನ್ನೋದು ಪಾಪ ಅಕ್ಷತಾಗೆ ಅರಿವಿರಲಿಲ್ಲ. ಅದ್ಯಾವಾಗ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಟ್ಟರೋ, ಅಕ್ಷತಾಗೆ ದೊಡ್ಡ ಆಘಾತವೇ ಆಗಿದೆ. ನೆಗೆಟಿವ್ ಕಾಮೆಂಟ್ಸ್, ಟ್ರೋಲ್ಸ್ ನೋಡಿ ಅಕ್ಷತಾ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿದ್ದಾರೆ.
ಅಸಲಿಗೆ, ಅಕ್ಷತಾ ಮತ್ತು ರಾಕೇಶ್ ಬಗ್ಗೆ ಮೊದಲು ಗಾಸಿಪ್ ಮಾಡಿದವರು ಕವಿತಾ ಗೌಡ. ಈ ಸತ್ಯ 'ಬಿಗ್ ಬಾಸ್' ಮನೆಯಲ್ಲಿದ್ದಾಗ ಅಕ್ಷತಾಗೆ ಗೊತ್ತಿರಲಿಲ್ಲ.
ಹೊರಗೆ ಬಂದ್ಮೇಲೆ, ಸಂಚಿಕೆಗಳನ್ನೆಲ್ಲಾ ನೋಡಿರುವ ಅಕ್ಷತಾಗೆ ಕವಿತಾ ಮಾಡಿದ 'ಗುಸು ಗುಸು' ಕೆಲಸ ಕಣ್ಣಿಗೆ ಬಿದ್ದಿದೆ. ಹೀಗಾಗಿ, ಕವಿತಾ ಮೇಲೆ ಅಕ್ಷತಾ ಯದ್ವಾತದ್ವಾ ಗರಂ ಆಗಿದ್ದಾರೆ. ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಸಂದರ್ಶನವೊಂದರಲ್ಲಿ ಅಕ್ಷತಾ ಗುಡುಗಿದ್ದಾರೆ. ಮುಂದೆ ಓದಿರಿ...
ಕವಿತಾ ಕಪಾಳಕ್ಕೆ ಹೊಡೆಯುವೆ
''ಕವಿತಾ ಆಚೆ ಬಂದ್ಮೇಲೆ ಕಪಾಳಕ್ಕೆ ಬಾರಿಸಬೇಕು ಅಂತಿದ್ದೇನೆ. ಎರಡನೇ ವಾರದಲ್ಲಿ ಅವಳೇ ನನ್ನ ಬಗ್ಗೆ ಗಾಸಿಪ್ ಸೃಷ್ಟಿ ಮಾಡಿರುವುದು'' ಎಂದು ಸಂದರ್ಶನವೊಂದಲ್ಲಿ ಅಕ್ಷತಾ ಪಾಂಡವಪುರ ಹೇಳಿದ್ದಾರೆ.
ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!
ಇದನ್ನೆಲ್ಲ ತೋರಿಸಿಲ್ಲ ಯಾಕೆ.?
''ಕವಿತಾ ಯಾವತ್ತೋ ಆಚೆ ಬರಬೇಕಿತ್ತು. ಯಾಕೆ ಇನ್ನೂ ಇದ್ದಾಳೆ ಅನ್ನೋದು ಗೊತ್ತಾಗುತ್ತಿಲ್ಲ. ರಾತ್ರಿ ಲೈಟ್ಸ್ ಆಫ್ ಆದ್ಮೇಲೆ, ಕವಿತಾ ಮತ್ತು ಶಶಿ ಒಂದು ಬ್ಲಾಂಕೆಟ್ ಒಳಗೆ ಕೂತು ಮಾತನಾಡುತ್ತಿದ್ದರು. ಅದು ಪ್ರೊಜೆಕ್ಟ್ ಆಗಿಲ್ಲ. ಇದೆಲ್ಲ ನನಗೆ ಬೇಸರ ಇದೆ'' ಎಂದಿದ್ದಾರೆ ಅಕ್ಷತಾ.
ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!
ತಾರತಮ್ಯ ಯಾಕೆ.?
''ಕವಿತಾಗೆ ಕೊಟ್ಟಿರುವ ಮರ್ಯಾದೆ ಅಕ್ಷತಾಗೆ ಯಾಕಿಲ್ಲ.? ಕವಿತಾ ಹೆಣ್ಣು. ಅಕ್ಷತಾ ಕೂಡ ಹೆಣ್ಣು. ಕವಿತಾ ಮತ್ತು ಶಶಿ ಬಗ್ಗೆ ಪಾಯಿಂಟ್ಸ್ ಯಾಕೆ ಬರಲಿಲ್ಲ.? ಕವಿತಾ ಮಾಡಿದ ಗಾಸಿಪ್ ಬಗ್ಗೆ ಸುದೀಪ್ ಸರ್ ನಮಗೆ ಯಾಕೆ ಕ್ಲಿಯರ್ ಮಾಡಲಿಲ್ಲ.? ಈ ಎಲ್ಲಾ ಪ್ರಶ್ನೆಗಳು ನನಗೆ ಕಾಡುತ್ತಿದೆ'' ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಅಕ್ಷತಾ.
ಇನ್ನಾದರೂ ಅಕ್ಷತಾ ಪಾಂಡವಪುರ ಎಚ್ಚೆತ್ತುಕೊಂಡರೆ ಆಕೆಗೆ ಒಳಿತು.!
ಶಶಿ-ಕವಿತಾ ಮಾತ್ರ ಗೆಲ್ಲಬಾರದು
''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಶಶಿಯನ್ನ ಪ್ರೊಜೆಕ್ಟ್ ಮಾಡಿರುವ ರೀತಿ ನೋಡಿದರೆ, ಅವನೇ ಗೆಲ್ಲಬಹುದು. ಆದ್ರೆ, ನನ್ನ ಪ್ರಕಾರ ಶಶಿ ಮತ್ತು ಕವಿತಾ ಬಿಟ್ಟು ಬೇರೆ ಯಾರಾದರೂ ಗೆಲ್ಲಲಿ'' ಅಂತಾರೆ ಅಕ್ಷತಾ ಪಾಂಡವಪುರ. [ಕೃಪೆ: ಫಸ್ಟ್ ನ್ಯೂಸ್]