Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಹಿಂಸೆ ನೀಡಿದ 'ವಿಲನ್' ಆಂಡಿ ವಿರುದ್ಧ ಪೊಲೀಸ್ ಕಂಪ್ಲೇಂಟ್.!
Recommended Video
ಮಾತಲ್ಲೇ ಎಲ್ಲಾ ಸ್ಪರ್ಧಿಗಳಿಗೂ ಕಿರಿಕಿರಿ ಮಾಡುತ್ತಿದ್ದ ಆಂಡ್ರ್ಯೂ, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್'ನಲ್ಲಿ ಅಕ್ಷರಶಃ 'ವಿಲನ್' ಆಗಿದ್ದರು. ಚಟುವಟಿಕೆಯ ನೆಪದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೀರೋಗಳ ಕಣ್ಣು, ಬಾಯಿಗೆ ಸ್ಪ್ರೇ ಮಾಡಿ ಆಂಡಿ ಕಿರುಕುಳ ನೀಡಿದ್ದರು.
''ಕಣ್ಣಿಗೆ ಸ್ಪ್ರೇ ಹಾಕಬೇಡಿ'' ಅಂತ ಯಾರು ಎಷ್ಟೇ ಹೇಳಿದರೂ, ಆಂಡಿ ಮಾತ್ರ ನಿಲ್ಲಿಸಲಿಲ್ಲ. ಗಾಯ ಆಗಿದ್ದ ಜಾಗಕ್ಕೂ ಆಂಡಿ ಸ್ಪ್ರೇ ಹಾಕಿ ಹೀರೋ ಪಾತ್ರಧಾರಿಗಳಿಗೆ ಚಿತ್ರಹಿಂಸೆ ನೀಡಿದ್ದರು. ಚಟುವಟಿಕೆಯಲ್ಲಿ ವಿಲನ್ ಆಗಿದ್ದ ಆಂಡಿ, ಅಕ್ಷರಶಃ ಕ್ರೂರಿಯಂತೆ ವರ್ತಿಸಿದ್ದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ, 'ಬಿಗ್ ಬಾಸ್' ಮಾತ್ರ ಸ್ಪ್ರೇ ಮಾಡುವುದನ್ನು ನಿಲ್ಲಿಸಲು ಆಂಡಿಗೆ ಸೂಚಿಸಲಿಲ್ಲ. ಇದನ್ನೆಲ್ಲ ಗಮನಿಸಿದ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಎಂಬ ಸಂಸ್ಥೆ ಬಿಡದಿ ಪೊಲೀಸ್ ಠಾಣೆಯಲ್ಲಿ 'ಬಿಗ್ ಬಾಸ್' ಆಯೋಜಕರು ಮತ್ತು ಆಂಡಿ ವಿರುದ್ಧ ಕಂಪ್ಲೇಂಟ್ ಕೊಟ್ಟಿದೆ. ಮುಂದೆ ಓದಿರಿ...
ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಆಟದ ನೆಪದಲ್ಲಿ ವಿಕೃತ ರೂಪ ತಾಳಿದ ಸ್ಪರ್ಧಿಗಳ ವಿರುದ್ಧ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಬಿಡದಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ದೂರುದಾರರ ಅಭಿಪ್ರಾಯ.
ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?
ಸ್ಪರ್ಧಿಗಳ ವಿರುದ್ಧ ದೂರು
ಚಿತ್ರಹಿಂಸೆ ನೀಡಿದ ಆಂಡಿ ಜೊತೆಗೆ ರಾಕೇಶ್, ರಶ್ಮಿ, ಮುರಳಿ, ನವೀನ್, ಮೇಘಶ್ರೀ ಮತ್ತು ಬಿಗ್ ಬಾಸ್ ತಾಂತ್ರಿಕ ತಂಡ, ಆಯೋಜಕರ ವಿರುದ್ಧ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ದೂರು ಕೊಟ್ಟಿದೆ. ಕಣ್ಣಿಗೆ, ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವ ಸ್ಪ್ರೇಗಳನ್ನು ಆಂಡಿ ಹೊಡೆಯುತ್ತಿದ್ದರೂ, ಅದನ್ನ 'ಬಿಗ್ ಬಾಸ್' ಆಯೋಜಕರು ತಡೆಯದ ಕಾರಣ ದೂರುದಾರರು ಕುಪಿತಗೊಂಡಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?
ಕಠಿಣ ಕ್ರಮ ಜರುಗಿಸಿ
ಪರ್ಫ್ಯೂಮ್ ಸ್ಪ್ರೇ ಸೇವಿಸಿ ಮರಣ ಹೊಂದಿರುವವರ ಕುರಿತು ವರದಿಗಳನ್ನು ಪೊಲೀಸರಿಗೆ ಸಲ್ಲಿಸಿರುವ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್, ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂತೂ ಇಂತೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಆಂಡಿ.!
ಮುಂದೇನು.?
ಕಣ್ಣು, ಮೂಗಿಗೆ ಸ್ಪ್ರೇ ಮಾಡಿದ ಆಂಡಿ ವಿರುದ್ಧ ಕಿಚ್ಚ ಸುದೀಪ್ ಕೂಡ ಕಿಡಿಕಾರಿದ್ದರು. ಇತ್ತ ಪೊಲೀಸ್ ಕಂಪ್ಲೇಂಟ್ ದಾಖಲಾಗಿರುವ ಕಾರಣ, ಆಂಡಿಯನ್ನ ಪೊಲೀಸರು ಬಂಧಿಸಿದ್ದಾರಂತೆ ಎಂಬ ಅಂತೆ-ಕಂತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪ್ರಕರಣವನ್ನ 'ಬಿಗ್ ಬಾಸ್' ಆಯೋಜಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನ ನೋಡಬೇಕು.